Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿಜಯಪುರ ಖಡಕ್ ಜೋಳದ ರೊಟ್ಟಿ!

ವಿಜಯಪುರ ಖಡಕ್ ಜೋಳದ ರೊಟ್ಟಿ!

ಖಾಜಾಮೈನುದ್ದೀನ್ ಪಟೇಲ್ಖಾಜಾಮೈನುದ್ದೀನ್ ಪಟೇಲ್22 Dec 2025 11:34 AM IST
share
ವಿಜಯಪುರ ಖಡಕ್ ಜೋಳದ ರೊಟ್ಟಿ!

ವಿಜಯಪುರ ಜಿಲ್ಲೆಯು ತನ್ನದೇ ಆದ ವಿಶಿಷ್ಟ ಮತ್ತು ಶ್ರೀಮಂತ ಆಹಾರ ಪದ್ಧತಿಯನ್ನು ಹೊಂದಿದೆ. ಈ ಪ್ರದೇಶದ ಆಹಾರವು ಸರಳ, ಪೌಷ್ಟಿಕ ಮತ್ತು ಮುಖ್ಯವಾಗಿ ಜೋಳ ಆಧಾರಿತವಾಗಿದೆ.

ದೊಡ್ಡ ದೊಡ್ಡ ವಾಣಿಜ್ಯ ನಗರಗಳಾದ ಮುಂಬೈ, ಬೆಂಗಳೂರು ಅಷ್ಟೇ ಏಕೆ ವಿದೇಶಿಗರು ಸಹ ವಿಜಯಪುರ ನೆಲದ ಜವಾರಿ ಊಟವನ್ನು ನಾಲಿಗೆ ಚಪ್ಪರಿಸಿ ತಿನ್ನುವ ಪರಂಪರೆ ಇದೆ. ಅನೇಕ ಮಹಾನಗರಗಳಲ್ಲಿಯೂ ‘ವಿಜಯಪುರ ಜೋಳದ ರೊಟ್ಟಿ ಊಟ’ ಎಂಬ ಖಾನಾವಳಿಗಳು ಇರುವುದು ವಿಜಯಪುರ ನೆಲದ ಜವಾರಿ ಊಟದ ಸಂಸ್ಕೃತಿಯ ಹಿರಿಮೆಗೆ ಸಾಕ್ಷಿ.

ಗಟ್ಟಿರೊಟ್ಟಿ, ಕೆನೆಮೊಸರು, ಶೇಂಗಾ ಹಿಂಡಿ, ಉಸಳಿ, ಸಜ್ಜೆ ರೊಟ್ಟಿ, ಗುರೆಳ್ಳು ಚಟ್ಟಿಯನ್ನು ಹಾಕಿಕೊಂಡು ರೊಟ್ಟಿಯನ್ನೇ ತಾಟನ್ನಾಗಿಸಿ ಮಾಡಿ ಈ ಸ್ವಾದ ಸವಿಯುವುದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಐಟಿ ಮುಂತಾದ ವಲಯಗಳಲ್ಲಿ ದಣಿವಾದ ಜೀವಗಳು ಈ ರೀತಿಯ ಊಟಕ್ಕೆ ಮನಸೋತು ವಿಜಯಪುರಕ್ಕೆ ಧಾವಿಸುವುದುಂಟು.

ವಿಶೇಷವಾಗಿ ಬಿಳಿಜೋಳದ ಕಣಜವಾಗಿರುವ ವಿಜಯಪುರ ಜಿಲ್ಲೆ ಗಟ್ಟಿರೊಟ್ಟಿಗೆ ಹೆಸರುವಾಸಿ. ಬಿಳಿಜೋಳದಿಂದ ರೂಪುಗೊಳ್ಳುವ ರೊಟ್ಟಿ ಎಲ್ಲ ದಿನಮಾನಗಳಲ್ಲಿಯೂ ಯೋಗ್ಯ ಆಹಾರ. ರೊಟ್ಟಿಯ ಜೊತೆಗೆ ಶೇಂಗಾ ಹಿಂಡಿ ವಿಜಯಪುರದ ಆಹಾರ ಸಂಸ್ಕೃತಿಯ ಭಾಗ, ಊಟದಲ್ಲಿ ವಿಜಯಪುರ ಜನತೆಗೆ ಶೇಂಗಾ ಹಿಂಡಿಗೆ ಅಗ್ರಸ್ಥಾನ, ಶೇಂಗಾ ಸಂಸ್ಕರಿಸಿ, ಅಗತ್ಯ ಪೂರಕ ಪದಾರ್ಥಗಳನ್ನು ಸೇರಿಸಿ ಸಿದ್ಧವಾಗುವ ಶೇಂಗಾ ಹಿಂಡಿಯ ರುಚಿಗೆ ಮನಸೋಲದವರೇ ಇಲ್ಲ..!

ಬಪ್ಪೆಕಾಯಿ ಪಲ್ಯ? :

ಅದೇ ತೆರನಾಗಿ ವಿಜಯಪುರದಲ್ಲಿ ಎಳ್ಳು ಹಚ್ಚಿ ಮಾಡುವ ಸಜ್ಜೆ ರೊಟ್ಟಿ, ಚಕ್ಕಲಿ, ಗುರೆಳ್ಳು ಚಟ್ಟಿ, ಖಾರಬ್ಯಾಳಿ, ಬದನೆಕಾಯಿ ಪಲ್ಲೆ, ಮೆಂತೆಪಲ್ಲೆ, ಸಬ್ಬಸ್ಸಿಗೆ, ನುಗ್ಗಿಕಾಯಿ, ವಟಾಣಿ, ಡಬ್ಲ್ಯು ಮೆಣಸಿನ ಕಾಯಿ, ಸಿಹಿ ಪದಾರ್ಥಗಳಲ್ಲಿ ಶೇಂಗಾ ಹೋಳಿಗೆ, ಹೂರಣದ ಹೋಳಿಗೆ ವಿಜಯಪುರ ಆಹಾರ ಸಂಸ್ಕೃತಿಯ ಪ್ರಧಾನ ಭಾಗಗಳಾಗಿವೆ. ಕೂಡಗಿ, ಹಲಗಣಿ ಭಾಗದಲ್ಲಿ ಗುಣಮಟ್ಟದ ತಾಂಬೂಲ (ಎಲೆ) ಪ್ರಸಿದ್ಧಿ. ಊಟದನಂತರ ಎಲೆ ಸೇವಿಸುವುದು ಆಹಾರ ಸಂಸ್ಕೃತಿಯ ಭಾಗ. ಉಪ್ಪಿನಕಾಯಿಯಲ್ಲಿ ಮಾವು, ನೆಲ್ಲಿಕಾಯಿ, ನಿಂಬೆ ಪ್ರಸಿದ್ಧಿ, ದಕ್ಷಿಣ ಕರ್ನಾಟಕ ಭಾಗದಲ್ಲಿ ತಯಾರಿಸಲಾಗುವ ಮಾವಿನ ಕಾಯಿ ಗೊಟ್ಟು ಈ ಭಾಗದಲ್ಲಿ ‘ಗುಳಂಬ’ ಎಂದು ಹೆಸರು ಪಡೆದುಕೊಂಡಿದೆ. ರೊಟ್ಟಿಯಲ್ಲಿ ಉಪ್ಪು, ಬೆಳ್ಳುಳ್ಳಿ ಹಾಕಿ ಸಿದ್ಧಪಡಿಸುವ ‘ಮುಟಗಿ’ ಸಹ ಈ ಭಾಗದ ವಿಶೇಷತೆ ಗಳಲ್ಲೊಂದು. ತಾಲಿಪಟ್ಟು, ಚಕ್ಕಲಿ ಸಹ ಅನೇಕ ಕಡೆಗಳಲ್ಲಿ ಪ್ರಸಿದ್ಧಿ.

ಕೊಲ್ಹಾರದ ಕೆನೆಮೊಸರು, ಮೀನು :

ಕೊಲ್ಹಾರದ ಕೆನೆಮೊಸರು ಹಾಗೂ ಮೀನಿನ ಊಟ ವಿಶ್ವಪ್ರಸಿದ್ಧಿ. ಈ ಹೆಸರು ಕೇಳುತ್ತಿದ್ದಂತೆಯೇ ಎಲ್ಲರ ಮನದಲ್ಲಿ ಬರೋದು ತರಹೇವಾರಿ ಮೀನು, ಗಡಿಗೆಯ ಕೆನೆ ಮೊಸರು. ಸಸ್ಯಹಾರಿಗಳಿಗೆ ಕೆನೆ ಮೊಸರು ಬಾಯಿಲ್ಲಿ ನೀರು ತರಿಸಿದರೆ, ಮಾಂಸಾಹಾರಿಗಳಿಗೆ ಜಲಪುಷ್ಪ (ಮೀನು) ಬಾಯಲ್ಲಿ ನೀರು ತರಿಸುತ್ತದೆ. ಅಂತೆಯೇ ಈ ಪಟ್ಟಣದ ಮೂಲಕ ಸಂಚರಿಸುವ ಅನೇಕರು ಇವುಗಳ ಸವಿ ನೋಡಿಯೇ ಮುಂದೆ ಸಾಗುತ್ತಾರೆ. ಮಾಂಸಾಹಾರಿಗಳು ಇಲ್ಲಿಗೆ ಬಂದರೆ, ‘ಏನ್ರಿ ಬೀಗ್ರ.. ಇವತ್ತ ನಮಗ ಮೀನಾ ತಿನಿಸಾಂಗಿಲ್ಲೇನ್ರೀ’ ಎಂದು ಕೇಳುವ ಪರಿಪಾಠ ರೂಢಿಯಲ್ಲಿದೆ.

ಹುಬ್ಬಳ್ಳಿ- ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬರುವ ಕೊರ್ತಿ- ಕೊಲ್ಹಾರ ಸೇತುವೆ ದಾಟಿದನಂತರ ಯುಕೆಪಿ ವೃತ್ತ ಮೀನು ಮಾರುಕಟ್ಟೆಯ ಪ್ರಸಿದ್ಧ ವ್ಯಾಪಾರಿ ಕೇಂದ್ರವಾಗಿ ಗುರುತಿಕೊಂಡಿದೆ. ಅಲ್ಲದೆ ಕೃಷ್ಣೆಯ ಉಗಮ ಸ್ಥಾನದಿಂದ ಸಮುದ್ರ ಸೇರುವವರೆಗಿನ ನದಿ ದಂಡೆಯ ಗ್ರಾಮಗಳಲ್ಲಿ ಕೆನೆ ಮೊಸರಿನ ಹಾಗೆ ಕೊಲ್ಹಾರ ಮೀನು ಪ್ರಸಿದ್ಧಿ ಗಳಿಸಿವೆ.

ಖಾರ ಮತ್ತು ಮಸಾಲೆ :

ಈ ಭಾಗದ ಅಡುಗೆಗಳು ಸ್ವಲ್ಪ ಖಾರವಾಗಿ ಮತ್ತು ಮಸಾಲೆಯುಕ್ತವಾಗಿರುತ್ತವೆ. ಒಣ ಮೆಣಸಿನಕಾಯಿ, ಬೆಳ್ಳುಳ್ಳಿ, ಮತ್ತು ಶೇಂಗಾ (ಕಡಲೆಕಾಯಿ) ಪುಡಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಬಿಜಾಪುರದಲ್ಲಿ ಪ್ರಚಲಿತದಲ್ಲಿ ರುವ ಕೆಲವು ಜನಪ್ರಿಯ ಖಾದ್ಯಗಳು ಇಲ್ಲಿವೆ:

ಜೋಳದ ಕಡಕ್ ರೊಟ್ಟಿ :

ಇದು ಬಿಜಾಪುರದ ಅತ್ಯಂತ ಹೆಮ್ಮೆಯ ಆಹಾರ. ತೆಳ್ಳಗಿನ, ಗರಿಗರಿಯಾದ ಈ ರೊಟ್ಟಿಯನ್ನು ವರ್ಷವಿಡೀ ಸಂಗ್ರಹಿಸಿಡಬಹುದು ಮತ್ತು ಇದನ್ನು ಎಲ್ಲಾ ರೀತಿಯ ಪಲ್ಯ, ಚಟ್ನಿ ಮತ್ತು ಸಾರುಗಳೊಂದಿಗೆ ಸೇವಿಸಲಾಗುತ್ತದೆ.

ಶೇಂಗಾ ಚಟ್ನಿ ಪುಡಿ (ಕಡ್ಲೆಕಾಯಿ ಚಟ್ನಿ) :

ಇದು ಪ್ರತಿ ಮನೆಯಲ್ಲೂ ಸಿಗುವಂತಹ ಪುಡಿ. ಇದನ್ನು ರೊಟ್ಟಿಗೆ ತುಪ್ಪ ಅಥವಾ ಎಣ್ಣೆ ಸವರಿ ತಿನ್ನಲಾಗುತ್ತದೆ. ಗುರೆಳ್ಳು ಪುಡಿ (ಹುಚ್ಚೆಳ್ಳು ಚಟ್ನಿ): ಕಪ್ಪು ಎಳ್ಳು ಮತ್ತು ಒಣ ಮೆಣಸಿನಕಾಯಿಯಿಂದ ಮಾಡುವ ಈ ಚಟ್ನಿ ಪುಡಿ ವಿಶಿಷ್ಟವಾದ ರುಚಿ ಮತ್ತು ಆರೋಗ್ಯ ಗುಣಗಳನ್ನು ಹೊಂದಿದೆ.

ಎಣ್ಣೆಗಾಯಿ :

ಇದು ಬಿಜಾಪುರದ ವಿಶೇಷ ಖಾದ್ಯ. ಸಣ್ಣ ಬದನೆಕಾಯಿಗಳನ್ನು ಖಾರ ಮತ್ತು ಶೇಂಗಾ ಮಸಾಲೆಯಿಂದ ತುಂಬಿಸಿ, ಎಣ್ಣೆಯಲ್ಲಿ ಬೇಯಿಸಲಾಗುತ್ತದೆ. ಇದು ರೊಟ್ಟಿಯೊಂದಿಗೆ ಅತ್ಯುತ್ತಮ ಕಾಂಬಿನೇಷನ್.

ಹುಗ್ಗಿ ಮತ್ತು ಉಪ್ಪಿಟ್ಟು :

ಬೆಳಗಿನ ಉಪಾಹಾರಕ್ಕೆ ಅಥವಾ ಹಬ್ಬದ ದಿನಗಳಲ್ಲಿ ಗೋಧಿ ಅಥವಾ ಸಜ್ಜೆ ರವೆಯಿಂದ ಮಾಡುವ ಖಾರವಾದ ಉಪ್ಪಿಟ್ಟು ಮತ್ತು ಸಿಹಿಯಾದ ಹುಗ್ಗಿ ಸಾಮಾನ್ಯವಾಗಿದೆ.

ಮಂಡಕ್ಕಿ ಒಗ್ಗರಣೆ :

ಸಂಜೆಯ ಸ್ನಾಕ್ಸ್ ಅಥವಾ ಲಘು ಉಪಾಹಾರವಾಗಿ ಮಂಡಕ್ಕಿ ಒಗ್ಗರಣೆ ಅಥವಾ ಚುರುಮುರಿ ಹೆಚ್ಚು ಜನಪ್ರಿಯವಾಗಿದೆ.

ಮಾಲ್ದಾಸಿ: ಇದು ಬಿಜಾಪುರದ ವಿಶಿಷ್ಟ ಸಿಹಿ ತಿಂಡಿ. ಕಡಕ್ ರೊಟ್ಟಿ ಪುಡಿ, ಬೆಲ್ಲ, ತುಪ್ಪ ಮತ್ತು ಏಲಕ್ಕಿ ಸೇರಿಸಿ ಇದನ್ನು ತಯಾರಿಸಲಾಗುತ್ತದೆ.

ಶಿಕನಿ (ಶೀತನಿ) :

ಹಸಿ ಜೋಳದ ಕಾಲದಲ್ಲಿ ತಯಾರಿಸುವ ಈ ಖಾದ್ಯವು ಈ ಪ್ರದೇಶದ ಋತುಮಾನದ ವಿಶೇಷತೆಯಾಗಿದೆ.

ಹಬ್ಬ ಹರಿದಿನಗಳ ವಿಶೇಷತೆ..! :

ಹಬ್ಬಗಳ ಸಮಯದಲ್ಲಿ, ವಿಶೇಷವಾಗಿ ನಾಗರ ಪಂಚಮಿ ಮತ್ತು ದೀಪಾವಳಿಯಂದು, ವಿವಿಧ ರೀತಿಯ ಸಿಹಿ ತಿನಿಸುಗಳಾದ ಕರದಂಟು, ಚಿಗಳಿ, ಮತ್ತು ಹೋಳಿಗೆಯನ್ನು ತಯಾರಿಸಲಾಗುತ್ತದೆ. ಕರದಂಟು ಬೆಲ್ಲ, ಒಣ ಹಣ್ಣುಗಳು ಮತ್ತಿತರ ಖಾದ್ಯಗಳನ್ನು ಬಳಸಿ ತಯಾರಿಸುವ ಆರೋಗ್ಯಕರ ಸಿಹಿತಿಂಡಿ. ಒಟ್ಟಾರೆಯಾಗಿ, ಬಿಜಾಪುರದ ಆಹಾರ ಪದ್ಧತಿಯು ಕೃಷಿ ಸಂಸ್ಕೃತಿಯನ್ನು ಆಧರಿಸಿದ್ದು, ಲಭ್ಯವಿರುವ ಸ್ಥಳೀಯ ಧಾನ್ಯಗಳು ಮತ್ತು ತರಕಾರಿಗಳ ಗರಿಷ್ಠ ಬಳಕೆಯನ್ನು ಮಾಡಿಕೊಳ್ಳುತ್ತದೆ. ಸಿಹಿ ತಿಂಡಿಗಳಿಗೆ ಬೆಲ್ಲ ಮತ್ತು ಕಡಲೆ ಹಿಟ್ಟನ್ನು ಬಳಸಲಾಗುತ್ತದೆ. ಉತ್ತರ ಕರ್ನಾಟಕದ ಗುಗ್ಗರಿ ಒಂದು ಸಾಂಪ್ರದಾಯಿಕ, ಪೌಷ್ಟಿಕ ಮತ್ತು ಸರಳವಾದ ಖಾದ್ಯವಾಗಿದೆ. ಇದನ್ನು ಸಾಮಾನ್ಯವಾಗಿ ಹೆಸರು ಕಾಳು ಅಥವಾ ಜೋಳದಂತಹ ಕಾಳುಗಳಿಂದ ತಯಾರಿಸಲಾಗುತ್ತದೆ ಮತ್ತು ಹಬ್ಬ ಹರಿದಿನಗಳಲ್ಲಿ ಹಾಗೂ ನಾಮಕರಣದಂತಹ ವಿಶೇಷ ಸಂದರ್ಭಗಳಲ್ಲಿ ಮಾಡುವುದುಂಟು.

share
ಖಾಜಾಮೈನುದ್ದೀನ್ ಪಟೇಲ್
ಖಾಜಾಮೈನುದ್ದೀನ್ ಪಟೇಲ್
Next Story
X