Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಾಜಕೀಯ ನಿವೃತ್ತಿಯ ಮಾತು...

ರಾಜಕೀಯ ನಿವೃತ್ತಿಯ ಮಾತು ಉಳಿಸಿಕೊಳ್ಳುತ್ತಾರೆಯೇ ಸಿ.ಎಂ. ಇಬ್ರಾಹೀಂ ?

ರಾಜ್ಯಾಧ್ಯಕ್ಷರನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಜೆಡಿಎಸ್, ಕುಮಾರಸ್ವಾಮಿ

ಆರ್. ಕುಮಾರ್ಆರ್. ಕುಮಾರ್7 Oct 2023 11:38 AM IST
share
ರಾಜಕೀಯ ನಿವೃತ್ತಿಯ ಮಾತು ಉಳಿಸಿಕೊಳ್ಳುತ್ತಾರೆಯೇ ಸಿ.ಎಂ. ಇಬ್ರಾಹೀಂ ?

‘‘ನಾನು ಬಿಜೆಪಿಯವರ ಮನೆಯಲ್ಲೂ ಊಟ ಮಾಡ್ತೀನಿ, ಜೆಡಿಎಸ್ ಜೊತೆಗೂ ಚೆನ್ನಾಗಿದ್ದೀನಿ.’’

ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುವ ಯೋಚನೆ ಮಾಡುತ್ತಿದ್ದ ಹೊತ್ತಲ್ಲಿ ಇಂತಹ ಒಂದು ಹೇಳಿಕೆಯನ್ನು ಸಿ.ಎಂ. ಇಬ್ರಾಹೀಂ ನೀಡಿದ್ದರು. ಈಗ, ಅವರು ರಾಜ್ಯಾಧ್ಯಕ್ಷರಾಗಿರುವ ಜೆಡಿಎಸ್, ಅವರೊಬ್ಬರು ಇದ್ದಾರೆ ಎಂಬುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ.

ಸ್ವತಃ ಇಬ್ರಾಹೀಂ ಅವರೇ, ‘‘ನಾಲ್ಕು ಜನ ಹೋಗಿ ಮದುವೆ ಮಾಡಿಕೊಂಡು ಬಂದಿದ್ದಾರೆ’’ ಎಂದು ಈ ಮೈತ್ರಿಯನ್ನು ಲೇವಡಿ ಮಾಡಿದ್ದೂ ಆಗಿದೆ. ಅವರಿಗೂ ಪಕ್ಷದ ಯಾವುದೇ ಬೆಳವಣಿಗೆಗೂ ಸಂಬಂಧವೇ ಇಲ್ಲದ ಹಾಗಾಗಿದೆ. ಶಿಷ್ಟಾಚಾರಕ್ಕೂ ರಾಜ್ಯಾಧ್ಯಕ್ಷರ ಬಳಿ ಕೇಳಲಿಲ್ಲ ಕುಮಾರಸ್ವಾಮಿ. ಬದಲಿಗೆ ‘‘ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ನಮಗೆ ಸಿಕ್ಕಿದ್ದೇನು?’’ ಎಂದು ಅವರಿಗೇ ತೀವ್ರ ಮುಜುಗರ ತಂದಿಟ್ಟಿದ್ದಾರೆ.

ಈಗಲೂ ಸಿ.ಎಂ. ಇಬ್ರಾಹೀಂ ಅವರಿಗೆ ಬಿಜೆಪಿಯವರ ಮನೆಯಲ್ಲಿ ಊಟ ಮಾಡಿಕೊಂಡು ಜೆಡಿಎಸ್ ಜೊತೆಗೂ ಚೆನ್ನಾಗಿರಲು ಏಕೆ ಆಗುತ್ತಿಲ್ಲ? ಕಾಂಗ್ರೆಸ್ ಬಿಡುವ ಹೊತ್ತಲ್ಲಿ ಇನ್ನೂ ನಾಲ್ಕು ವರ್ಷ ಅವಧಿಯಿದ್ದ ವಿಧಾನ ಪರಿಷತ್ ಸದಸ್ಯತ್ವವನ್ನು ಬಿಟ್ಟು ಜೆಡಿಎಸ್ ಸೇರುವಾಗ ನಿಜವಾಗಿಯೂ ಇಬ್ರಾಹೀಂ ಮನಸ್ಸಲ್ಲಿ ಏನಿತ್ತು?

ಇದು ಒಂದೆಡೆಗೆ ಇರಲಿ. ಇನ್ನೊಂದು ವಿಚಾರವನ್ನು ನೋಡೋಣ.

ವಿಧಾನಸಭೆ ಚುನಾವಣೆಗೂ ಮುನ್ನ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಅಬ್ಬರದ ಹೇಳಿಕೆಯನ್ನು ಇಬ್ರಾಹೀಂ ನೀಡಿದ್ದರು. ಆದರೆ ಕುಮಾರಸ್ವಾಮಿ ಒಂದಿಷ್ಟು ದಿನ ಮುಖವನ್ನೇ ತೋರಿಸದ ಸ್ಥಿತಿ ತಲೆದೋರುವ ಹಾಗೆ ಫಲಿತಾಂಶ ಬಂತು. ನಿವೃತ್ತಿ ಪಡೆಯುವುದಾಗಿ ಹೇಳಿದ್ದ ಇಬ್ರಾಹೀಂ ಕೂಡ ಆಮೇಲೆ ಎಲ್ಲೂ ತೆರೆಯ ಮೇಲೆ ಕಾಣಿಸಿರಲಿಲ್ಲ.

ಈಗ ಅವರು ರಾಜಕೀಯದಿಂದ ನಿವೃತ್ತಿ ಪಡೆಯುತ್ತಾರೆಯೋ ಇಲ್ಲವೋ ಬೇರೆ ಮಾತು, ಜೆಡಿಎಸ್‌ನ ತೆನೆ ಬಿಟ್ಟು, ಮತ್ತೊಮ್ಮೆ ಕಾಂಗ್ರೆಸ್ ಕೈಯನ್ನೇ ಕುಲುಕುವುದೋ, ಜೆಡಿಯು ಬಾಣವನ್ನು ಹಿಡಿಯುವುದೋ, ಎನ್‌ಸಿಪಿಯ ಗಡಿಯಾರದೆದುರು ಸಮಯ ಪರೀಕ್ಷೆ ಎದುರಿಸುವುದೋ ಎಂಬ ಗೊಂದಲದಲ್ಲಿ ಅವರೀಗ ಬಿದ್ದಿದ್ದಾರೆ.

ಅದರ ನಡುವೆಯೂ ‘‘ದೇವೇಗೌಡರು ತಂದೆ ಸಮಾನ, ಕುಮಾರಸ್ವಾಮಿ ಸೋದರ ಸಮಾನ’’ ಎಂದು ಹೇಳುತ್ತಿರುವ ಇಬ್ರಾಹೀಂ ವರಸೆಯೇನು? ನೇರ ದಿಲ್ಲಿಗೆ ಹೋಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವಾಗ ಪಕ್ಷಾಧ್ಯಕ್ಷ ಹುದ್ದೆಯಲ್ಲಿದ್ದ ತನ್ನನ್ನು ತಂದೆ ಸಮಾನರಾದ ದೇವೇಗೌಡರಾಗಲೀ ಸೋದರ ಸಮಾನರಾದ ಕುಮಾರಸ್ವಾಮಿಯವರಾಗಲೀ ಒಂದು ಮಾತೂ ಕೇಳಲಿಲ್ಲ ಎಂದು ಈಗ ಏಕೆ ಇಬ್ರಾಹೀಂ ಕೊರಗುತ್ತಿದ್ದಾರೆ?

ಒಂದಲ್ಲ ಒಂದು ದಿನ ಇದೆಲ್ಲವೂ ಹೀಗೇ ಆಗಲಿದೆ ಎಂದು ಗೊತ್ತಿಲ್ಲದೆಯೇ ಅವರೇನಾದರೂ ಜೆಡಿಎಸ್ ಸೇರಿದ್ದರಾ?

ಹಾಗೆನ್ನಿಸುವುದಿಲ್ಲ. ಎಲ್ಲವೂ ಗೊತ್ತಿದ್ದೂ ಜೆಡಿಎಸ್‌ಗೆ ಹೋದ ಅವರದ್ದು ತೀರಾ ಸಮಯ ಸಾಧಕತನ, ಅವಕಾಶವಾದಿ ರಾಜಕಾರಣ ಎನ್ನಿಸುವುದಿಲ್ಲವೆ?

ಈಗಲೂ ಸ್ಪಷ್ಟವಾಗಿ ವಿರೋಧಿಸಿ ಬಿಟ್ಟು ಬಾರದ ದ್ವಂದ್ವ ಅವರಲ್ಲಿ ಏಕಿದೆ? ಅವರು ಕರೆದಿದ್ದಾರೆ, ಇವರು ಕರೆಯುತ್ತಿದ್ದಾರೆ ಎನ್ನುತ್ತಿರುವ ಇಬ್ರಾಹೀಂ, ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಜೊತೆ ಮಾತನಾಡಿ ಮುಂದಿನ ನಿರ್ಧಾರ ಮಾಡುತ್ತೇನೆ ಎನ್ನುತ್ತಿರುವುದೇಕೆ?

ಅವರ ತಕರಾರು ಬಿಜೆಪಿ ಜೊತೆ ಮೈತ್ರಿಯ ಬಗ್ಗೆಯೇ? ಅಥವಾ ಮೈತ್ರಿ ಮಾತುಕತೆಗೆ ತನ್ನನ್ನೂ ಕರೆದುಕೊಂಡು ಹೋಗಿ ಅಮಿತ್ ಶಾ ಜೊತೆ ಕೈಕುಲುಕಲು ಅವಕಾಶ ಮಾಡಿ ಕೊಟ್ಟಿಲ್ಲ ಎಂದೇ?

ಇಬ್ರಾಹೀಂ ಅವರ ಹೇಳಿಕೆಯಿಂದ ಅದರ ಬಗ್ಗೆಯೇ ಸಂಶಯ ಮೂಡುತ್ತದೆ. ಮೈತ್ರಿ ಮಾಡಿಕೊಂಡಿದ್ದಾರೆ ಎಂಬುದಕ್ಕಿಂತ ತಮ್ಮೊಂದಿಗೆ ಚರ್ಚಿಸಲಿಲ್ಲ ಎಂಬುದಕ್ಕಾಗಿ ಇಬ್ರಾಹೀಂ ಬೇಸರಗೊಂಡಿದ್ದಾರೆಯೇ?

ರಾಜ್ಯಾಧ್ಯಕ್ಷ ಹುದ್ದೆಯಲ್ಲಿದ್ದ ತಮ್ಮೊಂದಿಗೆ ಚರ್ಚಿಸಿಲ್ಲ ಎಂಬುದು ಅವರಿಗೆ ಸ್ವಾಭಿಮಾನದ, ಘನತೆಯ ಪ್ರಶ್ನೆಯಾಗಬೇಕಿತ್ತೇ ಹೊರತು, ಅದು ಸಣ್ಣ ದನಿಯಲ್ಲಿ ತಕರಾರು ತೆಗೆಯುತ್ತ, ಅಲ್ಲಿಯೇ ಅಂಟಿಕೊಂಡಿರುವಂತಹ ವಿಚಾರವಾಗಿರಲಿಲ್ಲ.

ಹಲವು ದಶಕಗಳಿಂದ ರಾಜಕಾರಣದಲ್ಲಿದ್ದ ಹಿರಿಯ ರಾಜಕಾರಣಿಗೆ ಅಂಥದೊಂದು ಕಡೆಗಣನೆ ಅಲ್ಲಿಂದ ಒಂದು ಕ್ಷಣವೂ ತಡಮಾಡದೆ ಹೊರಬರುವುದಕ್ಕೆ ಸಾಕಿತ್ತು. ಹಾಗಿರುವಾಗಲೂ ಅವರನ್ನು ಅಲ್ಲಿಯೇ ತಡೆದು ನಿಲ್ಲಿಸಿರುವ ಸಂಗತಿಯಾದರೂ ಏನು? ನಿರ್ಧಾರ ತೆಗೆದುಕೊಳ್ಳಲು ಅಕ್ಟೋಬರ್ 16ರ ಮುಹೂರ್ತ ಇಟ್ಟುಕೊಂಡು ಇಬ್ರಾಹೀಂ ಕೂತಿರುವುದರ ಹಿನ್ನೆಲೆ ಏನು?

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಜೆಡಿಎಸ್ ಚಿಹ್ನೆ ಉಳಿಯುತ್ತದೆಯೆ ಎಂದು ಏಕೆ ಇಬ್ರಾಹೀಂ ತಲೆಕೆಡಿಸಿಕೊಂಡು ಕೂತಿದ್ದಾರೆ? ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ನಾವು ಜಾತ್ಯತೀತ ಸಿದ್ಧಾಂತ ಬಿಟ್ಟುಕೊಡಲು ಆಗುವುದಿಲ್ಲ ಎಂದು ಜೆಡಿಎಸ್ ಒಳಗಡೆ ಇಬ್ರಾಹೀಂ ಅವರೊಬ್ಬರು ಹೇಳುತ್ತಿದ್ದರೆ ಅದು ಜಾತ್ಯತೀತ ಪಕ್ಷವಾಗಿ ಉಳಿಯುತ್ತದೆಯೇ?

ಇಬ್ರಾಹೀಂ ಎಂಬ ಒಬ್ಬರು ಅಲ್ಲಿದ್ದಾರೆ ಎಂಬುದನ್ನೇ ಕುಮಾರಸ್ವಾಮಿ ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಅಂದಮೇಲೆ ಇಬ್ರಾಹೀಂ ಅವರಲ್ಲಿರುವ ಗೊಂದಲಗಳೇನು?

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಘೋಷಣೆಯಾಗಿ ಇಷ್ಟು ದಿನಗಳ ಬಳಿಕ ಈಗ ಇದ್ದಕ್ಕಿದ್ದಂತೆ ಮಾಧ್ಯಮಗಳೆದುರು ಪ್ರತ್ಯಕ್ಷರಾಗಿ, ‘‘ಕಾಂಗ್ರೆಸ್‌ನವರು ವಾಪಸ್ ಬನ್ನಿ ಅಂತಿದ್ದಾರೆ, ನಿತೀಶ್ ಕುಮಾರ್ ಕರೀತಿದ್ದಾರೆ, ಶರದ್ ಪವಾರ್ ಕೂಡ ಸಂಪರ್ಕ ಮಾಡಿದ್ದಾರೆ. ಯಾರ ಜೊತೆ ಹೋಗೋದು ಅನ್ನೋದನ್ನು ತೀರ್ಮಾನಿಸ್ತೀನಿ’’ ಎಂದೆಲ್ಲ ಹೇಳಿರುವುದರ ಮರ್ಮ ಏನು ಎಂಬ ಪ್ರಶ್ನೆಯೂ ಕಾಡುತ್ತದೆ.

ಇಲ್ಲಿ ಹಲವು ವರ್ಷಗಳಿಂದ ಪ್ರಭಾವ ಇರುವ ಪಕ್ಷಕ್ಕೇ ಹೋಗಿ ಇಬ್ರಾಹೀಂ ಮಾಡಿದ ಸಾಧನೆ ಏನು ಅನ್ನೋದು ರಾಜ್ಯದ ಜನರ ಮುಂದಿದೆ. ಹೀಗಿರುವಾಗ ರಾಜ್ಯದಲ್ಲಿ ಏನೇನೂ ಅಲ್ಲದ ಜೆಡಿಯು, ಎನ್‌ಸಿಪಿ ಇತ್ಯಾದಿ ಪಕ್ಷಗಳಿಗೆ ಸೇರಿ ಇಬ್ರಾಹೀಂ ಅವರು ಕಡಿದು ಕಟ್ಟೆ ಹಾಕುವುದೇನು ?

ಕಾಂಗ್ರೆಸ್ ಬಿಡುವ ಸೂಚನೆಗಳಿದ್ದಾಗಲೂ ಆ ಪಕ್ಷದ ನಾಯಕರು ಉಳಿಸಿಕೊಳ್ಳಲು ಸಾಕಷ್ಟು ನೋಡಿದ್ದರು. ಆಗ ಸಾಧ್ಯವಿರುವ ಹುದ್ದೆ, ಅಧಿಕಾರ, ಅವಕಾಶ ಎಲ್ಲವನ್ನೂ ನೀಡಿದರು. ಆನಂತರ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಅಲ್ಲಿಂದ ಜೆಡಿಎಸ್‌ಗೆ ಬಂದರು. ಈಗ ಅವರು ಬಂದಿದ್ದರಿಂದ ಆಗಿರುವ ಸಂಪಾದನೆ ಏನು ಎಂದು ಕುಮಾರಸ್ವಾಮಿ ಕೇಳಿದ್ದೂ ಆಯಿತು. ಜೆಡಿಎಸ್‌ಗೆ ಅಷ್ಟು ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಇಬ್ರಾಹೀಂ ಸಾಹೇಬರು.

ಇಬ್ರಾಹೀಂ ಭಾಷಣ ವೋಟು ತರುವುದಿಲ್ಲ ಎಂಬುದು ಕಾಂಗ್ರೆಸ್‌ಗೆ ಯಾವತ್ತೋ ಗೊತ್ತಾಗಿ ಹೋಗಿತ್ತು. ಈಗ ಜೆಡಿಎಸ್ ತನಗೂ ಲಾಭವಾಗಿಲ್ಲ ಎಂದುಬಿಟ್ಟಿದೆ.

ಜನರಿಂದ ಆಯ್ಕೆಯಾಗುವ ಚುನಾವಣೆಯಲ್ಲಿ ಸತತ ವೈಫಲ್ಯ ಅನುಭವಿಸಿರುವ ಇಬ್ರಾಹೀಂ, ಇನ್ನು ಇತರರನ್ನು ಹೇಗೆ ಗೆಲ್ಲಿಸಿಕೊಂಡು ಬಂದಾರು ಎಂದು ಆಡಿಕೊಳ್ಳುವವರೇ ಇದ್ದಾರೆ. ಇಷ್ಟೊಂದು ವರ್ಷ ರಾಜಕಾರಣದಲ್ಲಿದ್ದು, ಅಧಿಕಾರ ಅನುಭವಿಸಿದ ಇಬ್ರಾಹೀಂ ಅವರು ತಮ್ಮ ಘನತೆ ಉಳಿಸಿಕೊಂಡಿದ್ದರೆ ಈ ಮಾತು ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ.

ಮಾಡಿದ್ದು ಏನೂ ಇಲ್ಲವಾದರೂ, ಮುಸ್ಲಿಮ್ ಕೋಟಾದಲ್ಲಿ ಅಧಿಕಾರ ಅನುಭವಿಸಿಕೊಂಡು ಬಂದ ಇಬ್ರಾಹೀಂ ಒಬ್ಬ ನಾಯಕನಾಗಿ ಬದ್ಧತೆ ತೋರುವಲ್ಲಿ, ಘನತೆ ಉಳಿಸಿಕೊಳ್ಳುವಲ್ಲಿಯೂ ವಿಫಲರಾದರು.

ಒಂದಿಷ್ಟೂ ಹಿಂಜರಿಕೆ ಇಲ್ಲದೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತ, ತೀರಾ ಅವಕಾಶವಾದಿ ಎನ್ನಿಸಿಕೊಂಡುಬಿಟ್ಟರು. ಅಲ್ಲಿದ್ದಾಗ ಇವರನ್ನೂ, ಇಲ್ಲಿದ್ದಾಗ ಅವರನ್ನೂ ಲೇವಡಿ ಮಾಡುವ ಅವರ ಭಾಷಣಗಳು ಅವತ್ತಿಗೂ ಇವತ್ತಿಗೂ ಒಮ್ಮೆ ನಕ್ಕು ಮರೆತುಬಿಡುವಂಥ ಕಾಮೆಡಿ ಬೈಟ್‌ಗಳು ಮಾತ್ರವಾಗಿ ಉಳಿದುಬಿಟ್ಟವು.

ಜೆಡಿಎಸ್‌ಗೆ ಹೋಗಿ ಹೇಗಾದರೂ ಮಗನನ್ನು ಶಾಸಕ ಮಾಡಲು ಹೆಣಗಾಡಿದರು. ಅದಕ್ಕಾಗಿಯೇ ಅವರು ಜೆಡಿಎಸ್‌ಗೆ ಹೋಗಿದ್ದು ಎಂದು ಜನ ಮಾತಾಡಿಕೊಂಡರು. ಹುಮನಾಬಾದ್‌ನಲ್ಲಿ ಮಗ ಅಭ್ಯರ್ಥಿ ಎಂದು ಹೇಳಲು ಹೋದಾಗ ಅಲ್ಲಿನ ದರ್ಗಾದಲ್ಲಿ ಅವರು ಗೊಳೋ ಎಂದು ಅತ್ತಿದ್ದು ತೀರಾ ನಾಟಕೀಯವಾಗಿತ್ತು ಎಂದು ಎಲ್ಲರೂ ಟೀಕಿಸಿದರು. ಇಂತಹದ್ದೇ ರಾಜಕೀಯ ಜೀವನದ ಉದ್ದಕ್ಕೂ ಮಾಡಿಕೊಂಡು ಬಂದ ಇಬ್ರಾಹೀಂ ಅವರ ವರಸೆ ನೋಡಿ ನೋಡಿ ಜನರಿಗೂ ಸಾಕಾಗಿತ್ತು. ಜೆಡಿಎಸ್ ಸೋತಿತು. ಅವರ ಮಗನೂ ಹೀನಾಯವಾಗಿ ಸೋತರು. ಆ ಮೂಲಕ ಇಬ್ರಾಹೀಂ ಅವರ ಸೋಗಲಾಡಿ ರಾಜಕೀಯವನ್ನೂ ಜನ ಸೋಲಿಸಿ ಮನೆಗೆ ಕಳಿಸಿದರು.

ಅಲ್ಲಿ ಸುತ್ತಿ, ಇಲ್ಲಿ ಸುತ್ತಿ ಈಗ ಮತ್ತೊಮ್ಮೆ ಅದೇ ಗತಿ ಎಂದು ಕಾಂಗ್ರೆಸ್ ಕಡೆಗೆ ಹೋಗಲು ತೀರ್ಮಾನಿಸಿದರೂ ಅಥವಾ ನಿತೀಶ್ ಕುಮಾರ್, ಶರದ್ ಪವಾರ್ ಎಂದುಕೊಂಡು ಅಲೆದರೂ, ಇಬ್ರಾಹೀಂ ಮನಸ್ಸಲ್ಲಿರುವುದು ಮಾತ್ರ ಯಾವ ಕಡೆ ತಿರುಗಿದರೆ ಕುರ್ಚಿ ಸಿಕ್ಕೀತು ಎಂಬ ಲೆಕ್ಕಾಚಾರ ಮಾತ್ರ.

ಗಾಂಭೀರ್ಯ ಉಳಿಸಿಕೊಂಡಿದ್ದರೆ, ರಾಜಕೀಯ ಬದ್ಧತೆ ಇದ್ದಿದ್ದರೆ ದೇಶದ ಒಬ್ಬ ಪ್ರಮುಖ ಲೀಡರ್ ಆಗಿ ನಿಲ್ಲಬಲ್ಲವರಾಗಿದ್ದ ಇಬ್ರಾಹೀಂ ಈಗಿನ ಹಂತದಲ್ಲಂತೂ ಯಾವುದೇ ಬಂಡವಾಳವಿಲ್ಲದೆ ತೀರಾ ಚೌಕಾಸಿಗೆ ಇಳಿದವರ ಹಾಗೆ ಕಾಣುತ್ತಿರುವುದು ನಿಜಕ್ಕೂ ನೋವಿನ ಸಂಗತಿ.

ಕುಮಾರಸ್ವಾಮಿ ಸಿಎಂ ಆಗದಿದ್ದರೆ ತಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಅವರೇ ಹೇಳಿರುವ ಮಾತನ್ನಾದರೂ ಅವರು ಉಳಿಸಿಕೊಳ್ಳುತ್ತಾರೆಯೇ ಎಂದು ಈಗ ರಾಜ್ಯದ ಜನ ಕೇಳುತ್ತಾ ಇದ್ದಾರೆ.

share
ಆರ್. ಕುಮಾರ್
ಆರ್. ಕುಮಾರ್
Next Story
X