ಯಾದಗಿರಿ: ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಜಕ ರಕ್ಷಣಾ ಸೇನೆ ಮನವಿ

ಸುರಪುರ: ನಗರದಲ್ಲಿ ಸಾಮೂಹಿಕ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡುವಂತೆ ಜಯ ಕರ್ನಾಟಕ ರಕ್ಷಣಾ ಸೇನೆ ಮುಖಂಡರು ನಗರಸಭೆ ಪೌರಾಯುಕ್ತರಿಗೆ ಒತ್ತಾಯಿಸಿದ್ದಾರೆ.
ನಗರಸಭೆ ಮುಂದೆ ಸೇನೆಯ ಅನೇಕ ಮುಖಂಡರು ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ,ನಗರದ ಅನೇಕ ಕಡೆಗಳಲ್ಲಿ ಸ್ಮಶಾನದ ತೊಂದರೆಯಿದ್ದು ಇದರಿಂದ ಶವ ಸಂಸ್ಕಾರಕ್ಕೆ ತುಂಬಾ ತೊಂದರೆ ಇದೆ, ಆದ್ದರಿಂದ ನಗರದಲ್ಲಿ ವಿದ್ಯುತ್ ಚಿತಾಗಾರವನ್ನು ಆರಂಭಿಸುವಂತೆ ಆಗ್ರಹಿಸಿದರು. ಅಲ್ಲದೆ ಶವಗಳನ್ನು ಸಂಸ್ಕಾರಕ್ಕೆ ಸಾಗಿಸಲು ಶ್ರದ್ಧಾಂಜಲಿ ವಾಹನವನ್ನು ಆರಂಭಿಸುವಂತೆ ಹಾಗೂ ಶವಗಳನ್ನು ಇರಿಸಲು ಶವ ಸಂಸ್ಕರಣ ಪೆಟ್ಟಿಗೆಯನ್ನು ನಗರಸಭೆಯಿಂದ ಖರೀದಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಮಾತನಾಡಿ, ತಮ್ಮ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಸಂಘಟನೆ ತಾಲೂಕ ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರ,ಕಾರ್ಯಾಧ್ಯಕ್ಷ ಶಿವರಾಜ ವಗ್ಗಾರ್, ನಗರ ಘಟಕದ ಅಧ್ಯಕ್ಷ ಶಿವಕುಮಾರ ಗಾಜಲದಿನ್ನಿ,ಆಟೋ ಚಾಲಕರ ಘಟಕದ ಅದ್ಯಕ್ಷ ಹನುಮಂತ ಭಂಡಾರಿ,ಯುವ ಘಟಕದ ಅಧ್ಯಕ್ಷ ರಂಗಪ್ಪ ರುಕ್ಮಾಪುರ,ಉಪಾಧ್ಯಕ್ಷ ವಿರೇಶ ರತ್ತಾಳ,ಕಾರ್ಯದರ್ಶಿ ಸಿದ್ದು ತುಮಕೂರ, ಸಿದ್ದು ಮಡಿವಾಳ, ಮಲ್ಲಪ್ಪ ಟರ್ಕಿ,ನಾಗರಾಜ ನಂಬಾ,ರಾಜು ಕೃಷ್ಣಾಪುರ ಮತ್ತಿತರರು ಭಾಗವಹಿಸಿದ್ದರು.