ಯಾದಗಿರಿ: ಸುರಪುರ ತಾಲೂಕು ವೈದ್ಯಾಧಿಕಾರಿ ಡಾ. ಆದ್ವಿ. ನಾಯಕ ಲೋಕಾ ಬಲೆಗೆ

ಯಾದಗಿರಿ: ಸುರಪುರ ತಾಲೂಕು ವೈದ್ಯಾಧಿಕಾರಿಯೊಬ್ಬರು ಕೇಶವಮೂರ್ತಿ ಬಲೆಗೆ ಬಿದ್ದಿದ್ದು ಅವರಿಗೆ ಸಂಬಂಧಿಸಿದ ಕಲಬುರಗಿ ನಿವಾಸ ಸೇರೆ ಐದಕ್ಕೂ ಹೆಚ್ಚು ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಡಾ. ಆದ್ವಿ ನಾಯಕ ಅವರು ಸೇವೆ ಸಲ್ಲಿಸುತ್ತಿರುವ ಟಿಎಚ್ಒ ಕಚೇರಿ, ಅದಿತಿ ಹೊಟೇಲ್, ಪೆಟ್ರೋಲ್ ಬಂಕ್, ಖಾಸಗಿ ಆಸ್ಪತ್ರೆ, ಕಲಬುರಗಿಯಲ್ಲಿನ ನಿವಾಸ ಸೇರಿ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ತನಿಖೆ ನಡೆಸಿದ್ದಾರೆ.
ಆದಾಯ ಮೀರಿ ಆಸ್ತಿ ಗಳಿಕೆ ಮಾಹಿತಿ ಹಿನ್ನೆಲೆ ಕೃಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಪೊಲೀಸರು. ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್. ಇನಾಂದಾರ ಅವರ ನೇತೃತ್ವದ ತಂಡ ಕಾರ್ಯಾಚರಣೆಯನ್ನು ನಡೆಸಿದೆ.
Next Story