ಯಾದಗಿರಿ | ಟಿಎಪಿಎಂಸಿ ಜೆಡಿಎಸ್ ತೆಕ್ಕೆಗೆ, ಕಾರ್ಯಕರ್ತರಲ್ಲಿ ಸಂಭ್ರಮ

ಯಾದಗಿರಿ: ತಾಲೂಕಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಟಿಎಪಿಎಂಸಿ ಅಧ್ಯಕ್ಷರಾಗಿ ಹಣಮಂತ ಅಕ್ಕಿ ಬಂದಳ್ಳಿ ಹಾಗೂ ಉಪಾಧ್ಯಕ್ಷರಾಗಿ ಬಸಣ್ಣಗೌಡ ಮೊಗದಂಪೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಪವನ ಕುಮಾರ ಅವರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಹೆಸರನ್ನು ಘೋಷಿಸಿದರು. ಈ ಮೂಲಕ ಟಿಎಪಿಎಂಸಿ ಜೆಡಿಎಸ್ ತೆಕ್ಕಗೆ ಸೇರ್ಪಡೆಯಾಗಿದ್ದು, ಪಕ್ಷದ ಪಾರುಪತ್ಯ ಮತ್ತಷ್ಟು ಬಲಗೊಂಡಿದೆ.
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಬೋಜಣ್ಣಗೌಡ, ಶರಣಗೌಡ ಮಾಲಿ ಪಾಟೀಲ್ (ಯಲ್ಹೇರಿ), ಈಶ್ವರಮ್ಮ ಗುರುಮಿಠಕಲ್, ಮಹಾದೇವಪ್ಪ ಚಿಂತನಹಳ್ಳಿ, ರವೀಂದ್ರರೆಡ್ಡಿ ಗೂಂಜನೂರ, ಚಂದ್ರಕಲಾ ಅಯ್ಯಣ್ಣಗೌಡ ಕ್ಯಾಸಪನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ನೇತೃತ್ವದ ತಂಡವು ಸಂಘದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಪಕ್ಷದ ಕಟ್ಟಕಡೆಯ ಕಾರ್ಯಕರ್ತರಿಗೂ ಅವಕಾಶ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂಬುದನ್ನು ಈ ಗೆಲುವು ತೋರಿಸಿದೆ.
ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದ ಬಳಿಕ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಂತರ, ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಶಾಸಕರ ಸಹೋದರ ಮಲ್ಲಿಕಾರ್ಜುನರಡ್ಡಿ ಕಂದಕೂರ್ ಅವರನ್ನು ಭೇಟಿಯಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಲಕ್ಷಮಾರಡ್ಡಿ ಅನಪುರ್, ಚನ್ನಪ್ಪಗೌಡ ಅನಪೂರ, ನಾಗರತ್ನ ಅನಪುರ್, ರಾಮಣ್ಣ ಕೋಟಗೇರಾ, ವಿಶ್ವನಾಥ ಶಿರವಾರ, ನರಸಪ್ಪ ಕವಡೆ, ಈಶ್ವರ ನಾಯಕ, ಈಶಪ್ಪ ರ್ಯಾಕಾ, ಅಂಬರೀಶಗೌಡ ಬಂದಳ್ಳಿ, ಮಲ್ಲಿಕಾರ್ಜುನ ಅರುಣಿ, ಶರಣು ಆವಂಟಿ, ಶರಣಗೌಡ ಚಾಮನಳ್ಳಿ, ಸಿದ್ದಪ್ಪ ಹೋರುಂಚಾ ಸೇರಿದಂತೆ ಅನೇಕರು ಹಾಜರಿದ್ದರು.
ಪ್ರತಿಭಾರಿ ಅವಕಾಶ ಸಿಕ್ಕಾಗಲೆಲ್ಲಾ ನಮ್ಮ ನಾಯಕರು ಕಟ್ಟಕಡೆಯ ಕಾರ್ಯಕರ್ತರಿಗೆ ಅಧಿಕಾರ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಜೆಡಿಎಸ್ನಲ್ಲಿ ತಾಳ್ಮೆಯಿಂದ ಹೋರಾಡಿದ ನೈಜ ಕಾರ್ಯಕರ್ತರೇ ಶಕ್ತಿ ಪಡೆಯುತ್ತಾರೆ.
-ಸುಭಾಶ್ಚಂದ್ರ ಕಟಕಟಿ, ಜೆಡಿಎಸ್ ಜಿಲ್ಲಾಧ್ಯಕ್ಷ







