ಕೂಲಿ ಸಮಾಜಕ್ಕೊಂದು ನ್ಯಾಯ, ತಮಗೊಂದು ನ್ಯಾಯನಾ?: ಸಚಿವ ಪ್ರಿಯಾಂಕ್ ಖರ್ಗೆಗೆ ಕಟಕಟಿ ಪ್ರಶ್ನೆ

ಯಾದಗಿರಿ: ಇತ್ತೀಚೆಗೆ ಚಿತ್ತಾಪೂರ ಮತಕ್ಷೇತ್ರದ ಮುತ್ತಗಾ ಗ್ರಾಮದಲ್ಲಿ ಕೂಲಿ ಸಮಾಜದ ಮಹಾ ಶರಣ, ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ಅಪಮಾನ ಮಾಡಿದವರನ್ನು ಬಂಧಿಸುವಂತೆ ಹಲವು ಬಾರಿ ಒತ್ತಾಯ ಮಾಡಿದರೂ ಯಾವುದೇ ಕ್ರಮಕೈಗೊಳ್ಳದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ತನ್ನನ್ನು ಪ್ರಶ್ನಿಸಿದ ವ್ಯಕ್ತಿಯನ್ನು ಕೆಲವೇ ದಿನಗಳಲ್ಲಿ ಬಂಧನ ಮಾಡಿಸಿದ್ದೀರಿ. ಕೂಲಿ ಸಮಾಜಕ್ಕೊಂದು ನ್ಯಾಯ, ತಮಗೊಂದು ನ್ಯಾಯವೇ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಆರೆಸ್ಸೆಸ್ ಬಗ್ಗೆ ಹೇಳಿಕೆ ನೀಡಿ ರಾಜಕೀಯ ಪ್ರಚಾರ ಮಾಡಿಕೊಂಡು ತಾವು ಆರೆಸ್ಸೆಸ್ ಬೆಂಬಲಿಗರೆಂದುಕೊಂಡವರನ್ನು ಬಂಧಿಸುವ ಪ್ರಯತ್ನ ಮಾಡಿದ್ದೀರಿ. ಆದರೆ ತಮ್ಮ ಸ್ವಕ್ಷೇತ್ರದಲ್ಲಿ ಗಂಗಾಮತ ಕೂಲಿ ಸಮಾಜದ ಶರಣರ ಅಪಮಾನ ಮಾಡಿದವರನ್ನು ಬಂಧಿಸುವಲ್ಲಿ ಯಾವ ಕ್ರಮಕೈಗೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಗೂಗಲ್ನ ಎಐ ಸಂಸ್ಥೆ ಆಂದ್ರ ಪಾಲಾಗಿದೆ, ಅಲ್ಲಿನ ಸಚಿವರು ಕೆಲಸದಲ್ಲಿ ಸೈ ಎನಿಸಿಕೊಂಡರೆ ತಾವುಗಳು ಪ್ರಚಾರದಲ್ಲಿ ಸೈ ಎನಿಸಿಕೊಂಡಿದ್ದೀರಿ ಎಂದು ಟೀಕಿಸಿದರು.







