ಯಾದಗಿರಿ | ಸಹಕಾರ ಸಂಘದ ನಿರ್ದೇಶಕ ಮಲ್ಲಿಕಾರ್ಜುನರೆಡ್ಡಿಗೆ ಸನ್ಮಾನ

ಸುರಪುರ : ಇಲ್ಲಿಯ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ನಡೆದ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಜಯಗಳಿಸಿದ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ಅವರಿಗೆ ಅಮ್ಮಾಪುರದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಯಾದವ್ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ನದಿಮುಲ್ಲಾ,ನಿವೃತ್ತ ಮುಖ್ಯಗುರು ಚಂದಪ್ಪ ಯಾದವ್, ಮುಖಂಡರಾದ ಶರಣಪ್ಪ ಸಾಹುಕಾರ ಕಂಗಳ,ಭೀಮಣ್ಣ ಪ್ಯಾಟಿ, ರವಿಕುಮಾರ ಶೆಟ್ಟಿ, ಹಣಮಂತ ಹೊಸಮನಿ, ರಾಚಪ್ಪ ಮಂಟೆ, ಆನಂದಸ್ವಾಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Next Story





