YADAGIRI: ಸುರಪುರದಲ್ಲಿ ಸರಕಾರಿ ಬಸ್ ಹರಿದು ಎರಡು ವರ್ಷದ ಮಗು ಮೃತ್ಯು

ಯಾದಗಿರಿ: ಯಾದಗಿರಿ: ಕೆಎಸ್ಸಾರ್ಟಿಸಿ ಬಸ್ ಹರಿದು ಎರಡು ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸುರಪುರ ತಾಲೂಕಿನ ಮಂಗಳೂರು ಗ್ರಾಮದಲ್ಲಿಂದು ಮಧ್ಯಾಹ್ನ 11:40 ರ ಸುಮಾರಿಗೆ ಸಂಭವಿಸಿದೆ.
ಮೃತ ಮಗುವನ್ನು ಪರಸಪ್ಪ ಹುಣಸ್ಯಾಳ ಎಂಬವರ ಪುತ್ರಿ ಲಕ್ಷ್ಮೀ ಎಂದು ಗುರುತಿಸಲಾಗಿದೆ.
ಬಸ್ ನಿಲ್ದಾಣದ ಪಕ್ಕದಲ್ಲೇ ಪರಸಪ್ಪರ ಮನೆಯಿದ್ದು, ಅಜ್ಜಿ ಮನೆಯಂಗಳದಲ್ಲಿ ಮಗುವನ್ನು ಆಟವಾಡಿಸುತ್ತಾ ಕುಳಿತಿದ್ದರು. ಈ ಮಧ್ಯೆ ಅಜ್ಜಿ ಕಣ್ತಪ್ಪಿಸಿ ಮಗು ಬಸ್ ನಿಲ್ದಾಣ ಕಡೆಗೆ ಹೋಗಿದೆ. ಅದೇ ವೇಳೆ ನಿಲ್ದಾಣಕ್ಕೆ ಬಂದು ನಿಲುಗಡೆಯಾಗುತ್ತಿದ್ದ ಬಸ್ಸಿನ ಚಕ್ರದಡಿಗೆ ಸಿಲುಕಿ, ಸ್ಥಳದಲ್ಲೇ ಕೊನೆಯುಸಿರೆಳೆದಿದೆ ಎಂದು ತಿಳಿದು ಬಂದಿದೆ
ಈ ಕುರಿತು ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





