ಯಾದಗಿರಿ | ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆ ಮಾಡಲು ಒಗ್ಗಟ್ಟಾಗಿ ಕೆಲಸ ಮಾಡಿ : ಬಿ.ಎನ್.ವಿಶ್ವನಾಥ ನಾಯಕ

ಯಾದಗಿರಿ : ನಾಡು-ನುಡಿ ನೆಲ-ಜಲ ರಕ್ಷಣೆ ಮಾಡಲು ಹೋರಾಟ ಮಾಡಿ, ಜಯ ಕರ್ನಾಟಕ ಸಂಘಟನೆ ಬಲಪಡಿಸುವಂತೆ ಜಿಲ್ಲಾಧ್ಯಕ್ಷ ಬಿ.ಎನ್.ವಿಶ್ವನಾಥ ನಾಯಕ ಕರೆ ನೀಡಿದರು.
ವಡಗೇರಿ ಪಟ್ಟಣದಲ್ಲಿ ಜರುಗಿದ ಜಿಲ್ಲಾ ಸಮಿತಿ ಸಭೆಯಲ್ಲಿ ವಡಗೇರಿ ತಾಲ್ಲೂಕಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಹೊಸದಾಗಿ ರಚನೆಯಾದ ತಾಲ್ಲೂಕಿನಲ್ಲಿ ಹತ್ತು ಹಲವು ಜ್ವಲಸಂತ ಸಮಸ್ಯೆಗಳಿದ್ದು, ಅವುಗಳ ನಿವಾರಣೆಗೆ ಹೋರಾಟ ರೂಪಿಸಬೇಕು ಮತ್ತು ತಂಡವನ್ನು ರೂಪಿಸಿಕೊಂಡು ಸಂಘಟಿತ ಹೋರಾಟ ನಡೆಸುವಂತೆ ತಿಳಿಸಿದರು.
ಅತ್ಯಂತ ಹಿಂದುಳಿದ ತಾಲ್ಲೂಕು ಆಗಿರುವ ವಡಗೇರಿಯಲ್ಲಿ ಸಂಘಟಿತ ಹೋರಾಟದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಂಘಟನೆಯ ಧ್ಯೆಯೋದ್ದೇಶಗಳನ್ನು ತಿಳಿಸಿ ಪ್ರಮಾಣಿಕ ಪ್ರಯತ್ನ ಮಾಡಿದಲ್ಲಿ ಫಲಿತಾಂಶ ಇದ್ದೇ ಇರುತ್ತೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ತಾಲ್ಲೂಕು ಅಧ್ಯಕ್ಷ ಭೀಮಣ್ಣ ಕರೆಪ್ಪ ಬುದಿನಾಳ, ಸಹ ಕಾರ್ಯದರ್ಶಿಯಾಗಿ ನೇಮಕವಾದ ಶರಣಪ್ಪ ಹೈಯಾಳಪ್ಪ ಕುರಿಕಳ್ಳಿ ಇವರಿಗೆ ಪ್ರಮಾಣ ಪತ್ರವನ್ನು ಜಿಲ್ಲಾಧ್ಯಕ್ಷ ಬಿ.ಎನ್.ವಿಶ್ವನಾಥ ನಾಯುಕ ವಿತರಿಸಿದರು.
ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ಶಿವರಾಜ ಗುತ್ತೇದಾರ, ವಿಶ್ವಾರಾಧ್ಯ ಹುಲಕಲ್, ನವಾಜ ಖಾದ್ರಿ, ಅಮೀರ್ ಖಾನ್, ಅಬ್ದುಲ್ ಕತ್ತಾರಿ, ಬಸಣ್ಣಗೌಡ ಜಡಿ, ಬಸವರಾಜ ಡೌನ್, ಶರಣು ನಾಯಕ ಇಟಗಿ, ರಾಮಣ್ಣ ನಾಯಕ, ದೇವು ಜಡಿ, ಮರೆಪ್ಪ ಬಾಡದ, ಸಿದ್ದು ಜಡಿ, ರವಿ ನಸಲ್ವಾಯಿ, ಮಲ್ಲಪ್ಪ ಕಾಡಂನೋರ್, ನಿಂಗಣ್ಣ ಜಡಿ, ಪೋಲಪ್ಪ ಹಿರಿಮೇಟಿ, ಜಲಾಲ್ ಸಾಬ ಕೋನಳ್ಳಿ, ಮಾಳಿಂಗರಾಯ ಕೋನಳ್ಳಿ, ಮಲ್ಲಪ್ಪ, ಸಂತೋಷ ಬೊಜ್ಜಿ ವಡಗೇರಿ, ಶರಬು ಕುರಿ ಇನ್ನಿತರರು ಇದ್ದರು.







