ಯಾದಗಿರಿ | ಅಹಿಂದ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮೌಲಾಲಿ ಅನಪೂರ ರಾಜೀನಾಮೆ

ಯಾದಗಿರಿ : ಜಿಲ್ಲೆಯಲ್ಲಿ ಅಹಿಂದ ಸಂಘಟನೆಯನ್ನು ಕಟ್ಟಿ ಎಲ್ಲಾ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸುವ ಮೂಲಕ ಜಿಲ್ಲೆಯಲ್ಲಿ ಅವರದ್ದೇಯಾದ ಒಂದು ಬಳಗ ಕಟ್ಟಿಕೊಂಡು ಜಿಲ್ಲೆಯ ಜನರಿಗೆ ರಾಜಕೀಯ ಪರಿವರ್ತನೆ ಮೂಡಿಸುತ್ತಿದ ಮೌಲಾಲಿ ಅನಪೂರ ಅವರು ಅಹಿಂದ ಯಾದಗಿರಿ ಜಿಲ್ಲಾ ಘಟಕದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವ ಅವರು, ನಾನು ಯಾದಗಿರಿ ಜಿಲ್ಲಾ ಅಹಿಂದ ಘಟಕದ ಅಧ್ಯಕ್ಷನಾಗಿ ಕಳೆದ ಹಲವಾರು ವರ್ಷಗಳಿಂದ ಅಹಿಂದ ಸಮುದಾಯಗಳ ಸೇವೆಗೈದಿದ್ದೇನೆ. ಆದರೆ, ಈಗ ನನ್ನ ವೈಯಕ್ತಿಕ ಕಾರಣಗಳಿಂದ ಮತ್ತು ಕುಟುಂಬದ ಕೆಲವು ಹೆಚ್ಚುವರಿ ಜವಾಬ್ದಾರಿಗಳಿಂದಾಗಿ, ಸಮಾಜ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ"ಯನ್ನು ನೀಡಿರುತ್ತನೇ ತಾವುಗಳು, ಈ ನನ್ನ ರಾಜೀನಾಮೆ ಪತ್ರವನ್ನು ಅಂಗೀಕರಿಸಬೇಕೆಂದು ಅಹಿಂದ ಘಟಕದ ಗೌರವಾಧ್ಯಕ್ಷರಿಗೆ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ನಾನು ಅಧ್ಯಕ್ಷನಾದ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದವರಿಗೆ, ಸಹಕಾರ ನೀಡಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ತಿಳಿಸಿದ್ದಾರೆ.