×
Ad

ಉತ್ತರಾಖಂಡ: ನದಿಗೆ ಉರುಳಿದ ಟೆಂಪೋ ಟ್ರಾವಲರ್; 10 ಮಂದಿ ಬಲಿ

Update: 2024-06-15 16:59 IST

Photo: PTI

ಹೊಸದಿಲ್ಲಿ: ಉತ್ತರಾಖಂಡದ ರುದ್ರಪ್ರಯಾಗ್‌ ಜಿಲ್ಲೆಯ ರೈತೋಲಿ ಸಮೀಪದ ರಿಷಿಕೇಶ್-ಬದರಿನಾಥ್‌ ಹೆದ್ದಾರಿಯಲ್ಲಿ ಇಂದು 23 ಪ್ರಯಾಣಿಕರಿದ್ದ ಟೆಂಪೋ ಟ್ರಾವೆಲರ್‌ ಒಂದು ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಅಲಕನಂದಾ ನದಿಗೆ ಬಿದ್ದ ಪರಿಣಾಮ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ.

ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಪೊಲೀಸರು ಪರಿಹಾರ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಅಪಘಾತ ನಡೆಯುವಾಗ ರಸ್ತೆಬದಿಯಿದ್ದ ಕೆಲ ಜನರೂ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ರಿಷಿಕೇಶದ ಎಐಐಎಂಎಸ್‌ಗೆ ಏರ್‌ಲಿಫ್ಟ್‌ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News