×
Ad

ಸಂಜಯ್ ಸಿಂಗ್ ಅವರ ಮೂವರು ಸಹವರ್ತಿಗಳಿಗೆ ಈ.ಡಿ. ಸಮನ್ಸ್

Update: 2023-10-06 23:23 IST

ಹೊಸದಿಲ್ಲಿ : ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರ ಮೂವರು ಸಹವರ್ತಿಗಳಾದ ವಿವೇಕ್ ತ್ಯಾಗಿ, ಸರ್ವೇಶ್ ಮಿಶ್ರಾ ಹಾಗೂ ಕನ್ವರ್ಬೀರ್ ಸಿಂಗ್ ಗೆ ಸಮನ್ಸ್ ಜಾರಿ ಮಾಡಿದೆ.

ತ್ಯಾಗಿ, ಮಿಶ್ರಾ ಹಾಗೂ ಸಿಂಗ್ಗೆ ಸಮನ್ಸ್ ನೀಡಲಾಗಿದೆ. ಮಿಶ್ರಾ ಅವರು ಜಾರಿ ನಿರ್ದೇಶನಾಲಯದ ಮುಂದೆ ಶುಕ್ರವಾರ ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅ. 10ರ ವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಸಂಜಯ್ ಸಿಂಗ್ ಎದುರು ಈ ಮೂವರ ವಿಚಾರಣೆಯನ್ನು ತನಿಖಾ ಸಂಸ್ಥೆ ನಡೆಸಲಿದೆ.

ಸಿಂಗ್ ಅವರನ್ನು ದಿಲ್ಲಿಯಲ್ಲಿರುವ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಿನವಿಡೀ ವಿಚಾರಣೆ ನಡೆಸಿದ ಬಳಿಕ ಬುಧವಾರ ಬಂಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News