ಚೆನ್ನೈ ಓಪನ್: ರಾಮ್‌ಗೆ ಸೋಲು, ವಾವ್ರಿಂಕ ಸೆಮಿಗೆ

Update: 2016-01-08 18:57 GMT

ಚೆನ್ನೈ, ಜ.8: ಭಾರತದ ಯುವ ಆಟಗಾರ ರಾಮ್‌ಕುಮಾರ್ ರಾಮನಾಥನ್ ವೀರೋಚಿತ ಸೋಲುಣ್ಣುವ ಮೂಲಕ ಚೆನ್ನೈ ಓಪನ್‌ನಿಂದ ಹೊರ ನಡೆದಿದ್ದಾರೆ. ಹಾಲಿ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕ ಸೆಮಿಫೈನಲ್‌ಗೆ ತಲುಪಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಳೀಯ ಆಟಗಾರ ರಾಮ್‌ಕುಮಾರ್ ವಿಶ್ವದ ನಂ.45ನೆ ಆಟಗಾರ ಅಲ್‌ಜಾಝ್ ಬೆಡೆನೆ ವಿರುದ್ಧ 7-6(5), 4-6, 3-6 ಸೆಟ್‌ಗಳಿಂದ ಸೋತಿದ್ದಾರೆ. ದಿನದ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸ್ವಿಸ್‌ನ ವಾವ್ರಿಂಕ ಸ್ಪೇನ್‌ನ ಗುಲೆರ್ಮೊ ಗಾರ್ಸಿಯ ಲೊಪೆಝ್‌ರನ್ನು 6-4, 6-4 ನೇರ ಸೆಟ್‌ಗಳಿಂದ ಮಣಿಸಿ ಸೆವಿ ುಫೈನಲ್‌ಗೆ ತೇರ್ಗಡೆಯಾದರು.

ಚೆನ್ನೈ ಆಟಗಾರ ರಾಮ್‌ಕುಮಾರ್ 2 ಗಂಟೆ, 13 ನಿಮಿಷಗಳ ಹೋರಾಟದಲ್ಲಿ ಎದುರಾಳಿ ಬೆಡೆನೆಗೆ ತೀವ್ರ ಪೈಪೋಟಿ ನೀಡುವ ಮೂಲಕ ಗಮನ ಸೆಳೆದರು. ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ರಾಮ್ 45 ರ್ಯಾಂಕಿಂಗ್ ಪಾಯಿಂಟ್ಸ್ ಸಂಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News