ಕೋಲ್ಕತಾದ ಆಸ್ಪತ್ರೆಗೆ ತೆರಳಿದ ಧವನ್

Update: 2017-01-20 17:47 GMT

ಕೋಲ್ಕತಾ, ಜ.20: ಇಂಗ್ಲೆಂಡ್ ವಿರುದ್ಧ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲು ಟೀಮ್ ಇಂಡಿಯಾ ಕೋಲ್ಕತಾಕ್ಕೆ ಶುಕ್ರವಾರ ಆಗಮಿಸಿದೆ. ತಂಡದೊಂದಿಗೆ ಬಂದಿದ್ದ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಬಲ ಹೆಬ್ಬೆರಳ ಗಾಯದಿಂದ ಬಳಲುತ್ತಿರುವ ಧವನ್ ಆಸ್ಪತ್ರೆಗೆ ತೆರಳಿ ವೈದ್ಯರನು ್ನಭೇಟಿಯಾಗಿದ್ದಾರೆ.

ಕಳೆದ ವರ್ಷ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಧವನ್ ಬೆರಳು ಮುರಿತಕ್ಕೆ ಒಳಗಾಗಿದ್ದರು. ಇಂಗ್ಲೆಂಡ್ ವಿರುದ್ಧ ಪುಣೆ ಹಾಗೂ ಕಟಕ್‌ನಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 1 ಹಾಗೂ 11 ರನ್ ಗಳಿಸಿದ್ದಾರೆ.

ಧವನ್ ರೇಡಿಯೊಲಾಜಿ ವಿಭಾಗಕ್ಕೆ ತೆರಳಿ ಒಂದು ಗಂಟೆಗೂ ಅಧಿಕ ಕಾಲ ಅಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಂಭಿಕ ಆಟಗಾರನಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ಧವನ್ ಅವರು ಅಜಿಂಕ್ಯ ರಹಾನೆಯಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News