ಇಟಲಿಯನ್ನು ‘ಇಡ್ಲಿ’ ಮಾಡಿದ ಭಾರತ

Update: 2017-05-20 10:10 GMT

ಹೊಸದಿಲ್ಲಿ, ಮೇ 20: ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವಿಟರ್‌ನಲ್ಲಿ ಮತ್ತೊಮ್ಮೆ ಸಕ್ರಿಯರಾಗಿದ್ದಾರೆ. ಈ ಬಾರಿ ಅವರು ಕ್ರಿಕೆಟ್ ಮೈದಾನವನ್ನು ಬಿಟ್ಟು ಫುಟ್ಬಾಲ್ ಪಿಚ್‌ನತ್ತ ತನ್ನ ಗಮನಹರಿಸಿದ್ದಾರೆ. ಇಟಲಿ ತಂಡವನ್ನು ಅದರದೇ ನೆಲದಲ್ಲಿ ಮಣಿಸಿದ ಭಾರತದ ಅಂಡರ್-17 ವಿಶ್ವಕಪ್ ಫುಟ್ಬಾಲ್ ತಂಡದ ಸಾಧನೆಯನ್ನು ಸೆಹ್ವಾಗ್ ಶ್ಲಾಘಿಸಿದ್ದಾರೆ.

ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಜೂನಿಯರ್ ಫುಟ್ಬಾಲ್ ಆಟಗಾರರಿಗೆ ಎಲ್ಲೆಡೆಯಿಂದ ಶ್ಲಾಘನೆಯ ಸುರಿಮಳೆಯಾಗುತ್ತಿದ್ದು, ಸೆಹ್ವಾಗ್ ಟ್ವಿಟರ್‌ನ ಮೂಲಕ ಫುಟ್ಬಾಲ್‌ನ ಕಿರಿಯ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

‘‘ಹೌದು, ನೀವು ಇಟಲಿಯನ್ನು ಮಣಿಸಿದ್ದೀರಿ. ವಿಶೇಷ ಗೆಲುವು ಸಾಧಿಸಿರುವ ಭಾರತದ 17 ವರ್ಷದೊಳಗಿನವರ ತಂಡಕ್ಕೆ ಅಭಿನಂದನೆಗಳು. ಇಟಲಿ ಕಿ ಇಡ್ಲಿ ಬನ್ ಗಯಿ!(ಇಟಲಿಯನ್ನು ಇಡ್ಲಿ ಮಾಡಿದ್ದೀರಿ) ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಸೆಹ್ವಾಗ್ ಅವರು ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಲಹಾಗಾರರಾಗಿದ್ದಾರೆ. ಮುಂಬರುವ ಭಾರತದಲ್ಲಿ ನಡೆಯುವ ಅಂಡರ್-17 ಫುಟ್ಬಾಲ್ ವಿಶ್ವಕಪ್‌ಗೆ ಬೆಂಬಲ ಸೂಚಿಸುವ ಗಣ್ಯರ ಪೈಕಿ ಸೆಹ್ವಾಗ್ ಕೂಡ ಒಬ್ಬರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News