ಆಯ್ಕೆ ವಿಚಾರದಲ್ಲಿ ಧೋನಿಗೆ ಸಿಕ್ಕಂತಹ ‘ಸೌಲಭ್ಯಗಳು’ ನನಗೆ ಸಿಗಲಿಲ್ಲ: ಹರ್ಭಜನ್

Update: 2017-05-25 10:47 GMT

ಹೊಸದಿಲ್ಲಿ, ಮೇ 25: ಟೀಮ್ ಇಂಡಿಯಾಕ್ಕೆ ಆಯ್ಕೆಯಾಗುವ ವಿಷಯಕ್ಕೆ ಸಂಬಂಧಿಸಿ ಎಂಎಸ್ ಧೋನಿಗೆ ಸಿಕ್ಕಂತಹ ಸೌಲಭ್ಯಗಳು ನನಗೆ ಸಿಗಲಿಲ್ಲ ಎಂದು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಧೋನಿ ಆಯ್ಕೆಯಾಗಿದ್ದನ್ನು ಉಲ್ಲೇಖಿಸಿ ಹಿರಿಯ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

 "ಧೋನಿ ಫಾರ್ಮ್‌ನಲ್ಲಿ ಇರಲಿ, ಇಲ್ಲದಿರಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆನ್ನುವುದರಲ್ಲಿ ಸಂಶಯವಿಲ್ಲ. ಅವರು ಕಳಪೆ ಬ್ಯಾಟಿಂಗ್ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ, ಅವರು ತಂಡದ ನಾಯಕನಾಗಿದ್ದರು. ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಯುವ ಆಟಗಾರರಿಗೆ ನೆರವಾಗುತ್ತದೆೆ. ನನ್ನ ವಿಚಾರಕ್ಕೆ ಬಂದರೆ, ಧೋನಿಗೆ ಲಭಿಸಿದಷ್ಟು ಸೌಲಭ್ಯಗಳು ನನಗೆ ಲಭಿಸಿಲ್ಲ. ನಾನು ಕೂಡ 19 ವರ್ಷಗಳ ಕಾಲ ಭಾರತಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದೇನೆ. ನಾನು ಕೂಡ ಎರಡು ವಿಶ್ವಕಪ್‌ನ್ನು ಜಯಿಸಿದ್ದೇನೆ. ಕೆಲವು ಆಟಗಾರರಿಗೆ ಎಲ್ಲ ಸೌಲಭ್ಯಗಳಿದ್ದರೆ, ಇನ್ನು ಕೆಲವರಿಗೆ ಏನೂ ಇಲ್ಲ. ಯಾಕೆ ಹೀಗಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ’’ ಎಂದು ಹರ್ಭಜನ್ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News