ಮೊದಲ ಟೆಸ್ಟ್ ನಿಂದ ಗುಣರತ್ನೆ ಔಟ್

Update: 2017-07-26 18:28 GMT

ಗಾಲೆ, ಜು.26: ಶ್ರೀಲಂಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಸೆಲಾ ಗುಣರತ್ನೆ ಬುಧವಾರ ಇಲ್ಲಿ ಆರಂಭವಾಗಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಗಾಯಗೊಂಡಿದ್ದಾರೆ.

ಬಲ ಹೆಬ್ಬೆರಳಿಗೆ ಗಂಭೀರ ಗಾಯವಾಗಿರುವ ಹಿನ್ನೆಲೆಯಲ್ಲಿ ಗುಣರತ್ನೆ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಸೆಕೆಂಡ್ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗುಣರತ್ನೆ ಭಾರತದ ಆರಂಭಿಕ ದಾಂಡಿಗ ಶಿಖರ್ ಧವನ್ ಅವರು ನೀಡಿದ ಕ್ಯಾಚ್‌ನ್ನು ಪಡೆಯುವ ಯತ್ನದಲ್ಲಿದ್ದಾಗ ಗಾಯವಾಗಿದೆ. ಧವನ್ 31 ರನ್ ಗಳಿಸಿದ್ದಾಗ ಗುಣರತ್ನೆ ಜೀವದಾನ ನೀಡಿದರು.

ಗುಣರತ್ನೆ ಅವರನ್ನು ಕೊಲಂಬೊ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಗುಣರತ್ನೆ ಅನುಪಸ್ಥಿತಿಯಲ್ಲಿ ಶ್ರೀಲಂಕಾ ತಂಡ ಎರಡೂ ಇನಿಂಗ್ಸ್‌ನಲ್ಲಿ 10 ಆಟಗಾರರೊಂದಿಗೆ ಆಡಬೇಕಾದ ಪರಿಸ್ಥಿತಿ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News