ಬುದ್ಧಿಹೇಳಿದ ಹಿರಿಯರಿಗೆ ಬಾರಿಸಿದ ಭಾರತೀಯ ದಾಂಡಿಗ!

Update: 2017-09-01 11:07 GMT

 ಹೈದರಾಬಾದ್, ಸೆ.1: ಪ್ರಸ್ತುತ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಮಧ್ಯಮ ಕ್ರಮಾಂಕದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅಂಬಟಿ ರಾಯುಡು ತಪ್ಪು ವಿಷಯದ ಮೂಲಕ ಸುದ್ದಿಯಾಗಿದ್ದಾರೆ. ಅತಿ ವೇಗವಾಗಿ ಕಾರು ಚಲಾಯಿಸಬೇಡ ಎಂದು ಬುದ್ದಿ ಹೇಳಿದ ಹಿರಿಯರೊಬ್ಬರ ಜೊತೆ ರಾಯುಡು ನಡು ರಸ್ತೆಯಲ್ಲಿ ಕೈಕೈ ಮಿಲಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನ್ಯೂಸ್ ಏಜೆನ್ಸಿ ಏಷ್ಯಾ ನ್ಯೂಸ್ ಇಂಟರ್‌ನ್ಯಾಶನಲ್ ಅಧಿಕೃತ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿರುವ ವೀಡಿಯೊ ಭಾರೀ ಚರ್ಚೆಗೆ ಗ್ರಾಸವಾಗಿದೆ.

 ರಾಯುಡು ತನ್ನ ಕಾರಿನಿಂದ ಕೆಳಗಿಳಿದು ಹಿರಿಯ ವ್ಯಕ್ತಿಯೊಬ್ಬರೊಂದಿಗೆ ವಾಗ್ವಾದ ನಡೆಸಿದ ಬಳಿಕ ಹೊಡೆದಾಡುವ ದೃಶ್ಯ ವಿಡಿಯೋದಲ್ಲಿದೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಜನರು ಇಬ್ಬರ ನಡುವಿನ ಜಗಳವನ್ನು ಬಿಡಿಸಿದ್ದಾರೆ.

ರಾಯುಡು ಭಾರತದ ಪರ 34 ಏಕದಿನ ಪಂದ್ಯಗಳನ್ನು ಆಡಿದ್ದು ಒಟ್ಟು 1,055 ರನ್ ಗಳಿಸಿದ್ದಾರೆ. ಜೂನ್ 15 ರಂದು ಝಿಂಬಾಬ್ವೆಯ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News