ಮುಂಬೆ ತಂಡಕ್ಕೆ ಪೃಥ್ವಿ ಶಾ ವಾಪಸ್

Update: 2018-02-17 18:27 GMT

ಮುಂಬೈ, ಫೆ.17: ವಿಜಯ್ ಹಝಾರೆ ಟ್ರೋಫಿಯಲ್ಲಿ ದಿಲ್ಲಿ ವಿರುದ್ಧ ನಾಕೌಟ್ ಪಂದ್ಯ ಆಡಲಿರುವ ಮುಂಬೈ ತಂಡ 16 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದ್ದು, ಯುವ ದಾಂಡಿಗ ಪೃಥ್ವಿ ಶಾ ತಂಡಕ್ಕೆ ವಾಪಸಾಗಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯ ಫೆ.21ರಂದು ನಡೆಯಲಿದೆ.

ಮುಂಬೈ ತಂಡವನ್ನು ಆದಿತ್ಯ ತಾರೆ ನಾಯಕನಾಗಿ ಮುನ್ನಡೆಸಲಿದ್ದು, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಿದ್ದೇಶ್ ಲಾಡ್ ಹಾಗೂ ಅಖಿಲ್ ಹೆರ್ವಾಡ್ಕರ್ ತಂಡದಲ್ಲಿದ್ದಾರೆ.

ಗೋವಾ ವಿರುದ್ಧ ಪಂದ್ಯದಲ್ಲಿ ಶಾ 53 ರನ್, ರಾಜಸ್ಥಾನ ವಿರುದ್ಧ 52 ರನ್ ಗಳಿಸಿದ್ದರು. ಮುಂಬೈ ಹಾಗೂ ಆಂಧ್ರಪ್ರದೇಶ ‘ಸಿ’ ಗುಂಪಿನಿಂದ ನಾಕೌಟ್ ಹಂತಕ್ಕೆ ತೇರ್ಗಡೆಯಾಗಿವೆ.

►ಮುಂಬೈ ತಂಡ: ಆದಿತ್ಯ ತಾರೆ(ನಾಯಕ), ಧವಳ್ ಕುಲಕರ್ಣಿ(ಉಪ ನಾಯಕ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಿದ್ದೇಶ್ ಲಾಡ್, ಅಖಿಲ್ ಹೆರ್ವಾಡ್ಕರ್, ಜೈ ಬಿಸ್ತಾ, ಶಿವಂ ದುಬೆ, ಏಕನಾಥ್ ಕೇರ್ಕರ್, ಆಕಾಶ್ ಪಾರ್ಕರ್, ಧುೃಮಿಲ್ ಮಟ್ಕರ್, ರಾಯ್‌ಸ್ಟನ್ ಡಿಯಾಸ್, ಶಂಸ್ ಮುಲಾನಿ, ಶುಭಂ ರಂಜನೆ, ಶಿವಂ ಮಲ್ಹೋತ್ರಾ ಹಾಗೂ ಪೃಥ್ವಿ ಶಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News