ದಿಲ್ಲಿ ಕ್ವಾರ್ಟರ್ ಫೈನಲ್‌ಗೆ

Update: 2018-02-17 18:28 GMT

ಧರ್ಮಶಾಲಾ, ಫೆ.17: ಬಂಗಾಳ ತಂಡ ಹಿಮಾಚಲ ಪ್ರದೇಶವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಹಿನ್ನೆಲೆಯಲ್ಲಿ ದಿಲ್ಲಿ ತಂಡ ವಿಜಯ್ ಹಝಾರೆ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದೆ. ‘ಬಿ’ ಗುಂಪಿನ ಪಂದ್ಯದಲ್ಲಿ ಮನೋಜ್ ತಿವಾರಿ ಅಜೇಯ 104 ರನ್ ನೆರವಿನಿಂದ ಬಂಗಾಳ ಭರ್ಜರಿ ಜಯ ಸಾಧಿಸಿತು. ಹಿಮಾಚಲಪ್ರದೇಶಕ್ಕೆ ಈ ಗೆಲುವು ಅತ್ಯಂತ ಮುಖ್ಯವಾಗಿತ್ತು. ‘ಬಿ’ ಗುಂಪಿನಲ್ಲಿ 6 ಪಂದ್ಯಗಳಲ್ಲಿ 16 ಅಂಕ ಗಳಿಸಿದ ದಿಲ್ಲಿ ಕೊನೆಯ 2 ಪಂದ್ಯಗಳಲ್ಲಿ ಸತತ ಸೋಲನುಭವಿಸಿತ್ತು. ಬಂಗಾಳ ಗೆದ್ದ ಕಾರಣ ದಿಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದೆ. ಬಂಗಾಳ ತಂಡ ತಿವಾರಿ ಹಾಗೂ ಅಭಿಮನ್ಯು ಈಶ್ವರನ್(90) ನೆರವಿನಿಂದ 48 ಓವರ್‌ಗಳಲ್ಲಿ 267 ರನ್ ಗಳಿಸಿತು. ಈ ಜೋಡಿ 3ನೇ ವಿಕೆಟ್‌ಗೆ 131 ರನ್ ಜೊತೆಯಾಟ ನಡೆಸಿತು. ಹಿಮಾಚಲ ಪ್ರದೇಶ ಪ್ರಿಯಾಂಶು(74) ಅರ್ಧಶತಕದ ಕೊಡುಗೆಯಿಂದ 8 ವಿಕೆಟ್‌ಗೆ 266 ರನ್ ಗಳಿಸಿತ್ತು. ಅಲೋಕ್ ಪ್ರತಾಪ್ 53ಕ್ಕೆ 4 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News