ಸರ್ದಾರ್ ಸಿಂಗ್ ಅಂತರ್‌ರಾಷ್ಟ್ರೀಯ ಹಾಕಿಗೆ ವಿದಾಯ

Update: 2018-09-12 15:27 GMT

ಹೊಸದಿಲ್ಲಿ, ಸೆ.12: ಭಾರತದ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಹನ್ನೆರಡು ವರ್ಷಗಳ ಅಂತರ್‌ರಾಷ್ಟ್ರೀಯ ಹಾಕಿ ವೃತ್ತಿ ಬದುಕಿಗೆ ಬುಧವಾರ ವಿದಾಯ ಪ್ರಕಟಿಸಿದ್ದಾರೆ.

ಯುವಕರಿಗೆ ಉತ್ತೇಜನ ನೀಡಲು ತಾನು ಅಂತರ್‌ರಾಷ್ಟ್ರೀಯ ಹಾಕಿಯಿಂದ ದೂರ ಸರಿದಿರುವುದಾಗಿ ತಿಳಿಸಿದ್ದಾರೆ.

ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಹಾಕಿ ತಂಡ ಚಿನ್ನ ಉಳಿಸಿಕೊಳ್ಳುವಲ್ಲಿ ವಿಫಲವಾಗಿ ಕಂಚು ಪಡೆದಿತ್ತು. ಇದರೊಂದಿಗೆ ಭಾರತ 2020ರ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಪಡೆಯುವ ಅವಕಾಶವನ್ನು ಕಳೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News