ಏಶ್ಯಾಕಪ್: ಬಹರೈನ್‌ಗೆ ಶರಣಾದ ಭಾರತ; ಟೂರ್ನಿಯಿಂದ ಹೊರಕ್ಕೆ

Update: 2019-01-14 18:12 GMT

ಅಬುಧಾಬಿ, ಜ.14: ಅತ್ಯಂತ ರೋಚಕವಾಗಿ ಸಾಗಿದ ಎಎಫ್‌ಸಿ ಏಶ್ಯಾಕಪ್‌ನಲ್ಲಿ ಹೆಚ್ಚುವರಿ ಸಮಯದಲ್ಲಿ ಗೋಲು ಬಾರಿಸಲು ಯಶಸ್ವಿಯಾದ ಬಹರೈನ್ ತಂಡ ಭಾರತವನ್ನು 1-0 ಗೋಲುಗಳ ಅಂತರದಿಂದ ಮಣಿಸಿತು. ಈ ಮೂಲಕ ಅಂತಿಮ-16ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು.

'ಎ' ಗುಂಪಿನಲ್ಲಿ ಮೂರು ಪಂದ್ಯಗಳಲ್ಲಿ ಮೂರಂಕವನ್ನು ಗಳಿಸಿ ನಾಲ್ಕನೇ ಸ್ಥಾನವನ್ನು ಪಡೆದ ಭಾರತ ಟೂರ್ನಿಯಿಂದ ಹೊರ ನಡೆದಿದೆ. ಯುಎಇ ಹಾಗೂ ಥಾಯ್ಲೆಂಡ್ ಮಧ್ಯೆ ಮತ್ತೊಂದು ಪಂದ್ಯ 1-1 ರಿಂದ ಡ್ರಾನಲ್ಲಿ ಕೊನೆಗೊಂಡಿದೆ.

 ಸೋಮವಾರ ನಡೆದ ಪಂದ್ಯದ ನಿಗದಿತ 90 ನಿಮಿಷಗಳ ಆಟದಲ್ಲಿ ಉಭಯ ತಂಡಗಳು ಗೋಲು ಬಾರಿಸಲು ವಿಫಲವಾದವು. 91ನೇ ನಿಮಿಷದಲ್ಲಿ ಗೋಲು ಬಾರಿಸಿದ ಬಹರೈನ್‌ನ ಜಮಾಲ್ ರಶೀದ್ ತನ್ನ ತಂಡಕ್ಕೆ ರೋಚಕ ಗೆಲುವು ತಂದರು.

ಗೆಲ್ಲಬೇಕಾಗಿದ್ದ ಪಂದ್ಯದಲ್ಲಿ ಎಡವಿದ ಭಾರತ ನಾಕೌಟ್ ಹಂತಕ್ಕೇರುವ ಅವಕಾಶವನ್ನು ಕೈಚೆಲ್ಲಿತು. ಆದರೆ, ಕೊನೆಯ ತನಕ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News