ಬಂಡುಕೋರರಿಂದ ಪರ್ವತ ಶ್ರೇಣಿಗಳನ್ನು ವಶಪಡಿಸಿಕೊಂಡ ಯೆಮನ್ ಸೇನೆ

Update: 2019-01-23 10:01 GMT

ದುಬೈ, ಜ. 21: ಉತ್ತರ ಸಅದ ಪ್ರಾಂತದ ಕಿತಾಫ್ ಜಿಲ್ಲೆಯ ಆಯಕಟ್ಟಿನ ಪರ್ವತಶ್ರೇಣಿಗಳನ್ನು ಯೆಮನ್ ಸೇನೆ ರವಿವಾರ ರಾತ್ರಿ ಹೌದಿ ಬಂಡುಕೋರರಿಂದ ಮರುವಶಪಡಿಸಿಕೊಂಡಿದೆ.

ಈ ವಿಷಯವನ್ನು ಸೌದಿ ಅರೇಬಿಯದ ಸರಕಾರಿ ಒಡೆತನದ ಸುದ್ದಿ ವಾಹಿನಿ ಅಲ್-ಅಕ್ಬರಿಯ ವರದಿ ಮಾಡಿದೆ.

ಹೌದಿ ಬಂಡುಕೋರರೊಂದಿಗೆ ಸಂಘರ್ಷ ಏರ್ಪಟ್ಟ ಬಳಿಕ, ಆಯಕಟ್ಟಿನ ಪರ್ವತಶ್ರೇಣಿಗಳಾದ ವಾದಿ ಅಲ್-ತಮ್ಮ್ ಮತ್ತು ಜಬಲ್ ಅಲ್-ಸೈಫ್‌ಗಳನ್ನು ಯೆಮನ್ ಸೈನಿಕರು ಮರುವಶಪಡಿಸಿಕೊಂಡಿದ್ದಾರೆ ಎಂದು ಅದು ಹೇಳಿದೆ.

ಸಅದ ರಾಜ್ಯದ ಇತರ ಕಡೆಗಳಲ್ಲಿ ನಡೆದ ಸಂಘರ್ಷದಲ್ಲಿ ಯೆಮನ್ ಸೇನೆ ನಡೆಸಿದ ಬಾಂಬ್ ದಾಳಿಯಲ್ಲಿ ಏಳು ಹೌದಿ ಬಂಡುಕೋರರು ಹತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News