ಹುತಾತ್ಮ ಯೋಧರಿಗೆ ಕ್ರಿಕೆಟಿಗ ಮುಹಮ್ಮದ್ ಶಮಿಯಿಂದ ಆರ್ಥಿಕ ನೆರವು

Update: 2019-02-18 15:22 GMT

ಹೊಸದಿಲ್ಲಿ, ಫೆ,18: ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಗುರುವಾರ ಜೈಶೆ ಉಗ್ರ ಸಂಘಟನೆಯ ಹೇಯ ಕೃತ್ಯಕ್ಕೆ ಬಲಿಯಾದ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯ (ಸಿಆರ್‌ಪಿಎಫ್) ಕುಟುಂಬ ಸದಸ್ಯರಿಗೆ ಆರ್ಥಿಕ ನೆರವು ನೀಡಲು ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಮುಂದಾಗಿದ್ದಾರೆ.

‘‘ನಾವು ದೇಶದ ಪರ ಕ್ರಿಕೆಟ್ ಆಡುತ್ತಿದ್ದರೆ, ಸೈನಿಕರು ಗಡಿಯಲ್ಲಿ ನಿಂತು ನಮ್ಮನ್ನೆಲ್ಲಾ ಕಾಪಾಡುತ್ತಾರೆ. ನಮ್ಮ ಯೋಧರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ಅವರೊಂದಿಗೆ ಸದಾ ಕಾಲ ಇರುತ್ತೇವೆ’’ ಎಂದು 28ರ ಹರೆಯದ ಶಮಿ ಹೇಳಿದ್ದಾರೆ.

ಸಿಆರ್‌ಪಿಎಫ್ ಯೋಧರಿಗೆ ಧನ ಸಹಾಯ ಮಾಡುವೆ ಎಂದು ಗುರುವಾರ ತಿಳಿಸಿರುವ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್, ಟ್ವಿಟರ್‌ನಲ್ಲಿ ಭಾವನಾತ್ಮಕ ವಿಡಿಯೋ ಹಾಕಿ, ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ಸಹಾಯ ಹಸ್ತ ನೀಡುವಂತೆ ತನ್ನ ಅಭಿಮಾನಿಗಳು ಹಾಗೂ ದೇಶದ ಪ್ರಜೆಗಳನ್ನು ಕೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News