ಪಂದ್ಯದ ಸಂಭಾವನೆ ಮೆದಾನದ ಸಿಬ್ಬಂದಿಗೆ ನೀಡಿದ ಸ್ಯಾಮ್ಸನ್

Update: 2019-09-07 17:46 GMT

ತಿರುವನಂತಪುರ, ಸೆ.7: ಭಾರತ 'ಎ' ತಂಡದಲ್ಲಿ ಆಡಿದ ಪಂದ್ಯಗಳಲ್ಲಿ ಲಭಿಸಿರುವ ಸಂಭಾವನೆಯನ್ನು ತಿರುವನಂತಪುರದ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಸ್ಟೇಡಿಯಂನ ಮೈದಾನದ ಸಿಬ್ಬಂದಿಗೆ ನೀಡಲು ನಿರ್ಧರಿಸಿದ್ದೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಭಾರತ ಎ ತಂಡ ದಕ್ಷಿಣ ಆಫ್ರಿಕ ಎ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯ ಆತಿಥ್ಯವಹಿಸಿತ್ತು. ಕೇರಳದ ರಾಜಧಾನಿಯಲ್ಲಿ ಮಳೆರಾಯನ ಅಡ್ಡಿಯಿಂದಾಗಿ ಎಲ್ಲ ಪಂದ್ಯಗಳ ಓವರ್‌ಗಳನ್ನು ಕಡಿತಗೊಳಿಸಲಾಗಿತ್ತು. ನಾಲ್ಕನೇ ಪಂದ್ಯವನ್ನು ಎರಡು ದಿನಗಳ ತನಕ ಆಡಲಾಗಿತ್ತು.

ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಸ್ಯಾಮ್ಸನ್ 48 ಎಸೆತಗಳಲ್ಲಿ 91 ರನ್ ಗಳಿಸಿ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News