ದಿಲ್ಲಿ ರಣಜಿ ತಂಡಕ್ಕೆ ಧ್ರುವ ಶೋರೆ ನಾಯಕ

Update: 2019-12-04 18:01 GMT

ಹೊಸದಿಲ್ಲಿ, ಡಿ. 4: ಅನುಭವಿ ಬಲಗೈ ಬ್ಯಾಟ್ಸ್‌ಮನ್ ಧ್ರುವ ಶೋರೆ ರಣಜಿ ಟ್ರೋಫಿ ಟೂರ್ನಮೆಂಟ್‌ನಲ್ಲಿ ದಿಲ್ಲಿ ಕ್ರಿಕೆಟ್ ತಂಡದ ನಾಯಕರಾಗಿ ಮುನ್ನಡೆಸಲಿದ್ದು, ಮುಂದಿನ ವಾರದಿಂದ ಪ್ರಾರಂಭವಾಗಲಿರುವ ರಣಜಿ ಟ್ರೋಫಿ ಅಭಿಯಾನದಲ್ಲಿ ನಿತೀಶ್ ರಾಣಾ ತಂಡದ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ವಿಜಯ್ ಹಜಾರೆ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಧ್ರುವ ದಿಲ್ಲಿ ತಂಡವನ್ನು ಮುನ್ನಡೆಸಿದ್ದರು. ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿಎ) ರಣಜಿ ಟ್ರೋಫಿಯ ಮೊದಲ ಎರಡು ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದೆ. ಕೇರಳ ವಿರುದ್ಧ ಆಡುವ ಮೂಲಕ ಅಭಿಯಾನವನ್ನು ಪ್ರಾರಂಭಿಸಲಿದೆ. ಭಾರತದ ನಾಯಕ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ಶಿಖರ್ ಧವನ್ ಮತ್ತು ರಿಷಭ್ ಪಂತ್ ಅವರನ್ನು ಮೊದಲ ಎರಡು ಪಂದ್ಯಗಳಿಗೆ ದಿಲ್ಲಿ ತಂಡಕ್ಕೆ ಸೇರಿಸಲಾಗಿಲ್ಲ. ಅತುಲ್ ವಾಸನ್ ನೇತೃತ್ವದ ಆಯ್ಕೆ ಸಮಿತಿಯು ಆಯ್ಕೆಯಾಗಿರುವ ತಂಡದ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ದಿಲ್ಲಿ ತಂಡ: ಧ್ರುವ ಶೋರೆ (ನಾಯಕ ), ನಿತೀಶ್ ರಾಣಾ (ಉಪನಾಯಕ), ಕುನಾಲ್ ಚಂದೇಲಾ, ಅನುಜ್ ರಾವತ್ (ವಿಕೆಟ್ ಕೀಪರ್), ಜಾಂಟಿ ಸಿಧು, ಲಲಿತ್ ಯಾದವ್, ಶಿವಂ ಶರ್ಮಾ, ವಿಕಾಸ್ ಮಿಶ್ರಾ, ತೇಜಸ್ ಬರೋಕಾ, ಪ್ರದೀಪ್ ಸಾಂಗ್ವಾನ್, ನವದೀಪ್ ಸೈನಿ, ಪವನ್ ಸುಯಾಲ್, ಹಿಟೆನ್ ದಲಾಲ್, ಶಿವಂಕ್ ವಶಿಷ್ಠ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News