ಸಿಂಗಾಪುರ: ರಸ್ತೆ ಅಪಘಾತದಲ್ಲಿ ಭಾರತೀಯ ಸಾವು

Update: 2020-04-27 16:11 GMT

ಸಿಂಗಾಪುರ, ಎ. 27: ಸಿಂಗಾಪುರದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಭಾರತೀಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಮೃತರು ತಮಿಳುನಾಡು ನಿವಾಸಿ 33 ವರ್ಷದ ಸುಲ್ತಾನ್ ಅಬ್ದುಲ್ ಕತರ್ ರಹಮಾನ್ ಕರೀಮ್. ಅವರು ಭಾರತ ಮೂಲದ ಮಲೇಶ್ಯ ನಿವಾಸಿ 27 ವರ್ಷದ ಮುಹಮ್ಮದ್ ರಬೀಕ್ ಮುಹಮ್ಮದ್ ಫಾರೂಕ್ ಜೊತೆ ಶನಿವಾರ ಮೋಟರ್‌ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಕಾರೊಂದು ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಅವರಿಬ್ಬರು ಇಲ್ಲಿನ ಭಾರತೀಯ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

ಸುಲ್ತಾನ್ ಪತ್ನಿ, ಎರಡು ವರ್ಷದ ಮಗಳು ಮತ್ತು ಹೆತ್ತವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News