ಬಾಂಗ್ಲಾಕ್ಕೆ ಅಪ್ಪಳಿಸಿದ ಅಂಫಾನ್ ಚಂಡಮಾರುತ

Update: 2020-05-20 17:03 GMT

ಕುತ್ನ (ಬಾಂಗ್ಲಾದೇಶ), ಮೇ 20: ಅಂಫಾನ್ ಚಂಡಮಾರುತದ ಪಥದಿಂದ ಜನರನ್ನು ತೆರವುಗೊಳಿಸುತ್ತಿದ್ದ ವೇಳೆ, ದೋಣಿ ಮಗುಚಿ ಬಾಂಗ್ಲಾದೇಶ ರೆಡ್ ಕ್ರೆಸೆಂಟ್ ಸ್ವಯಂಸೇವಕರೊಬ್ಬರು ಬುಧವಾರ ಮುಳುಗಿ ಮೃತಪಟ್ಟಿದ್ದಾರೆ.

ದೋಣಿಯು ಮುಳುಗಿದಾಗ ಅದರಲ್ಲಿ ನಾಲ್ವರು ಇದ್ದರು ಎಂದು ಬಾಂಗ್ಲಾದೇಶ ರೆಡ್ ಕ್ರೆಸೆಂಟ್‌ನ ಚಂಡಮಾರುತ ಸಿದ್ಧತಾ ಕಾರ್ಯಕ್ರಮದ ನಿರ್ದೇಶಕ ನೂರುಲ್ ಇಸ್ಲಾಮ್ ಖಾನ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ದಶಕಗಳ ಅವಧಿಯಲ್ಲೇ ಅತ್ಯಂತ ಭೀಕರ ಚಂಡಮಾರುತಗಳ ಪೈಕಿ ಒಂದಾಗಿರುವ ಅಂಫಾನ್ ಬುಧವಾರ ಸಂಜೆ ತೀರ ಪ್ರದೇಶಕ್ಕೆ ಅಪ್ಪಳಿಸಿದೆ.

ದಾಖಲೆ ಇಡುವ ಪದ್ಧತಿ ಆರಂಭಗೊಂಡ ಬಳಿಕ, ಇದು ಬಂಗಾಳ ಕೊಲ್ಲಿಯಲ್ಲಿ ಹುಟ್ಟಿಕೊಂಡಿರುವ ಎರಡನೇ ಸೂಪರ್ ಚಂಡಮಾರುತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News