×
Ad

ಗೆಲ್ಲಲೇಬೇಕಾದ ಪಂದ್ಯದಲ್ಲಿ ಚೆನ್ನೈಗೆ ಶರಣಾದ ಕೆಕೆಆರ್: ಮಾರ್ಗನ್ ಬಳಗದ ಪ್ಲೇಆಫ್ ಹಾದಿ ಕಠಿಣ

Update: 2020-10-29 23:14 IST

ದುಬೈ: ರೋಚಕವಾಗಿ ಸಾಗಿದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಜಡೇಜ ಬಾರಿಸಿದ ಸತತ 2 ಸಿಕ್ಸರ್ ಗಳ ನೆರವಿನಿಂದ ಚೆನ್ನೈ 6 ವಿಕೆಟ್ ಗಳ ಗೆಲುವು ಸಾಧಿಸಿದೆ.

ಗೆಲುವಿಗೆ 173 ರನ್ ಗಳ ಗುರಿ ಪಡೆದ ಚೆನ್ನೈ ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿತು. 2 ಎಸೆತಗಳಲ್ಲಿ 7 ರನ್ ಬೇಕಿದ್ದಾಗ ಜಡೇಜ ಸತತ 2 ಸಿಕ್ಸರ್ ಸಿಡಿಸಿದರು. 

ರುತುರಾಜ್ ಗಾಯಕ್ವಾಡ್ ಸತತ ಎರಡನೇ ಅರ್ಧಶತಕ ಗಳಿಸಿದರು. ಅವರು 53 ಎಸೆತಗಳಲ್ಲಿ 72 ರನ್ ಬಾರಿಸಿದರು. ಜಡೇಜ ಕೇವಲ 11 ಎಸೆತಗಳಲ್ಲಿ 31 ರನ್ ಸಿಡಿಸಿದರು. ರಾಯುಡು 38, ವ್ಯಾಟ್ಸನ್ 14 ಹಾಗೂ ಕರ್ರನ್ 13 ರನ್ ಬಾರಿಸಿದರು.

ಕೊಲ್ಕತ್ತಾ ಪರ ಕಮಿನ್ಸ್ ಹಾಗೂ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನಿಗದಿತ 20 ಓವರ್ ಗಳಲ್ಲಿ 172/5 ರನ್ ಗಳಿಸಿತು.

ಆರಂಭಿಕ ಆಟಗಾರರಾದ ನಿತೀಶ್ ರಾಣಾ ಹಾಗೂ ಶುಭಮನ್ ಗಿಲ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಶುಭಮನ್ ಗಿಲ್ 26 (17 ಎಸೆತ) ಗಳಿಸಿ ಔಟಾದರೆ, ನಿತೀಶ್ ರಾಣಾ 87( 61 ಎಸೆತ) ರನ್ ಸಿಡಿಸಿದರು. ದಿನೇಶ್ ಕಾರ್ತಿಕ್ 21, ನಾಯಕ ಇಯಾನ್ ಮಾರ್ಗನ್ 15 ರನ್ ಗಳಿಸಿದರು.

ಚೆನ್ನೈ ಪರ ಲುಂಗಿ ಗಿಡಿ 2, ಸ್ಯಾಂಟ್ನರ್, ಜಡೇಜಾ ಹಾಗೂ ಕರ್ನ್ ಶರ್ಮಾ ತಲಾ 1 ವಿಕೆಟ್ ಪಡೆದರು.

ಧೋನಿ ನಾಯಕತ್ವದ ಚೆನ್ನೈ ತಂಡ ಈಗಾಗಲೇ ಪ್ಲೇಆಫ್ ನಿಂದ ಹೊರಗುಳಿದಿದೆ. ಆದರೆ ಪ್ಲೇಆಫ್ ರೇಸ್ ನಲ್ಲಿರುವ ಕೊಲ್ಕತ್ತಾಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿತ್ತು. ಒಟ್ಟು 13 ಪಂದ್ಯಗಳನ್ನಾಡಿರುವ ಕೊಲ್ಕತ್ತಾ 6ರಲ್ಲಿ ಗೆದ್ದು 7 ಪಂದ್ಯಗಳಲ್ಲಿ ಸೋತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News