ಭಾರತಕ್ಕೆ ಆಟಗಾರರ ಕೊರತೆಯಾದರೆ ಆಸ್ಟ್ರೇಲಿಯಕ್ಕೆ ಹೋಗಲು ಸಿದ್ದ ಎಂದ ಸೆಹ್ವಾಗ್

Update: 2021-01-12 17:05 GMT

ಹೊಸದಿಲ್ಲಿ: ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಗಾಯಾಳುಗಳ ಪಟ್ಟಿಯನ್ನು ವ್ಯಂಗ್ಯವಾಡಿರುವ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಕೊನೆಯ ಟೆಸ್ಟ್ ಪಂದ್ಯಕ್ಕೆ ಆಟಗಾರರ ಕೊರತೆಯಾದರೆ ನಾನು ಅಲ್ಲಿಗೆ ತೆರಳಿ ತಂಡದೊಂದಿಗೆ ಆಡಲು ಸಿದ್ದವಿದ್ದೇನೆ ಎಂದು ಟ್ವೀಟಿಸಿದ್ದಾರೆ.

"ಒಂದು ವೇಳೆ 4ನೇ ಟೆಸ್ಟ್ ಪಂದ್ಯವನ್ನು ಆಡಲು ಟೀಮ್ ಇಂಡಿಯಾಕ್ಕೆ 11 ಆಟಗಾರರ ಕೊರತೆ ಎದುರಾದರೆ ನಾನು ಆಸ್ಟ್ರೆಲಿಯಕ್ಕೆ ಪ್ರಯಾಣಿಸಲು ಸಿದ್ದನಿದ್ದೇನೆ. ಅಲ್ಲಿ ತಂಡದ ಪರ ಆಡುವೆ. ಆಸ್ಟ್ರೇಲಿಯಕ್ಕೆ ತೆರಳಿದ ಬಳಿಕ ಕ್ವಾರಂಟೈನ್ ನಿಯಮಗಳನ್ನು ಬಿಸಿಸಿಐ ನೋಡಿಕೊಳ್ಳಬಹುದು'' ಎಂದು ಸೆಹ್ವಾಗ್ ಟ್ವೀಟಿಸಿದ್ದಾರೆ. ಟ್ವೀಟ್ ನ ಜೊತೆಗೆ ಗಾಯಗೊಂಡು ಸರಣಿಯಿಂದ ಹೊರಗುಳಿದಿರುವ ಆಟಗಾರರ ಚಿತ್ರವನ್ನೂ ಸೆಹ್ವಾಗ್ ಹಂಚಿಕೊಂಡಿದ್ದಾರೆ.

ಕ್ರಿಕೆಟ್ ಅಭಿಮಾನಿಗಳು ಸೆಹ್ವಾಗ್ ಅವರ ವ್ಯಂಗ್ಯವನ್ನು ಗಮನದಲ್ಲಿಟ್ಟುಕೊಂಡು ಸೆಹ್ವಾಗ್ ಅವರ ಟ್ವೀಟನ್ನು ರೀ-ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News