ಸಂಸತ್‌ನಲ್ಲಿ ಇಮ್ರಾನ್ ಖಾನ್ ಭಾಷಣ ರದ್ದುಪಡಿಸಿದ ಲಂಕಾ

Update: 2021-02-22 15:03 GMT

ಕೊಲಂಬೊ (ಶ್ರೀಲಂಕಾ), ಫೆ. 22: ಭಾರತದೊಂದಿಗಿನ ಸಂಭಾವ್ಯ ಘರ್ಷಣೆಯನ್ನು ತಪ್ಪಿಸುವುದಕ್ಕಾಗಿ, ಶ್ರೀಲಂಕಾವು ತನ್ನ ಸಂಸತ್ತಿನಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಡಬೇಕಾಗಿದ್ದ ಭಾಷಣವನ್ನು ರದ್ದುಪಡಿಸಿದೆ.

ಚೀನಾದ ಸಾಲದ ಬಲೆಯಲ್ಲಿ ತಾನು ಸಿಲುಕಿರುವ ಹಂತದಲ್ಲಿ ಹಾಗೂ ಕೋವಿಡ್-19 ಲಸಿಕೆಗಳನ್ನು ವಿತರಿಸುವ ಮೂಲಕ ಜಗತ್ತಿನ ರಕ್ಷಕನಾಗಿ ಭಾರತ ಹೊರಹೊಮ್ಮುತ್ತಿರುವಾಗ ಶ್ರೀಲಂಕಾವು ಭಾರತದೊಂದಿಗಿನ ಸಂಬಂಧವನ್ನು ಹಾಳುಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದು ‘ಕೊಲಂಬೊ ಗಝೆಟ್’ನಲ್ಲಿ ಪ್ರಕಟಗೊಂಡ ಲೇಖನವೊಂದು ತಿಳಿಸಿದೆ.

ಭಾರತವು ಇತ್ತೀಚೆಗೆ ಶ್ರೀಲಂಕಾಕ್ಕೆ ಕೋವಿಶೀಲ್ಡ್ ಲಸಿಕೆಯ 5 ಲಕ್ಷ ಡೋಸ್‌ಗಳನ್ನು ದೇಣಿಗೆಯಾಗಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News