ಮ್ಯಾನ್ಮಾರ್: ಮತ್ತೆ ಬೀದಿಗಿಳಿದ ಜನರು; 3 ಸಾವು

Update: 2021-03-29 17:17 GMT

ಮ್ಯಾನ್ಮಾರ್‌: ಭದ್ರತಾ ಪಡೆಗಳು 114 ಪ್ರತಿಭಟನಕಾರರನ್ನು ಕೊಂದ ಎರಡು ದಿನಗಳ ಬಳಿಕ, ಸೋಮವಾರ ಸೇನಾಡಳಿತದ ವಿರುದ್ಧ ಜನರು ಮತ್ತೆ ಬೀದಿಗಿಳಿದಿದ್ದಾರೆ ಹಾಗೂ ಯಾಂಗನ್ ನಗರದಲ್ಲಿ ಭದ್ರತಾ ಪಡೆಗಳ ಗುಂಡಿಗೆ ಮೂವರು ಬಲಿಯಾಗಿದ್ದಾರೆ.

ಫೆಬ್ರವರಿ 1ರಂದು ಕ್ಷಿಪ್ರಕ್ರಾಂತಿ ನಡೆಸಿ ಆಂಗ್ ಸಾನ್ ಸೂ ಕಿ ನೇತೃತ್ವದ ಚುನಾಯಿತ ಸರಕಾರವನ್ನು ಸೇನೆಯು ಪದಚ್ಯುತಗೊಳಿಸಿದ ಬಳಿಕ ದೇಶದಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ.

ಯಾಂಗನ್ ನಗರದ ಉಪನಗರವೊಂದರಲ್ಲಿ ಭದ್ರತಾ ಪಡೆಗಳು ವ್ಯಕ್ತಿಯೊಬ್ಬರ ತಲೆಗೆ ಗುಂಡು ಹಾರಿಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News