ಐಪಿಎಲ್:ಕೋಲ್ಕತಾದ ಕರಾರುವಾಕ್ ದಾಳಿಗೆ ಆರ್ ಸಿಬಿ ತತ್ತರ

Update: 2021-09-20 15:58 GMT
ವರುಣ್ ಚಕ್ರವರ್ತಿ. photo: twitter

ಅಬುಧಾಬಿ: ವರುಣ್ ಚಕ್ರವರ್ತಿ(3-13) ನೇತೃತ್ವದ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ನ 31ನೇ ಪಂದ್ಯದಲ್ಲಿ ನಿಗದಿತ 19 ಓವರ್ ಗಳಲ್ಲಿ  92 ರನ್ ಗಳಿಸಿ ಆಲೌಟಾಗಿದೆ.

ಆರಂಭಿಕ ಬ್ಯಾಟ್ಸ್ ಮನ್ ದೇವದತ್ತ ಪಡಿಕ್ಕಲ್ (22)ಅಗ್ರ ಸ್ಕೋರರ್ ಎನಿಸಿಕೊಂಡರು. ಶ್ರೀಖರ್ ಭರತ್ (16), ಗ್ಲೆನ್ ಮ್ಯಾಕ್ಸ್ ವೆಲ್ (10),ಹರ್ಷಲ್ ಪಟೇಲ್ (12)ಎರಡಂಕೆಯ ಸ್ಕೋರ್ ಗಳಿಸಿದರು. ದೇವದತ್ತ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ ಕೇವಲ 5 ರನ್ ಗಳಿಸಿ ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಎಬಿ ಡಿ ವಿಲಿಯರ್ಸ್ ಹಾಗೂ ವನಿಂದು ಹಸರಂಗ ಶೂನ್ಯಕ್ಕೆ ಔಟಾದರು.

ಆ್ಯಂಡ್ರೆ ರಸೆಲ್(3-9), ಲಾಕಿ ಫರ್ಗುಸನ್(2-24) ಹಾಗೂ ಪ್ರಸಿದ್ಧ ಕೃಷ್ಣ(1-24) ಆರು ವಿಕೆಟ್ ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News