ಐಪಿಎಲ್: ಚೆನ್ನೈ ಗೆಲುವಿಗೆ 172 ರನ್ ಗುರಿ ನೀಡಿದ ಕೆಕೆಆರ್

Update: 2021-09-26 12:21 GMT
photo: twitter.com/WisdenIndia

  ಅಬುಧಾಬಿ, ಸೆ.26: ಅಗ್ರ ಕ್ರಮಾಂಕದ ಆಟಗಾರ ರಾಹುಲ್ ತ್ರಿಪಾಠಿ(45, 33 ಎಸೆತ,4 ಬೌಂಡರಿ, 1 ಸಿ.) ಹಾಗೂ ನಿತಿನ್ ರಾಣಾ(ಔಟಾಗದೆ 37, 27 ಎಸೆತ, 3 ಬೌಂಡರಿ, 1 ಸಿ.)ಅವರ ಸಾಂದರ್ಭಿಕ ಪ್ರದರ್ಶನದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 172 ರನ್ ಗುರಿ ನೀಡಿದೆ.
 
ರವಿವಾರ ಟಾಸ್ ಜಯಿಸಿದ ಕೆಕೆಆರ್ ನಾಯಕ ಇಯಾನ್ ಮೊರ್ಗನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 171 ರನ್ ಗಳಿಸಿತು.

ರಾಹುಲ್ ತ್ರಿಪಾಠಿ ಹೊರತುಪಡಿಸಿ ಯಾವೊಬ್ಬ ಆಟಗಾರನು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆರಂಭಿಕ ಆಟಗಾರರಾದ ಶುಭಮನ್ ಗಿಲ್(9) ಹಾಗೂ ವೆಂಕಟೇಶ್ ಅಯ್ಯರ್(18)6 ಓವರ್‌ನೊಳಗೆ ಪೆವಿಲಿಯನ್ ಸೇರಿದರು. ದಿನೇಶ್ ಕಾರ್ತಿಕ್(26) ಹಾಗೂ ರಸೆಲ್(20) ಎರಡಂಕೆಯ ಸ್ಕೋರ್ ಗಳಿಸಿದರು. ನಾಯಕ ಮೊರ್ಗನ್ ಕೇವಲ 8 ರನ್ ಗಳಿಸಿ ಔಟಾದರು. ನಿತೀಶ್ ರಾಣಾ ಔಟಾಗದೆ 37 ರನ್ ಗಳಿಸಿ ತಂಡವು ಗೌರವಾರ್ಹ ಮೊತ್ತ ಗಳಿಸಲು ನೆರವಾದರು.

ಚೆನ್ನೈ ಬೌಲಿಂಗ್ ವಿಭಾಗದಲ್ಲಿ ಜೋಶ್ ಹೇಝಲ್‌ವುಡ್(2-40) ಹಾಗೂ ಶಾರ್ದೂಲ್ ಠಾಕೂರ್(2-20)ತಲಾ ಎರಡು ವಿಕೆಟ್ ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News