ಜಲಂಧರ್‌: ಅಂತರ್ ರಾಷ್ಟ್ರೀಯ ಕಬಡ್ಡಿ ಆಟಗಾರನ ಗುಂಡಿಕ್ಕಿ ಹತ್ಯೆ

Update: 2022-03-14 16:56 GMT
Photo:twitter

ಹೊಸದಿಲ್ಲಿ:ಜಲಂಧರ್‌ನ ಮಲಿಯನ್ ಹಳ್ಳಿಯಲ್ಲಿ ನಡೆದ ಕಬಡ್ಡಿ ಕಪ್‌ನಲ್ಲಿ ಅಂತರ್ ರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ನಂಗಲ್  ತಲೆ ಹಾಗೂ ಎದೆಯ ಮೇಲೆ ಸುಮಾರು 20 ಸುತ್ತು ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ.

ಜಲಂಧರ್ (ಗ್ರಾಮೀಣ) ಉಪ ಪೊಲೀಸ್ ವರಿಷ್ಠಾಧಿಕಾರಿ (ನಾಕೋಡರ್) ಲಖ್ವಿಂದರ್ ಸಿಂಗ್ ವರದಿಯನ್ನು ದೃಢಪಡಿಸಿದ್ದಾರೆ. ಕಬಡ್ಡಿ ಆಟಗಾರನ ಮೇಲೆ ಎಂಟರಿಂದ ಹತ್ತು ಗುಂಡುಗಳನ್ನು ಹಾರಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಸಂದೀಪ್ ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಜಗತ್ತನ್ನು ಆಳಿದ್ದರು. ಪಂಜಾಬ್ ಹೊರತುಪಡಿಸಿ  ಕೆನಡಾ, ಯುಎಸ್ಎ, ಇಂಗ್ಲೆಂಡ್ ನಲ್ಲೂ ಉತ್ತಮವಾಗಿ ಆಡಿದ್ದರು. ಅವರು ಭಾರತೀಯ ಕಬಡ್ಡಿ ಸ್ಪರ್ಧಿಯಾಗಿದ್ದರು. ಅವರು ಕಬಡ್ಡಿ ಫೆಡರೇಶನ್ ಅನ್ನು ನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News