ಐಪಿಎಲ್ ಫೈನಲ್ ನಲ್ಲಿ ಐತಿಹಾಸಿಕ ಜಯ ಸಾಧಿಸಿರುವ ಸಿಎಸ್ ಕೆ ತಂಡಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಅಭಿನಂದನೆ

Update: 2023-05-30 07:34 GMT

ಚೆನ್ನೈ: ಕಳೆದ ರಾತ್ರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಅಭಿನಂದಿಸಿದ್ದಾರೆ ಹಾಗೂ  ತಂಡದ ಗೆಲುವಿನ ಶ್ರೇಯಸ್ಸನ್ನು ಅದರ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸಮರ್ಪಿಸಿದ್ದಾರೆ.

ಸೋಮವಾರ ಅಹಮದಾಬಾದ್ ನಲ್ಲಿ ನಡೆದ ಮಳೆಬಾಧಿತ ಫೈನಲ್  ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿದ್ದ  ಸಿಎಸ್ ಕೆ ಐದನೇ ಬಾರಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ಈ ಕುರಿತು ಟ್ವೀಟಿಸಿರುವ  ಮುಖ್ಯಮಂತ್ರಿ ಸ್ಟಾಲಿನ್ ಅವರು ಮುಂಬೈ ಇಂಡಿಯನ್ಸ್‌ನ ಐದು ಐಪಿಎಲ್ ಪ್ರಶಸ್ತಿಗಳ ದಾಖಲೆಯನ್ನು ಸರಿಗಟ್ಟಿದ ಸಿಎಸ್‌ಕೆ ಪರ  ಗೆಲುವಿನ ರನ್ ಗಳಿಸಿದ ಆಲ್‌ರೌಂಡರ್ ರವೀಂದ್ರ ಜಡೇಜ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

" ಪ್ರತಿ ಸನ್ನಿವೇಶಕ್ಕೂ ಯೋಜನೆಯನ್ನು ಹೊಂದಿರುವ ವ್ಯಕ್ತಿ ಎಂ.ಎಸ್. ಧೋನಿ ನೇತೃತ್ವದಲ್ಲಿ 5 ನೇ ಐಪಿಎಲ್ ಟ್ರೋಫಿ ಗೆದ್ದುಕೊಂಡಿರುವ ಸಿಎಸ್‌ಕೆಯ ಹಳದಿ ಬ್ರಿಗೇಡ್‌ಗೆ ಅಭಿನಂದನೆಗಳು. ಇದು ಅತ್ಯುತ್ತಮ ಕ್ರಿಕೆಟ್ ಆಗಿದೆ ಹಾಗೂ  ಪ್ರತಿಕೂಲ ಪರಿಸ್ಥಿತಿಯಲ್ಲಿ ಜಡೇಜ ಐತಿಹಾಸಿಕ ವಿಜಯಕ್ಕೆ ಮುದ್ರೆಯೊತ್ತಿದ್ದಾರೆ. CSK. #IPLFinals2023" ಎಂದು ಮುಖ್ಯಮಂತ್ರಿ ಸ್ಟಾಲಿನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಕ್ರಿಕೆಟ್ ಪ್ರೇಮಿ, ಎಂ.ಕೆ. ಸ್ಟಾಲಿನ್ ಅನೇಕ ಸಿಎಸ್‌ಕೆ ಪಂದ್ಯಗಳಿಗೆ ವೈಯಕ್ತಿಕವಾಗಿ ಹಾಜರಾಗಿದ್ದಾರೆ,

Similar News