×
Ad

ಹೊಳೆನರಸೀಪುರ | ಬೈಕ್‌ಗೆ ಬಸ್‌ ಢಿಕ್ಕಿ; ಸಹಸವಾರೆ ‍ ಮೃತ್ಯು

Update: 2025-03-28 21:45 IST

ಹೊಳೆನರಸೀಪುರ : ಸಾರಿಗೆ ಬಸ್‌ವೊಂದು ಬೈಕ್‌ಗೆ ಢಿಕ್ಕಿಯಾದ ಪರಿಣಾಮ ಸಹಸವಾರೆ ಮೃತಪಟ್ಟಿರುವ ಘಟನೆ ಹೊಳೆನರಸೀಪುರ ತಾಲೂಕಿನ ಹೊನ್ನಿಕೊಪ್ಪಲು ತಿರುವಿನ ಸಮೀಪದ ಇಳಿಜಾರಿನಲ್ಲಿ ನಡೆದಿದೆ.

ಮೃತರನ್ನು ರಂಗೇನಹಳ್ಳಿಯ ಶಂಕರೇಗೌಡ ಎಂಬವರ ಪತ್ನಿ ಮಂಜುಳ (38) ಎಂದು  ಗುರುತಿಸಲಾಗಿದೆ. ಶುಕ್ರವಾರ ನೆಂಟರ ಮನೆಯಲ್ಲಿ ಪೂಜೆಗಾಗಿ ತೆರಳಿದ್ದ ಮಂಜುಳ, ಸಂಬಂಧಿಕರೊಂದಿಗೆ ಸ್ವಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಸಣ್ಣ ಗಾಯಗಳಾಗಿದ್ದು, ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News