×
Ad

ಹಾಸನ| ಕಾಡು ಹಂದಿ ದಾಳಿಗೆ ರೈತ ಬಲಿ

Update: 2023-12-19 15:26 IST

ಹಾಸನ: ಹೊಳೆನರಸೀಪುರ ತಾಲೂಕಿನ ಆರಗೋಡನಹಳ್ಳಿ ಗ್ರಾಮದ ರೈತನ ಮೇಲೆ ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ರೈತ ರಾಜೇಗೌಡರ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನಡೆದಿದೆ.

 ರೈತ ರಾಜೇಗೌಡ ಹಾಗೂ ಅವರ ಪತ್ನಿ ಶಾಂತಮ್ಮ ವೃದ್ಧ ದಂಪತಿಗಳು ಜಮೀನಿಗೆ ನೀರು ಹಾಯಿಸಲು ತೆರಳಿದ ಸಂದರ್ಭದಲ್ಲಿ ಕಾಡು ಹಂದಿಗಳು ದಾಳಿ‌ ನಡೆಸಿದ್ದರಿಂದ  ರಾಜೇಗೌಡ ಮೃತಪಟ್ಟಿದ್ದಾರೆ. ಅವರ ಪತ್ನಿ ಶಾಂತಮ್ಮ  ಗಂಭೀರ ಗಾಯಗೊಂಡಿದ್ದಾರೆ.  ಶಾಂತಮ್ಮನವರ ಕೈ ಹಾಗೂ ಕಾಲಿಗೆ ಗಾಯವಾಗಿದ್ದು ಹಾಸನದ ಹಿಮ್ಸ್ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News