ವ್ಯಾಪಕ ಪ್ರತಿಭಟನೆಗೆ ಮಣಿದ ಕೆನ್ಯಾ ಅಧ್ಯಕ್ಷ | ತೆರಿಗೆ ಹೆಚ್ಚಳ ಯೋಜನೆ ಸ್ಥಗಿತ
Update: 2024-06-27 22:45 IST
ವಿಲಿಯಂ ರೂಟೊ | PC : indiatay.com
ನೈರೋಬಿ : ದೇಶಾದ್ಯಂತ ನಡೆದ ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ವಿವಾದಾತ್ಮಕ ತೆರಿಗೆ ಹೆಚ್ಚಳ ಮಸೂದೆಯನ್ನು ವಾಪಾಸು ಪಡೆಯುವುದಾಗಿ ಕೆನ್ಯಾದ ಅಧ್ಯಕ್ಷ ವಿಲಿಯಂ ರೂಟೊ ಹೇಳಿದ್ದಾರೆ.
ತೆರಿಗೆ ಹೆಚ್ಚಳ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸಂಸತ್ಗೆ ಬೆಂಕಿ ಹಚ್ಚಲಾಗಿತ್ತು. ಬುಧವಾರ ದೇಶವನ್ನುದ್ದೇಶಿಸಿ ಮಾತನಾಡಿದ ರೂಟೊ `ಕೆನ್ಯಾ ಜನತೆಗೆ ಈ ಮಸೂದೆ ಒಪ್ಪಿಗೆಯಿಲ್ಲ ಎಂಬುದು ಸ್ಪಷ್ಟವಾಗಿದೆ. ಇದನ್ನು ನಾನು ಒಪ್ಪಿಕೊಂಡಿದ್ದು ಮಸೂದೆಗೆ ಸಹಿ ಹಾಕುವುದಿಲ್ಲ ಮತ್ತು ಅದು ಈಗ ಕಾನೂನಿನ ರೂಪ ಪಡೆಯುವುದಿಲ್ಲ. ಮಸೂದೆಯ ಬಗ್ಗೆ ಯುವಜನತೆಯೊಂದಿಗೆ ಸಂವಾದ ನಡೆಸಲಾಗುವುದು ' ಎಂದು ಹೇಳಿದ್ದಾರೆ.
ತೆರಿಗೆ ಹೆಚ್ಚಳ ಮಸೂದೆ ವಿರೋಧಿಸಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಕನಿಷ್ಟ 22 ಮಂದಿ ಮೃತಪಟ್ಟಿರುವುದಾಗಿ ಕೆನ್ಯಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರದಿ ಮಾಡಿತ್ತು.