LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ
ನೀತಿ ಸಂಹಿತೆ ಉಲ್ಲಂಘನೆ : ತೆಲಂಗಾಣ ಡಿಜಿಪಿ ಅಮಾನತು
ಛತ್ತೀಸ್ಗಡ : ಅಂಬಿಕಾಪುರ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವು ಗೆ ಸೋಲು. ಬಿಜೆಪಿ ಅಭ್ಯರ್ಥಿ ರಾಜೇಶ್ ಅಗರ್ವಾಲ್ ಗೆ ಗೆಲುವು
ತೆಲಂಗಾಣ : ಇವಿಎಂ ದೋಷ, 11 ಸುತ್ತಿನ ಮತ ಎಣಿಕೆ ನಂತರ ಹೈದರಾಬಾದ್ ಜುಬ್ಲಿಹಿಲ್ಸ್ ಕ್ಷೇತ್ರದ ಮತ ಎಣಿಕೆ ಸ್ಥಗಿತ
ತೆಲಂಗಾಣ : ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆಸಿಆರ್
ತೆಲಂಗಾಣ : ನಾಳೆ ಬೆಳಿಗ್ಗೆ ಹೈದರಾಬಾದ್ನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ
ಛತ್ತೀಸ್ಗಡ : ಕ್ರೈಸ್ತ ಸಮುದಾಯದ ಬಿಜೆಪಿಯ ಏಕೈಕ ಅಭ್ಯರ್ಥಿ ಪ್ರಬೋಧ್ ಮಿಂಜ್ ಗೆಲುವು
ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು : ತೆಲಂಗಾಣ ಜನತೆಗೆ ಧನ್ಯವಾದ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ
"ರಾಜಸ್ಥಾನದ ಜನರು ನೀಡಿದ ಜನಾದೇಶವನ್ನು ನಾವು ನಮ್ರತೆಯಿಂದ ಸ್ವೀಕರಿಸುತ್ತೇವೆ. ಇದು ಅನಿರೀಕ್ಷಿತ ಫಲಿತಾಂಶ..." : ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್
ಛತ್ತೀಸ್ಗಡ: ರಾಯ್ಪುರದ ಧರ್ಶಿವಾ ಕ್ಷೇತ್ರದಿಂದ ಬಿಜೆಪಿಯಿಂದ ಛಾಲಿವುಡ್ ಸೂಪರ್ಸ್ಟಾರ್ ಅನುಜ್ ಶರ್ಮಾ ದಾಖಲೆಯ ಗೆಲುವು
"ಸೋಲು ತಾತ್ಕಾಲಿಕ, ಈ ಹಿನ್ನಡೆಗಳನ್ನು ನಿವಾರಿಸುತ್ತೇವೆ": ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ