×
Ad

ರಿಕ್ಷಾ- ಸ್ಕೂಟರ್ ಅಪಘಾತ: ಸವಾರ ಮೃತ್ಯು

Update: 2023-09-14 20:22 IST

ಕಾರ್ಕಳ, ಸೆ.14: ರಿಕ್ಷಾ ಮತ್ತು ಸ್ಕೂಟರ್ ಮಧ್ಯೆ ಸೆ.13ರಂದು ಬೆಳಗ್ಗೆ ಹೊಸ್ಮಾರು ಗೇರು ಬೀಜ ಕಾರ್ಖಾನೆ ಬಳಿ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಬಗ್ಗೆ ವರದಿಯಾಗಿದೆ.

ಮೃತರನ್ನು ಸ್ಕೂಟರ್ ಸವಾರ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಹೊಸ್ಮಾರು -ಶಿರ್ತಾಡಿ ರಸ್ತೆಯಲ್ಲಿ ಶಿರ್ತಾಡಿ ಕಡೆಯಿಂದ ಹೊಸ್ಮಾರು ಕಡೆಗೆ ಹೋಗುತ್ತಿದ್ದ ಸ್ಕೂಟರ್, ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದು ಜಾರಿಕೊಂಡು ಹೋಗಿ ಹೊಸ್ಮಾರು ಕಡೆಯಿಂದ ಶಿರ್ತಾಡಿ ಕಡೆಗೆ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತ್ತೆನ್ನ ಲಾಗಿದೆ.

ಇದರ ಪರಿಣಾಮ ರಿಕ್ಷಾ ಮಗುಚಿ ಬಿದ್ದು, ಅಟೋ ರಿಕ್ಷಾದಲ್ಲಿ ಪ್ರಯಾಣಿಸು ತ್ತಿದ್ದ ಸುನೀಲ್ ತೀವ್ರವಾಗಿ ಗಾಯಗೊಂಡರು. ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಪ್ರಜ್ವಲ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News