Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಬರಪರಿಸ್ಥಿತಿಯ ವೀಕ್ಷಣೆ ಎಂಬ ಕಪಟ ನಾಟಕವೂ...

ಬರಪರಿಸ್ಥಿತಿಯ ವೀಕ್ಷಣೆ ಎಂಬ ಕಪಟ ನಾಟಕವೂ ಬಡಪಾಯಿ ರೈತರೂ!

ಕು.ಸ.ಮಧುಸೂದನ ರಂಗೇನಹಳ್ಳಿಕು.ಸ.ಮಧುಸೂದನ ರಂಗೇನಹಳ್ಳಿ16 Feb 2017 11:23 PM IST
share
ಬರಪರಿಸ್ಥಿತಿಯ ವೀಕ್ಷಣೆ ಎಂಬ ಕಪಟ ನಾಟಕವೂ ಬಡಪಾಯಿ ರೈತರೂ!

ಅಂತೂ ಕೇಂದ್ರ ಸರಕಾರ ಬರಪರಿಹಾರಕ್ಕೆಂದು ಕರ್ನಾಟಕಕ್ಕೆ ನಾಲ್ಕು ನೂರಐವತ್ತು ಕೋಟಿ ರೂಪಾಯಿಗಳ ಮೊದಲ ಕಂತನ್ನು ಆರ್ಥಿಕ ಇಲಾಖೆಯ ವತಿಯಿಂದ ಬಿಡುಗಡೆ ಮಾಡಿದೆ. ಕೇಂದ್ರ ಕಳುಹಿಸಿದ್ದ ಬರ ಅಧ್ಯಯನ ತಂಡ ಒಂದೆರಡು ದಿನ ಬರಪೀಡಿತ ಪ್ರದೇಶಗಳಲ್ಲಿ ಅಡ್ಡಾಡಿ ಸಲ್ಲಿಸಿದ ವರದಿಯ ಪರಿಣಾಮವಾಗಿ ಕೇಂದ್ರ ಸುಮಾರು ಒಂದುಸಾವಿರದ ಏಳುನೂರು ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದ್ದು, ಈಗದರ ಮೊದಲ ಕಂತು ಬಿಡುಗಡೆಯಾಗಿದೆ. ವಿಪರ್ಯಾಸ ಎಂದರೆ ತನ್ನ ರಾಜ್ಯದ ಬರಪರಿಹಾರ ಕಾರ್ಯಗಳಿಗೆ ನಮ್ಮ ರಾಜ್ಯ ಕೇಂದ್ರವನ್ನು ಕೇಳಿದ್ದು ಸರಿ ಸುಮಾರು ನಾಲ್ಕು ಸಾವಿರ ಕೋಟಿರೂಪಾಯಿಗಳನ್ನು! ಇರಲಿ, ಬಿಡುಗಡೆಯಾದ ಪರಿಹಾರ ಮೊತ್ತದ ಬಗ್ಗೆ ನಾನಿಲ್ಲಿ ಮಾತನಾಡಲು ಇಚ್ಚಿಸುವುದಿಲ್ಲ. ನನ್ನ ತಕರಾರು ಇರುವುದು ಬರದ ಅಧ್ಯಯನಕ್ಕೆಂದು ರಾಜ್ಯಗಳಿಗೆ ಭೇಟಿ ನೀಡುವ ಕೇಂದ್ರದ ತಂಡಗಳು ಬರಪ್ರದೇಶಗಳ ವೀಕ್ಷಣೆ ಮಾಡುವ ರೀತಿಯ ಬಗ್ಗೆ.

ಇದರಲ್ಲಿ ಮೊದಲು ಉದ್ಭವವಾಗುವ ಪ್ರಶ್ನೆ ಎಂದರೆ, ರಾಜ್ಯಕ್ಕೆ ಬರುವ ತಂಡ ಬರಗಾಲ ಎದುರಿಸುತ್ತಿರುವ ಯಾವ ಪ್ರದೇಶಗಳಿಗೆ ಭೇಟಿ ನೀಡಬೇಕೆಂಬುದನ್ನು ನಿರ್ಧರಿಸುವವರು ಯಾರು ಎನ್ನುವುದಾಗಿದೆ. ಕೇಂದ್ರ ತಂಡಕ್ಕೆ ರಾಜ್ಯದ ಭೌಗೋಳಿಕ ಮಾಹಿತಿ ಇಲ್ಲದಿರುವುದರಿಂದ ರಾಜ್ಯ ಸರಕಾರಗಳ ಉನ್ನತ ಅಧಿಕಾರಿಗಳೇ ಕೇಂದ್ರ ತಂಡದ ಪ್ರವಾಸದ ರೂಪುರೇಷೆಯನ್ನು ನಿಗದಿ ಪಡಿಸುತ್ತಾರೆ.

ಹೀಗೆ ಬರುವ ಕೇಂದ್ರದ ತಂಡಗಳು ರಾಜ್ಯದಲ್ಲಿ ವಾರಗಟ್ಟಲೆಯೇನು ತಂಗುವುದಿಲ್ಲ ಮತ್ತು ಪ್ರವಾಸ ಕೈಗೊಳ್ಳುವುದಿಲ್ಲ. ಹೆಚ್ಚೆಂದರೆ ಪ್ರವಾಸ ಕೈಗೊಳ್ಳಲಿರುವ ಎರಡು ಮೂರು ದಿನಗಳಲ್ಲಿಯೇ ಬರದ ಪರಿಣಾಮಗಳನ್ನು ಅವರು ಅಧ್ಯಯನ ಮಾಡಬೇಕಾಗುತ್ತದೆ. ಹೀಗೆ ಇಷ್ಟು ಅಲ್ಪಾವಧಿಯಲ್ಲಿ ಬರದಿಂದ ಸಂಕಷ್ಟ ಎದುರಿಸುತ್ತಿರುವ ರೈತರು ಮತ್ತು ಜಾನುವಾರುಗಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಎಂಬುದೇ ಇಲ್ಲಿರುವ ಮುಖ್ಯ ಪ್ರಶ್ನೆಯೂ ಮತ್ತು ಕುತೂಹಲವೂ ಜನರದ್ದಾಗಿದೆ. ಈ ಪ್ರಶ್ನೆ ಜನರ ಮನಸ್ಸಲ್ಲಿ ಉದ್ಭವವಾಗಲು ಪ್ರಮುಖ ಕಾರಣವೆಂದರೆ ಈ ಬಾರಿ ಬರ ಅಧ್ಯಯನಕ್ಕೆಂದು ಬಂದ ಕೇಂದ್ರ ತಂಡ ಪ್ರವಾಸ ಮಾಡಿದ ರೀತಿ ಮತ್ತು ಅದರ ಸದಸ್ಯರು ತೋರಿಸಿದ ದಿವ್ಯನಿರ್ಲಕ್ಷ್ಯ!

ಇಲ್ಲಿ ನಾವು ಸ್ವಲ್ಪ ವಿವರವಾಗಿ ಈ ಬರವೀಕ್ಷಣೆಯ ಪ್ರವಾಸದ ಕಾರ್ಯಕ್ರಮಗಳ ಬಗ್ಗೆ ನೋಡೋಣ. ಕೇಂದ್ರದಿಂದ ಬರುವ ತಂಡವನ್ನು ವಿಧಾನಸೌಧದ ಹಿರಿಯ ಅಧಿಕಾರಿಗಳು ಸ್ವಾಗತಿಸಿ, ಆ ತಂಡ ಪ್ರವಾಸ ಮಾಡಬೇಕಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮುಂದಿನ ಜವಾಬ್ದಾರಿ ಹೆಗಲಿಗೇರಿಸುತ್ತಾರೆ. ಜಿಲ್ಲಾ ಕೇಂದ್ರದಲ್ಲಿ ತಂಡವನ್ನು ಎದುರುಗೊಳ್ಳುವ ಜಿಲ್ಲಾಧಿಕಾರಿ ತನ್ನ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಹೇಳಿ ತಂಡ ಭೇಟಿ ನೀಡಬೇಕಾದ ಪ್ರದೇಶಗಳ ಬಗ್ಗೆ ನಿರ್ಧರಿಸಲು ತಿಳಿಸಿರುತ್ತಾರೆ. ಹಾಗಾಗಿ ಆ ಅಧಿಕಾರಿಗಳು ಕೇಂದ್ರ ತಂಡ ಪ್ರವಾಸ ಮಾಡಲು ಒಂದು ರೂಟ್ ಮ್ಯಾಪನ್ನು ಸಿದ್ದಪಡಿಸಿ, ಆ ದಾರಿಯಲ್ಲಿ ತಂಡ ಹೋಗುವಾಗ ಯಾವ್ಯಾವ ಸ್ಥಳಗಳಲ್ಲಿ ರೈತರ ಭೂಮಿಯನ್ನು, ನಾಶಹೊಂದಿದ ಬೆಳೆಯನ್ನು, ನೀರಿರದೆ ಒಣಗಿರುವ ಕೆರೆಕಟ್ಟೆಗಳನ್ನು ತೋರಿಸಬೇಂಬುದನ್ನು ಮೊದಲೇ ಗುರುತು ಮಾಡಿಟ್ಟುಕೊಂಡಿರುತ್ತಾರೆ.

ಜೊತೆಗೆ ಮಾರ್ಗಮಧ್ಯದ ಯಾವ ಹಳ್ಳಿಗಳಲ್ಲಿ ತಂಡದ ಸದಸ್ಯರು ರೈತರ ಜೊತೆ ಮತ್ತು ಪಂಚಾಯತ್ ಮಟ್ಟದ ಅಧಿಕಾರಿಗಳ ಜೊತೆ ಮಾತಾಡಬೇಕೆಂಬುದನ್ನೂ ಮೊದಲೇ ನಿಷ್ಕರ್ಷೆ ಮಾಡಿಬಿಟ್ಟಿರುತ್ತಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ತಂಡದ ಸದಸ್ಯರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ, ರಾತ್ರಿಯ ಭೋಜನ ಮತ್ತು ತಂಗುದಾಣಗಳ ಬಗ್ಗೆಯೂ ಬಹಳ ಮುತುವರ್ಜಿಯಿಂದ ವ್ಯವಸ್ಥೆ ಕಲ್ಪಿಸಿರುತ್ತಾರೆ. ಇದನ್ನು ಮಾತ್ರ ಎಷ್ಟು ಆಸಕ್ತಿಯಿಂದ ಮಾಡಿರುತ್ತಾರೆ ಎಂದರೆ ಎಲ್ಲಿ ತಂಡದ ಸದಸ್ಯರು ತಮ್ಮ ಆತಿಥ್ಯಕ್ಕೆ ತೃಪ್ತರಾಗದೆ ತಮ್ಮ ರಾಜ್ಯಕ್ಕೆ ವ್ಯತಿರಿಕ್ತವಾದ ವರದಿಯನ್ನು ನೀಡಿ ಬಿಡುತ್ತಾರೊ ಎಂಬ ಭೀತಿಯಿಂದಲೇ ಸರ್ವ ಸಿದ್ಧತೆಗಳನ್ನು ಲೋಪವಿರದೆ ಮಾಡಿರುತ್ತಾರೆ.

ಇಷ್ಟೆಲ್ಲ ಸಿದ್ಧತೆಗಳ ನಂತರ ಪ್ರವಾಸ ಮಾಡುವ ಕೇಂದ್ರದ ತಂಡಗಳು ರಾಜ್ಯದ ಕೆಳಮಟ್ಟದ ಅಧಿಕಾರಿಗಳು ತೋರಿಸುವ ಹೊಲಗದ್ದೆಗಳನ್ನು ಕೆರೆ ಕಟ್ಟೆಗಳನ್ನು ಪ್ರವಾಸಿಗರಂತೆ ನೋಡುತ್ತಾರೆ. ಹೊರದೇಶದ ಪ್ರವಾಸಿಗರಂತೆ ಪೋಟೊಗಳನ್ನು ಕ್ಲಿಕ್ಕಿಸಿಕೊಂಡು ಹೋಗುತ್ತಾರೆ. ನಮ್ಮ ಅಧಿಕಾರಿಗಳು ಎಷ್ಟು ಜವಾಬ್ದಾರಿಯಿಂದ ಈ ಪ್ರವಾಸದ ಹಾದಿಯನ್ನು ನಿಗದಿ ಮಾಡಿರುತ್ತಾರೆ ಎಂದರೆ ತಂಡದ ವಾಹನಗಳು ಕುಲುಕದಂತಹ ಮತ್ತು ರಸ್ತೆಯ ಎರಡೂ ಪಕ್ಕದಲ್ಲಿ ಹೊಲಗದ್ದೆಗಳು ಇರುವಂತಹ ಹಳ್ಳಿಗಳಿಗಷ್ಟೇ ಕರೆದುಕೊಂಡು ಹೋಗುತ್ತಾರೆ.

ಕೆಲವು ಕಡೆ ವಾಹನಗಳಿಂದ ಇಳಿಯುವ ತಂಡದ ಸದಸ್ಯರು ಒಂದೆರಡು ನಿಮಿಷಗಳಲ್ಲಿ ಸ್ಥಳ ಪರಿಶೀಲನೆ ಮಾಡಿ ಪುನಃ ವಾಹನಗಳನ್ನು ಏರುತ್ತಾರೆ. ಆ ಜಮೀನಿನಲ್ಲಿರುವ ರೈತರನ್ನಾಗಲಿ, ಕೃಷಿ ಕಾರ್ಮಿಕರನ್ನಾಗಲಿ ಮಾತಾಡಿಸುವ ಸಾಹಸವನ್ನು ಅವರು ಮಾಡುವುದಿಲ್ಲ. ಯಾಕೆಂದರೆ ಮೊದಲಿಗೇ ಅವರಿಗೆ ಭಾಷೆಯ ಸಮಸ್ಯೆ, ಎರಡನೆಯದಾಗಿ ಮಾತಾಡಿಸಲು ಹೋದರೆ ರೈತ ಸಮುದಾಯವೇ ಅವರನ್ನು ಮುತ್ತಿಕೊಂಡು ಸಂಜೆಯವರೆಗೂ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಎಲ್ಲಿ ಶುರು ಮಾಡುತ್ತಾರೆಯೊ ಎಂಬ ಭಯ.

ತಮಾಷೆ ಎಂದರೆ ನೀರಿರದೆ ಒಣಗಿರುವ ಕೃಷಿಭೂಮಿಯನ್ನು ನೋಡಿದಾಕ್ಷಣ ಅದರ ಒಡೆಯನ ಕಷ್ಟ ಸದಸ್ಯರಿಗೆ ಅರ್ಥವಾಗಿ ಬಿಡುತ್ತದೆ ಎಂಬ ಭ್ರಮೆ ನಮ್ಮ ಅಧಿಕಾರಶಾಹಿಗೆ ಇರುವುದಾಗಿದೆ. ವಾಸ್ತವದಲ್ಲಿ ಒಂದೊಂದು ತುಂಡು ಭೂಮಿಯ ರೈತನದೂ ಒಂದೊಂದು ರೀತಿಯ ಬವಣೆ ಇದೆಯೆನ್ನುವುದು ಯಾವ ಸದಸ್ಯರಿಗೂ ಅರ್ಥವಾಗುವಂತಹದ್ದಲ್ಲ. ಇನ್ನು ಭಾಷೆಯ ಸಮಸ್ಯೆ ಬಗ್ಗೆ ನೋಡೋಣ.ರೈತರು ಏನು ಹೇಳುತ್ತಾರೊ ಅದನ್ನು ಅಧಿಕಾರಿಗಳು ಇಂಗ್ಲಿಷ್‌ಗೆ ಅನುವಾದ ಮಾಡಿ ತಂಡದ ಸದಸ್ಯರಿಗೆ ಹೇಳಬೇಕು.

ಆದರೆ ನಮ್ಮ ಅಧಿಕಾರಿಗಳು ಎಷ್ಟರ ಮಟ್ಟಿಗೆರೈತರ ಕಷ್ಟಕಾರ್ಪಣ್ಯಗಳನ್ನು ಇಂಗ್ಲಿಷ್‌ನಲ್ಲಿ ಸದಸ್ಯರಿಗೆ ಹೇಳುತ್ತಾರೆಯೊ ದೇವರಿಗೇ ಗೊತ್ತು! ಇನ್ನು ರೈತರನ್ನೇ ಮಾತಾಡಿಸಲು ಸಮಯವಿರದ ತಂಡದ ಸದಸ್ಯರಿಗೆ ಅವರ ಜಾನುವಾರುಗಳ ಸಂಕಷ್ಟವನ್ನು ನೋಡಲು ಸಾಧ್ಯವಾಗುವುದಾದರು ಹೇಗೆ? ಕಂಡರೂ ಜಾನುವಾರುಗಳು ಸದಸ್ಯರಿಗೆ ಹೇಗೆ ತಮ್ಮ ಹಸಿವು ಮತ್ತು ಬಾಯಾರಿಕೆಯನ್ನು ವಿವರಿಸಿಯಾವು? ಹೀಗೆ ಒಂದು ಹಳ್ಳಿಯಲ್ಲಿ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಇರದ ತಂಡದ ಸದಸ್ಯರದ್ದು ಹಾರಿಕೆಯ ಭೇಟಿಗಳಾಗಿರುತ್ತವೆ. ಮೊನ್ನೆ ಬಂದು ಹೋದ ಕೇಂದ್ರ ತಂಡದ್ದೂ ಇದೇ ಕತೆ: ಯಾಕೆಂದರೆ ಯಾವುದೇ ಒಂದು ಹಳ್ಳಿಯಲ್ಲೂ ತಂಡ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಇದ್ದು ಸಮಸ್ಯೆ ಆಲಿಸಲೇ ಇಲ್ಲ.

ಇದಕ್ಕೆ ಕಾರಣ ಹಳ್ಳಿಗಳ ಬಗ್ಗೆಯಾಗಲಿ, ರೈತಾಪಿ ಜನರ ಕಷ್ಟ ಕಾರ್ಪಣ್ಯಗಳ ಬಗ್ಗೆಯಾಗಲಿ, ಬರಗಾಲದಲ್ಲಿ ಜಾನುವಾರುಗಳು ಅನುಭವಿಸುವ ಯಾತನೆಗಳನ್ನಾಗಲಿ ಅರ್ಥಮಾಡಿಕೊಳ್ಳಲಾಗದಂತಹ ಒಂದು ಅಧಿಕಾರಶಾಹಿಯನ್ನು ನಾವು ಸೃಷ್ಟಿಸಿಕೊಂಡಿರುವುದಾಗಿದೆ. ನಮ್ಮ ರಾಜ್ಯದ ಸ್ಥಳೀಯ ಅಧಿಕಾರಿಗಳಿಗೇನೆ ಈ ಬರದ ಬಗ್ಗೆ ಸೂಕ್ಷ್ಮ ಮಾಹಿತಿಯಾಗಲಿ, ಅವುಗಳಿಗೆ ಸ್ಪಂದಿಸುವ ಕಾಳಜಿಯಾಗಲಿ ಇಲ್ಲವಾಗಿದ್ದು, ಇನ್ನು ಕೇಂದ್ರದ ತಂಡದಿಂದ ಅದನ್ನು ನಿರೀಕ್ಷಿಸುವುದು ನಮ್ಮ ಮೂರ್ಖತನವಾಗುತ್ತದೆ.

 ಇದೆಲ್ಲ ಹಾಳಾಗಿ ಹೋಗಲಿ. ನಮ್ಮ ರಾಜ್ಯದ ಬರಗಾಲದ ವ್ಯಾಪ್ತಿ ಎಷ್ಟು? ಎಷ್ಟು ಹೆಕ್ಟೇರ್ ಭೂಮಿಯಲ್ಲಿನ ಬೆಳೆ ನೀರಿರದೆ ಒಣಗಿ ಹೋಗಿದೆ? ಅಂತಹ ಭೂಮಿಯಲ್ಲಿ ಯಾವ ಯಾವ ಬೆಳೆಗಳನ್ನು ಬೆಳೆಯಲಾಗುತ್ತಿತ್ತು? ಮತ್ತು ಆ ಬೆಳೆಗೆ ರೈತರು ಹಾಕಿರಬಹುದಾದ ಬಂಡವಾಳದ ಮೊತ್ತವೆಷ್ಟು? ಇದರಿಂದ ಸಂಕಷ್ಟಕ್ಕೀಡಾಗಿರುವ ಜನಸಂಖ್ಯೆಯಾದರೂ ಎಷ್ಟು? ಎಷ್ಟು ಸಾವಿರ ಜಾನುವಾರುಗಳು ಬರಗಾಲದ ಹೊಡೆತಕ್ಕೆ ತತ್ತರಿಸಿವೆ ಎಂಬ ಅಂಕಿಅಂಶಗಳು ರಾಜ್ಯಸರಕಾರದ ಬಳಿಯಾದರೂ ಇವೆಯೇ ಎಂದು ನೋಡಿದರೆ, ಇಲ್ಲ. 

ಅದರ ಬಳಿ ಇರುವುದೆಲ್ಲ ಅಂದಾಜು ಅಂಕಿಸಂಖ್ಯೆಗಳು ಮಾತ್ರ. ಒಂದು ವರ್ಷದ ಬರಗಾಲದಿಂದ ಆಗಬಹುದಾದ ಹಾನಿಯನ್ನು ಕರಾರುವಕ್ಕಾಗಿ ಲೆಕ್ಕಹಾಕಿಡುವ ಪರಿಪಾಠವೇ ನಮ್ಮ ಸರಕಾರಗಳಿಗಿಲ್ಲವಾಗಿದ್ದು ಒಂದೆರಡು ದಿನದ ಪ್ರವಾಸದಿಂದ ಕೇಂದ್ರ ತಂಡ ಲೆಕ್ಕಹಾಕಿ ಬಿಡುತ್ತದೆ ಎಂದು ನಂಬುವುದಾದರು ಹೇಗೆ. ಯಾವುದೇ ಸರಕಾರಗಳೂ ಬರಗಾಲದ ಹೊಡೆತಕ್ಕೆ ಸಿಕ್ಕ ಒಟ್ಟು ಜನಸಂಖ್ಯೆಯ ಬಗ್ಗೆಯಾಗಲಿ, ಜಾನುವಾರುಗಳ ಬಗ್ಗೆಯಾಗಲಿ ನಿಖರವಾದ ಮಾಹಿತಿಯನ್ನು ಹೊಂದಿಲ್ಲವಾದ್ದರಿಂದ ಬರ ಪರಿಹಾರಕ್ಕೆ ಎಷ್ಟು ಹಣ ಬೇಕಾಗುತ್ತದೆ ಎಂಬುದು ಸಹ ಅಧಿಕಾರಿಗಳ ಊಹಾತ್ಮಕ ಲೆಕ್ಕಾಚಾರ ಮಾತ್ರವಾಗಿರುತ್ತದೆ

ಇನ್ನು ಬರಪರಿಸ್ಥಿತಿಯ ಅಧ್ಯಯನ ಮಾಡಿಹೋದ ಕೇಂದ್ರದ ತಂಡ ಮಾಡುವುದಾದರು ಕಣ್ಣೊರೆಸುವ ಕೆಲಸವನ್ನೇ, ರಾಜ್ಯ ಸರಕಾರ ಕೇಂದ್ರಕ್ಕೆ ಎಷ್ಟು ಹಣದ ಮನವಿ ಸಲ್ಲಿಸಿರುತ್ತದೆಯೊ ಅದರಲ್ಲಿ ಮೂರನೆ ಒಂದು ಭಾಗವನ್ನೊ, ಎರಡು ಭಾಗವನ್ನೊ ರಾಜ್ಯಕ್ಕೆ ನೀಡಲು ಯಾಂತ್ರಿಕವಾಗಿ ಶಿಫಾರಸು ಮಾಡುತ್ತದೆ. ಇನ್ನು ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರಗಳಿದ್ದರೆ ಕೇಳಿದಷ್ಟಾದರು ಸಿಗುತ್ತದೆ. ಆದರೆ ವರ್ತಮಾನದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೂ, ಕೇಂದ್ರದಲ್ಲಿ ಭಾಜಪದ ಸರಕಾರವೂ ಇದ್ದು ಇವೆರಡರ ರಾಜಕೀಯ ಜಟಾಪಟಿಯಲ್ಲಿ ಸಹಜವಾಗಿಯೇ ಕೇಂದ್ರ ಹಣ ಬಿಡುಗಡೆಯಲ್ಲಿ ವಿಳಂಬ ನೀತಿ ಅನುಸರಿಸುತ್ತದೆ. 

ಕಾರಣ ಕೇಳಿದರೆ ಕಳೆದ ವರ್ಷ ನೀಡಿದ ಹಣದ ಖರ್ಚುವೆಚ್ಚಗಳ ವಿವರಗಳನ್ನು ನೀಡಿಲ್ಲವಾದ್ದರಿಂದ ಹಣ ಬಿಡುಗಡೆಯಾಗಿಲ್ಲವೆಂಬ ಯಾಂತ್ರಿಕ ಉತ್ತರ ಸಿಗುತ್ತದೆ. ನಂತರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ನಡೆದು ಕೊನೆಗೊಂದು ದಿನ ಕೇಂದ್ರತಂಡ ಶಿಫಾರಸು ಮಾಡಿದ ಹಣದಲ್ಲಿ ಮತ್ತಷ್ಟು ಕಡಿತ ಮಾಡಿ ಕೇಂದ್ರ ಹಣ ಬಿಡುಗಡೆ ಮಾಡುತ್ತದೆ. ಹಣ ಕಡಿಮೆಯಾಗಿದ್ದಕ್ಕೆ ಆಕ್ರೋಶಗೊಳ್ಳುವ ರಾಜ್ಯ ಸರಕಾರದವರು ಕೇಂದ್ರದ ಮಲತಾಯಿ ಧೋರಣೆಯ ಬಗ್ಗೆ ಜನರ ಮುಂದೆ ಭಾಷಣ ಬಿಗಿಯ ತೊಡಗುತ್ತಾರೆ. ವಿರೋಧಪಕ್ಷಗಳು ಇದು ರಾಜ್ಯಸರಕಾರದ ವೈಫಲ್ಯವೆಂದು ಗುಡುಗ ತೊಡಗುತ್ತಾರೆ. ಇವೆಲ್ಲ ಹಾರಾಟ-ಹೋರಾಟಗಳು ಮುಗಿದು ಪರಿಸ್ಥಿತಿ ಒಂದು ಹಂತಕ್ಕೆ ಬರುವುದರ ಒಳಗಾಗಿ ಅನೇಕ ರೈತರು ಆತ್ಮಹತ್ಯೆಗೆ ಶರಣಾಗಿರುತ್ತಾರೆ.ಬರಪರಿಹಾರಕ್ಕೆ ನೀಡಬೇಕಾದ ಹಣವನ್ನು ರೈತನ ಆತ್ಮಹತ್ಯೆಗೆ ಪರಿಹಾರವಾಗಿ ಕೊಡಬೇಕಾಗುತ್ತದೆ.

ಇವೆಲ್ಲವೂ ಒಂದು ಸುತ್ತು ಮುಗಿಯುವಷ್ಟರಲ್ಲಿ ಆ ವರ್ಷವೇ ಮುಗಿದು ಮತ್ತೊಂದು ಮುಂಗಾರಿಗೆ ರೈತ ಕಾಯುವ ಕಾಲ ಬಂದಿರುತ್ತದೆ. ನಮ್ಮನ್ನಾಳುವ ಸರಕಾರಿ ಯಂತ್ರವೊಂದು ಸೂಕ್ಷ್ಮತೆ ಕಳೆದುಕೊಂಡಾಗ, ಅಧಿಕಾರದ ಅಮಲು ಮನುಷ್ಯತ್ವವನ್ನು ಮರೆತಾಗ ಪ್ರತೀ ರಾಜ್ಯದಲ್ಲೂ ಈ ಪರಿಸ್ಥಿತಿ ಮರುಕಳಿಸುತ್ತಲೇ ಇರುತ್ತದೆ. ಇದು ಕೇವಲ ಬರ ಪರಿಹಾರಕ್ಕೆ ಮಾತ್ರ ಸೀಮಿತವಲ್ಲ. ಅತಿವೃಷ್ಟಿ ತಲೆದೋರಿದಾಗಲೂ ಇಂತಹುದೇ ಸರಕಾರಿ ಪ್ರಾಯೋಜಿತ ಪ್ರಹಸನಗಳು ಪುನರಾವರ್ತನೆಯಾಗುತ್ತವೆ.

ಬರಪರಿಹಾರ ಎಂದು ಕರೆಯುವ ಹಸುವನ್ನು ಸಾಕುತ್ತಲೇ ಹೋಗುತ್ತಿರುವ ಸರಕಾರಗಳು ಮತ್ತು ಅಧಿಕಾರಶಾಹಿಗಳು ಬರಗಾಲವನ್ನು ಬೇಡ ಎನ್ನಲು ಯಾವ ಕಾರಣವೂ ಇಲ್ಲ ಎಂಬುದೇ ಈ ನಾಡಿನ ದುರಂತ!

share
ಕು.ಸ.ಮಧುಸೂದನ ರಂಗೇನಹಳ್ಳಿ
ಕು.ಸ.ಮಧುಸೂದನ ರಂಗೇನಹಳ್ಳಿ
Next Story
X