Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ‘ಪುರಾಣದ ರೂಪಕಗಳು’ : ನಡುದಾರಿಯ ಆಯ್ಕೆ

‘ಪುರಾಣದ ರೂಪಕಗಳು’ : ನಡುದಾರಿಯ ಆಯ್ಕೆ

ಕೃತಿ ಪರಿಚಯ

-ಕಾರುಣ್ಯಾ-ಕಾರುಣ್ಯಾ19 Feb 2017 11:28 PM IST
share
‘ಪುರಾಣದ ರೂಪಕಗಳು’ : ನಡುದಾರಿಯ ಆಯ್ಕೆ

ಪುರಾಣ ರೂಪಕಗಳನ್ನು ಮುರಿದು ಕಟ್ಟುವ ಕೆಲಸಗಳನ್ನು ಈ ಹಿಂದೆ ಹಲವು ಲೇಖಕರು, ವಿಮರ್ಶಕರು ಮಾಡಿದ್ದಾರೆ. ಕುವೆಂಪು ಅವರು ತಮ್ಮ ಮಹಾಕಾವ್ಯದಲ್ಲಿ ಮತ್ತು ನಾಟಕಗಳಲ್ಲಿ ಇದನ್ನು ಮಾಡಿ ಟೀಕೆಗಳನ್ನೂ ಎದುರಿಸಿದ್ದರು. ಅದಾಗಲೇ ಮರಾಠಿಯಲ್ಲಿ ಇರಾವತಿ ಕರ್ವೆ ಅವರ ‘ಯುಗಾಂತ’ ಮಹಾಭಾರತದ ಹಲವು ಒಳನೋಟಗಳನ್ನು ಸಮಾಜಕ್ಕೆ ತೆರೆದಿಟ್ಟಿತ್ತು.

ಪೋಲಂಕಿಯವರ ‘ಸೀತಾಯಣ’ ಕೃತಿ, ರಾಮಾಯಣ ಪಾತ್ರಗಳ ಮನೋ ವಿಶ್ಲೇಷಣೆ ನಡೆಸಿದ ಅಪರೂಪದ ಕೃತಿ. 80ರ ದಶಕದಲ್ಲಿ ಇದು ಬೆಂಕಿಯ ಅಲೆಯನ್ನೇ ಎಬ್ಬಿಸಿತ್ತು. ಪುರಾಣಗಳ ಅವಲೋಕನಕ್ಕೆ ಈ ಕೃತಿ ಹೊಸ ಆಯಾಮವನ್ನೇ ನೀಡಿತು. ಇತ್ತೀಚಿನ ದಿನಗಳಲ್ಲಿ ಪುರಾಣ ಪಾತ್ರಗಳನ್ನು ವಿಶ್ಲೇಷಣೆ ಮಾಡಲು ಹೋಗಿ ಮೈ ಸುಟ್ಟುಕೊಂಡವರಲ್ಲಿ ಲೇಖಕ ಯೋಗೇಶ್ ಮಾಸ್ಟರ್ ಒಬ್ಬರು. ‘ಢುಂಢಿ’ ಕೃತಿ ಮಾರುಕಟ್ಟೆಗೆ ಬರಲಿಲ್ಲವಾದರೂ, ಇಂದಿಗೂ ಮಾಸ್ಟರ್ ಅವರು ಆ ಹೆಸರಿನಲ್ಲೇ ಖ್ಯಾತರಾಗಿದ್ದಾರೆ.

ಗಣಪತಿಯ ಪಾತ್ರವಿಶ್ಲೇಷಣೆಯನ್ನು ಹೊಂದಿದ ಕೃತಿ ಇದು. ಆದರೆ ತೀವ್ರ ಪ್ರತಿರೋಧ ಬಂದ ಕಾರಣ ಆ ಕೃತಿ ನಿಷೇಧಕ್ಕೊಳಗಾಯಿತು. ಆದರೆ ಈ ಪುರಾಣಗಳ ರೂಪಕಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಾ, ತಮ್ಮ ಬರಹವನ್ನು ಯೋಗೇಶ್ ಅವರು ಮುಂದುವರಿಸುತ್ತಾ ಬಂದರು.

ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಗಟ್ಟುಗಳಲ್ಲಿ ಅವುಗಳನ್ನು ವಿಶ್ಲೇಷಿಸಿದರು. ಗೌರಿ ಲಂಕೇಶ್ ಪತ್ರಿಕೆಯಲ್ಲಿ ಇದು ಧಾರಾವಾಹಿಯಾಗಿ ಬಂತು. ಇದೀಗ ‘ಪುರಾಣದ ರೂಪಕಗಳು’ ಎಂಬ ಹೆಸರಿನಲ್ಲಿ ಈ ಕೃತಿಯನ್ನು ರಾಜಮಾರ್ಗ ಸಾಹಿತ್ಯ ಸಂಸ್ಕೃತಿ ಪ್ರಕಟಿಸಿದೆ.

ಸುಮಾರು 200 ಪುಟಗಳ ಈ ಕೃತಿಯಲ್ಲಿ ಪುರಾಣ, ಇತಿಹಾಸ ಮತ್ತು ವಾಸ್ತವ ಮುಖಾಮುಖಿಯಾಗುತ್ತವೆ. ಪುರಾಣದ ಮಿತಿಯನ್ನು ಹೇಳುತ್ತಲೇ, ಅದರೊಂದಿಗೆ ಈ ನೆಲದ ಇತಿಹಾಸ ಹೇಗೆ ರೂಪಕಗಳ ಮೂಲಕ ಒಳಗೊಂಡಿದೆ ಎನ್ನುವುದನ್ನು ಅವರು ಸರಳವಾಗಿ ವಿಶ್ಲೇಷಿಸುತ್ತಾರೆ.

ಒಂದು ರೀತಿಯಲ್ಲಿ ರೂಪಕಗಳನ್ನು ಒಡೆದು ಅದರಲ್ಲಿರುವ ವಾಸ್ತವಗಳನ್ನು ತೆರೆದು ಕೊಡುತ್ತಾರೆ ಮತ್ತು ಜೊಳ್ಳುಗಳನ್ನು ಬೇರ್ಪಡಿಸಿ ಅದರ ಹಿಂದಿರುವ ಹುನ್ನಾರಗಳನ್ನು ಬಹಿರಂಗಪಡಿಸುತ್ತಾರೆ. ವಿನಾಯಕ, ಸಮುದ್ರ ಮಥನ, ವಿಜಯದಶಮಿ ಹಬ್ಬ, ಕೃಷ್ಣನೂ ಒಬ್ಬ ಅಸುರ, ಶಿಷ್ಟ ಆರ್ಯರು, ಅನಾರ್ಯ ಅಸುರರು, ಸನಾತನವಲ್ಲದ ಹಿಂದೂಧರ್ಮ, ಸರಸ್ವತಿ-ಅವಳ ಸ್ಥಿತಿಗತಿ ಹೀಗೆ....ಅತ್ಯಂತ ವಿವಾದಾತ್ಮಕ ವಸ್ತುಗಳನ್ನು ಇಟ್ಟುಕೊಂಡು ಅವರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ.

ಒಂದು ರೀತಿಯಲ್ಲಿ ಇಲ್ಲಿ ಪುರಾಣಗಳ ನೇರ ತಿರಸ್ಕಾರ ಇಲ್ಲ. ಹಾಗೆಯೇ ಕಣ್ಣು ಮುಚ್ಚಿ ಅವರು ಒಪ್ಪಿಕೊಂಡೂ ಇಲ್ಲ. ಎರಡರ ನಡುವಿನ ದಾರಿಯಲ್ಲಿ ಅವರು ಸಾಗಿದ್ದಾರೆ. ಗತ ಮತ್ತು ವರ್ತಮಾನಗಳ ನಡುವಿನ ತುಕ್ಕು ಹಿಡಿದ ಕೊಂಡಿಯ ಗಟ್ಟಿತನವನ್ನು ಅವರು ನಿಕಷಕ್ಕೆ ಒಡ್ಡಿದ್ದಾರೆ.

ಕೃತಿಯ ಮುಖ ಬೆಲೆ 150 ರೂಪಾಯಿ. ಕೃತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 88806 60347.

share
-ಕಾರುಣ್ಯಾ
-ಕಾರುಣ್ಯಾ
Next Story
X