Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಎರಡು ಕಣ್ಣುಗಳು ಸಾಲದು: ಒಳಗಣ್ಣಿನಿಂದ...

ಎರಡು ಕಣ್ಣುಗಳು ಸಾಲದು: ಒಳಗಣ್ಣಿನಿಂದ ನೋಡಿದ ಸಿನೆಮಾ

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ24 Feb 2017 11:59 PM IST
share
ಎರಡು ಕಣ್ಣುಗಳು ಸಾಲದು: ಒಳಗಣ್ಣಿನಿಂದ ನೋಡಿದ ಸಿನೆಮಾ

 ಒಂದು ಸಿನೆಮಾವನ್ನು ನಮ್ಮದಾಗಿಸಲು ಎರಡು ಕಣ್ಣು ಸಾಲದು. ಒಳ್ಳೆಯ ಸಿನೆಮಾಗಳು ನಾವು ಏನನ್ನು ನೋಡುತ್ತೇವೆಯೋ ಅದಷ್ಟನ್ನೇ ಹೇಳುವುದಿಲ್ಲ. ಅದಕ್ಕಾಗಿಯೇ ನಮ್ಮಾಳಗಿನ ಮೂರನೆಯ ಕಣ್ಣು ತೆರೆದುಕೊಂಡಾಗ, ಸಿನೆಮಾಕ್ಕೆ ಒಬ್ಬ ಒಳ್ಳೆಯ ವೀಕ್ಷಕ ದಕ್ಕುತ್ತಾನೆ. ವಿ. ಎನ್. ಲಕ್ಷ್ಮೀನಾರಾಯಣ ರಾವ್ ಅವರ ‘ಎರಡು ಕಣ್ಣು ಸಾಲದು’ ಕೃತಿ ಮೂಡಿ ಬಂದಿರುವುದು ಈ ಹಿನ್ನೆಲೆಯಲ್ಲಿ. ಸಿನೆಮಾ ರಸಗ್ರಹಣ ಸಂದರ್ಭದಲ್ಲಿ ವೀಕ್ಷಕನ ಹೊಣೆಗಾರಿಕೆಯನ್ನು ನೆನಪಿಸಿಕೊಡುವ ಪುಟ್ಟ ಕೃತಿ ಇದು. ಈ ಕೃತಿಯಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಸಿನೆಮಾ ರಸಗ್ರಹಣದ ಕುರಿತು ಅರಿವು ಮೂಡಿಸುವ ಮೂರು ಬರಹಗಳಿವೆ ಮತ್ತು ಆ ಮೂಲಕ ಸಿನೆಮಾವನ್ನು ನೋಡಿ, ಕಟ್ಟಿಕೊಟ್ಟ ವಿಶ್ಲೇಷಣೆ, ವಿಮರ್ಶೆ ಎರಡನೆ ಭಾಗದಲ್ಲಿವೆ. ಮುನ್ನುಡಿಯಲ್ಲಿ ಹೇಳುವಂತೆ, ಮೊದಲ ಭಾಗದಲ್ಲಿರುವ ಮೂರು ಲೇಖನಗಳು ಒಂದು ಸೃಜನಶೀಲ ಮಾಧ್ಯಮದ ಆಳ ಅಗಲ ಮತ್ತು ಮಿತಿಯನ್ನು ವಿವರಿಸಲು ಪ್ರಯತ್ನಿಸುತ್ತದೆ. ಈ ಮಾಧ್ಯಮಕ್ಕಿರುವ ದೈತ್ಯ ಶಕ್ತಿಯನ್ನು ಹೇಳುತ್ತಲೇ ಸಂಯಮ ಮೀರಿದರೆ ಆಗಬಹುದಾದ ಅನಾಹುತ, ದುರಂತಗಳ ಬಗ್ಗೆ ಎಚ್ಚರಿಕೆಯನ್ನೂ ಈ ಭಾಗ ನೀಡುತ್ತದೆ.

‘ಸಿನೆಮಾ ಭಾಷೆ’, ‘ಎರಡು ಕಣ್ಣು ಸಾಲದು’, ‘ಸಿನೆಮಾಂತರಂಗ’ ಮೊದಲ ಭಾಗದಲ್ಲಿರುವ ಈ ಮೂರು ಲೇಖನಗಳು ನಮಗೆ ಸಿನೆಮಾವನ್ನು ನೋಡುವ ಕ್ರಮವನ್ನು ಕಲಿಸಿಕೊಡುತ್ತದೆ. ಸಿನೆಮಾ ವ್ಯವಹಾರವಾದಾಗ, ಹಣ ಮಾಡುವ ದಂಧೆಯಾದಾಗ, ತನ್ನ ಸೃಜಶೀಲ ಸೂಕ್ಷ್ಮತೆಗಳನ್ನು ಬದಿಗಿಟ್ಟು ತಾಂತ್ರಿಕತೆಯ ವೈಭವೀಕರಣವಾದಾಗ ಆ ಮಾಧ್ಯಮ ಹೇಗೆ ಸಮಾಜಕ್ಕೆ ಸಮಸ್ಯೆಯಾಗಬಲ್ಲದು ಎನ್ನುವುದನ್ನು ಲೇಖಕರು ವಿವರಿಸುತ್ತಾರೆ. ‘‘ಸಿನೆಮಾದ ಅರ್ಥ, ಸೂಕ್ಷ್ಮಗಳ ಬಗ್ಗೆ ಏನೂ ಅರಿಯದ ಸಿನೆಮಾ ತಂತ್ರಜ್ಞರು ಅಧಿಕಾರಯುತವಾಗಿ ಕೊಡುವ ತೀರ್ಮಾನಗಳು, ಅನೇಕ ವೇಳೆ ಸಿನೆಮಾ ಮತ್ತು ಸಹೃದಯರ ದಾರಿತಪ್ಪಿಸುತ್ತವೆ’’ ಎಂದು ತಮ್ಮ ಬರಹದಲ್ಲಿ ಅಭಿಪ್ರಾಯಪಡುತ್ತಾರೆ. ಇಲ್ಲಿ ತಮ್ಮ ಮಾತುಗಳಿಗೆ ಸಮರ್ಥನೆಯಾಗಿ ತಾವು ನೋಡಿದ ಚಿತ್ರಗಳನ್ನು ಉದಾಹರಣೆಯಾಗಿ ನೀಡುತ್ತಾ ವಿವರಿಸುವುದರಿಂದ, ಬರಹ ನಮ್ಮನ್ನು ಆತ್ಮೀಯವಾಗಿ ಒಳಗೊಳ್ಳತೊಡಗುತ್ತದೆ ಮತ್ತು ನಾವು ಈ ಹಿಂದೆ ನೋಡಿದ ಸಿನೆಮಾವನ್ನು ಮತ್ತೊಮ್ಮೆ ಹೊಸದಾಗಿ ನೋಡಿ ಗ್ರಹಿಸುವುದಕ್ಕೆ ಒತ್ತಾಯವನ್ನು ಮಾಡುತ್ತದೆ. ಚಿಂತನ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿ ಒಟ್ಟು ಪುಟಗಳು 152. ಕೃತಿಯ ಮುಖಬೆಲೆ 110 ರೂಪಾಯಿ. ಆಸಕ್ತರು 99022 49150 ಸಂಖ್ಯೆಯನ್ನು ಸಂಪರ್ಕಿಸಬಹುದು.

share
ಕಾರುಣ್ಯಾ
ಕಾರುಣ್ಯಾ
Next Story
X