Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಪೇಜಾವರಶ್ರೀಗೆ ಭಾರತೀಯನೊಬ್ಬನ ಕಳಕಳಿಯ...

ಪೇಜಾವರಶ್ರೀಗೆ ಭಾರತೀಯನೊಬ್ಬನ ಕಳಕಳಿಯ ಪತ್ರ

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ26 Feb 2017 11:53 PM IST
share
ಪೇಜಾವರಶ್ರೀಗೆ ಭಾರತೀಯನೊಬ್ಬನ ಕಳಕಳಿಯ ಪತ್ರ

‘ಅರಮನೆ-ಗುರುಮನೆ’ ನಡುವಿನ ಅನೈತಿಕ ಸಂಬಂಧ ಹೇಗೆ ನಮ್ಮ ನಾಡನ್ನು ನಾಶದ ಕಡೆಗೆ ಒಯ್ಯಬಹುದು ಎನ್ನುವುದನ್ನು ತೆರೆದಿಡುವ ಕೃತಿಯಾಗಿದೆ ಜಿ. ಕೆ. ಗೋವಿಂದರಾವ್ ಅವರು ಬರೆದ ‘ಮನು ವಿರುದ್ಧ ಅಂಬೇಡ್ಕರ್’ ಕೃತಿ. ಅತ್ಯಂತ ಕುತೂಹಲಕರ ಸಂಗತಿಯೆಂದರೆ, ಈ ಕೃತಿ ಒಂದು ಸುದೀರ್ಘ ಪತ್ರವಾಗಿದೆ. ಅರಮನೆಯ ಜೊತೆಗೆ ಪರೋಕ್ಷ ಸಂಬಂಧವನ್ನು ಇಟ್ಟುಕೊಂಡಿರುವ ಗುರುಮನೆಗೆ ಗೋವಿಂದರಾವ್ ಅವರು ಬರೆದ ಪತ್ರದ ಸಾರವೇ ಈ ಪುಸ್ತಕ ರೂಪವಾಗಿ ಹೊರಬಂದಿದೆ. ವರ್ತಮಾನದ ರಾಜಕೀಯ, ತಾತ್ವಿಕ, ಧರ್ಮಸೂಕ್ಷ್ಮ ಹಾಗೂ ವಾಸ್ತವಿಕ ಪ್ರಶ್ನೆಗಳನ್ನೆತ್ತಿ ಸಂವಾದ ನಡೆಸುವ ರೀತಿಯಲ್ಲಿ ಹಿರಿಯ ಚಿಂತಕ, ವಿಚಾರವಾದಿ ರಂಗಕರ್ಮಿ ಪ್ರೊ. ಜಿ.ಕೆ.ಗೋವಿಂದರಾವ್ ಅವರು ಪೇಜಾವರಶ್ರೀಗಳಿಗೊಂದು ದೀರ್ಘ ಪತ್ರವನ್ನು ಬರೆದಿದ್ದಾರೆ. ಮುನ್ನುಡಿಯಲ್ಲಿ ಹೇಳುವಂತೆ, ಇಲ್ಲಿ ವೈಯಕ್ತಿಕ ಅನ್ನುವಂಥದೇನೂ ಇಲ್ಲದೆ ಗೋವಿಂದರಾವ್-ಪೇಜಾವರ ಸ್ವಾಮೀಜಿ ಅಂತೆಯೇ ಅಂಬೇಡ್ಕರ್-ಮನು ಇವರೆಲ್ಲರೂ ಮನುಷ್ಯಕುಲಕ್ಕೆ ಬಿಡುಗಡೆ ನೀಡುವ, ಬಂಧನಕ್ಕೆ ಒಳಪಡಿಸುವ ಎರಡು ಮನೋಧರ್ಮಗಳ ಸಂಕೇತ, ಪ್ರತಿನಿಧಿಗಳಾಗಿದ್ದಾರೆ. ಮನುಷ್ಯ ನಾಗರಿಕತೆಯನ್ನು ಕಟ್ಟಿಕೊಂಡಾಗಿನಿಂದ ನಡೆಯುತ್ತಾ ಬಂದಿರುವ ವಾಗ್ವಾದದ ಸರಪಳಿಯಲ್ಲಿ ಗೋವಿಂದರಾವ್ ಅವರ ಬರಹ ಇತ್ತೀಚಿನ ಸೇರ್ಪಡೆಯಾಗಿದೆ.

ಒಂದು ಲೇಖನ ನಮ್ಮನ್ನು ಒಳಗೊಳ್ಳುವುದಕ್ಕಿಂತ ಒಂದು ಪತ್ರ ಹೆಚ್ಚು ಆತ್ಮೀಯವಾಗಿ ನಮ್ಮನ್ನು ತಟ್ಟುತ್ತದೆ, ಮುಟ್ಟುತ್ತದೆ. ಪತ್ರಬರೆಯುವವನು ಮತ್ತು ಓದುವವನ ನಡುವೆ ಸಂವಹನಕ್ಕೆ ಅವಕಾಶವಿದೆ. ಅಂದರೆ ತಾನು ಯಾರ ವಿರುದ್ಧ ಮಾತನಾಡುತ್ತಿದ್ದೇನೆಯೋ ಅವರ ಮಾತುಗಳನ್ನು ಆಲಿಸುವ ಉದ್ದೇಶವನ್ನು ಪತ್ರ ಹೊಂದಿರುತ್ತದೆ. ಇಲ್ಲಿ ಜಿ.ಕೆ. ರಂಗನಾಥ ರಾವ್ ಅವರ ಚಿಂತನೆಗಳು ಇಷ್ಟವಾಗುವುದು ಈ ಕಾರಣಕ್ಕಾಗಿ. ತನ್ನ ಮಾತುಗಳೇ ಅಂತಿಮ ಎಂದು ಮುಕ್ತಾಯ ಹಾಡದೆ, ಪೇಜಾವರ ಶ್ರೀಗಳನ್ನೂ ಚರ್ಚೆಗೆ ಆಹ್ವಾನಿಸುತ್ತಾರೆ. ಇಲ್ಲಿ ಪೇಜಾವರ ಶ್ರೀ ಒಂದು ನೆಪ ಮಾತ್ರ. ಸನಾತನ ಮನು ಚಿಂತನೆಯನ್ನು ತಲೆಯಲ್ಲಿ ಧರಿಸಿಕೊಂಡ ಎಲ್ಲರನ್ನೂ ಗುರಿಯಾಗಿಸಿಕೊಂಡು ಈ ಪತ್ರವನ್ನು ಬರೆಯಲಾಗಿದೆ.

ಪೇಜಾವರಶ್ರೀಗಳು ಮಾಧ್ಯಮಗಳಲ್ಲಿ ನೀಡಿದ ಕೆಲವು ಗೊಂದಲಕಾರಿ ಹೇಳಿಕೆಗಳೇ ಜಿಕೆ ಅವರ ಈ ಪತ್ರಕ್ಕೆ ಕಾರಣವಾಗಿದೆ. ಪಂಕ್ತಿಭೇದದ ಕುರಿತಂತೆ ವಿರೋಧಾಭಾಸ ಹೇಳಿಕೆಗಳು, ಶಾಸ್ತ್ರ ಮತ್ತು ಸಂವಿಧಾನವನ್ನು ಸಮನ್ವಯಗೊಳಿಸಬೇಕು ಎಂಬ ಪೇಜಾವರ ನಿಲುವುಗಳನ್ನು ಇಟ್ಟುಕೊಂಡು ತನ್ನ ಪತ್ರವನ್ನು ಆರಂಭಿಸುತ್ತಾರೆ. ಅದು ಕೇವಲ ಉಡುಪಿಗೆ ಸೀಮಿತವಾಗದೆ ಇಡೀ ದೇಶವನ್ನು ಆವರಿಸುತ್ತಿರುವ ಮತಾಂಧತೆ, ಮೂಲಭೂತವಾದ, ಜಾತೀಯತೆಯನ್ನು ಚರ್ಚಿಸುತ್ತದೆ. ಜಿಕೆ ಗೋವಿಂದರಾವ್ ಬರೆದ ಪತ್ರ, ಮಾನವೀಯ ವೌಲ್ಯಗಳ ಮೇಲೆ ನಂಬಿಕೆಯಿಟ್ಟ ಪ್ರತೀ ಭಾರತೀಯನ ಆತಂಕಗಳಾಗಿವೆ. ಅಳಲುಗಳಾಗಿವೆ. ಪೇಜಾವರ ಶ್ರೀ ಈ ಪತ್ರವನ್ನು ಬಿಡಿಸಿ ಓದಿ, ತಮ್ಮನ್ನು ತಾವು ಆತ್ಮವಿಮರ್ಶೆಗೆ ಒಡ್ಡಿಕೊಳ್ಳಬೇಕಾಗಿದೆ.

ಗದಗದ ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿ 68 ಪುಟಗಳನ್ನು ಹೊಂದಿವೆ. ಮುಖಬೆಲೆ 30 ರೂಪಾಯಿ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

share
ಕಾರುಣ್ಯಾ
ಕಾರುಣ್ಯಾ
Next Story
X