Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಜಾತಿ ಬೇಡ, ಧರ್ಮ ಬೇಡ ಆಯ್ಕೆ ಬೇಕು!

ಜಾತಿ ಬೇಡ, ಧರ್ಮ ಬೇಡ ಆಯ್ಕೆ ಬೇಕು!

ವಾರ್ತಾಭಾರತಿವಾರ್ತಾಭಾರತಿ25 March 2017 11:47 PM IST
share
ಜಾತಿ ಬೇಡ, ಧರ್ಮ ಬೇಡ ಆಯ್ಕೆ ಬೇಕು!

ಯಾವುದೇ ಧರ್ಮವನ್ನು ಪಾಲಿಸದ ವ್ಯಕ್ತಿಗಳಿಗಾಗಿ ಧರ್ಮ/ಜಾತಿ ಇಲ್ಲ ಎಂಬ ಆಯ್ಕೆಯನ್ನೂ ನೀಡಬೇಕೆಂದು ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸಿ ಈ ದಂಪತಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ವಿಶೇಷವೆಂದರೆ ಹೈದರಾಬಾದ್ ಹೈಕೋರ್ಟ್ ಈ ಬಗ್ಗೆ ಎರಡು ವಾರಗಳಲ್ಲಿ ಉತ್ತರ ನೀಡಬೇಕೆಂದು ಈ ಮೂರು ಸರಕಾರಗಳಿಗೆ ಸೂಚಿಸಿದೆ.

ಹಿಂದೂ, ಇಸ್ಲಾಂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಅಥವಾ ಇತರೆ -ಇದು ಧರ್ಮಗಳ ಬಗ್ಗೆ ಇರುವ ಆಯ್ಕೆಗಳು. ಇತರೆ ಎನ್ನುವುದು ಮೇಲೆ ಹೇಳಿರದ ಯಾವುದೇ ಧರ್ಮವೊಂದನ್ನು ಅನುಸರಿಸುತ್ತಿದ್ದರೆ ನಮೂದಿಸಬಹುದು. ಆದರೆ, ಯಾವುದೇ ಧರ್ಮವನ್ನು ಪಾಲಿಸದಿದ್ದರೆ, ಅವರೇನು ಬರೆಯಬೇಕು?-ಹೀಗೊಂದು ಪ್ರಶ್ನೆಯನ್ನು ಎತ್ತಿದವರು ಹೈದರಾಬಾದಿನ ರಾಮಕೃಷ್ಣ ರಾವ್ ಹಾಗೂ ಕ್ಲಾರೆನ್ಸ್ ಕೃಪಾಲಿನಿ ದಂಪತಿ.

ಎಲ್ಲಾ ಸರಕಾರಿ ಅರ್ಜಿಗಳಲ್ಲಿ, ಅದು ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸಲಾಗಿರಬಹುದು, ಉದ್ಯೋಗಕ್ಕೆ ಅರ್ಜಿ ಸಲ್ಲಿಸಲಿರಬಹುದು ಅಥವಾ ಪಾಸ್‌ಪೋರ್ಟ್ ಮಾಡಿಸಲಿರಬಹುದು, ಅದರಲ್ಲಿ ಧರ್ಮ/ಜಾತಿ ಎಂಬಲ್ಲಿ ವಿವಿಧ ಧರ್ಮಗಳಲ್ಲಿ ಒಂದನ್ನು ನಮೂದಿಸುವುದು ಕಡ್ಡಾಯ. ಆದರೆ, ಯಾವುದೇ ಧರ್ಮವನ್ನು ಪಾಲಿಸದ ವ್ಯಕ್ತಿಗಳಿಗಾಗಿ ಧರ್ಮ/ಜಾತಿ ಇಲ್ಲ ಎಂಬ ಆಯ್ಕೆಯನ್ನೂ ನೀಡಬೇಕೆಂದು ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸಿ ಈ ದಂಪತಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ವಿಶೇಷವೆಂದರೆ ಹೈದರಾಬಾದ್ ಹೈಕೋರ್ಟ್ ಈ ಬಗ್ಗೆ ಎರಡು ವಾರಗಳಲ್ಲಿ ಉತ್ತರ ನೀಡಬೇಕೆಂದು ಈ ಮೂರು ಸರಕಾರಗಳಿಗೆ ಸೂಚಿಸಿದೆ.

ಕ್ರೈಸ್ತ ಮತೀಯರಾಗಿದ್ದ ಕ್ಲಾರೆನ್ಸ್ ಮತ್ತು ಯಾವುದೇ ನಂಬಿಕೆಯನ್ನು ಪಾಲಿಸದೆ ಇದ್ದ ರಾಮಕೃಷ್ಣ ರಾವ್ ಪರಸ್ಪರ ಪ್ರೀತಿಸಿ ಮದುವೆಯಾದವರು. ಮಕ್ಕಳಾದಾಗ, ಅವರನ್ನು ಯಾವುದೇ ಧರ್ಮಕ್ಕೆ ಸೀಮಿತಗೊಳಿಸದೆ ಜಾತ್ಯತೀತ ಮತ್ತು ವೈಚಾರಿಕ ವ್ಯಕ್ತಿಗಳಾಗಿ ಬೆಳೆಸಲು ಪಣತೊಟ್ಟವರು. ಆದರೆ, ಅದಕ್ಕೆ ಪದೇಪದೇ ಎದುರಾಗುತ್ತಿದ್ದ ಕಾನೂನು ತೊಡಕುಗಳಿಂದ ಬೇಸತ್ತು ದಂಪತಿಯು ಈ ಒಂದು ಧರ್ಮ/ಜಾತಿ ಇಲ್ಲ ಎಂಬ ಆಯ್ಕೆಗಾಗಿ ಹೋರಾಟಕ್ಕೆ ಇಳಿದಿದ್ದಾರೆ.

2010ನೆ ವರ್ಷದಲ್ಲಿ ತಮ್ಮ ಕಿರಿಮಗಳು ಸಹಜಾಳನ್ನು ಶಾಲೆಗೆ ದಾಖಲುಗೊಳಿಸುವ ಸಂದರ್ಭದಲ್ಲಿ, ಮಗುವಿನ ತಂದೆಯ ಅಥವಾ ತಾಯಿಯ ಧರ್ಮವನ್ನು ನಮೂದಿಸಲು ಶಾಲಾ ದಾಖಲು ಮಾಡುವ ಸಿಬ್ಬಂದಿ ಸೂಚಿಸುತ್ತಾರೆ. ಇದು ಮುಂದಕ್ಕೆ ಮಗುವಿನ ವರ್ಗಾವಣೆ ಪ್ರಮಾಣಪತ್ರವನ್ನು ನೀಡಲು ಆವಶ್ಯಕ ಎಂದೂ ತಿಳಿಸುತ್ತಾರೆ. ಆದರೆ, ದಂಪತಿಯು ಈ ಬಗ್ಗೆ ಶಾಲಾ ಸಿಬ್ಬಂದಿಯ ಜೊತೆ ತಮ್ಮ ವಿಭಿನ್ನ ನಂಬಿಕೆಗಳ ಬಗ್ಗೆ ತಿಳಿಸುತ್ತಾರೆ. ಆದರೂ ಶಾಲೆಯ ದಾಖಲು ಪ್ರಕ್ರಿಯೆಯಲ್ಲಿ ಅದು ಅಗತ್ಯ ಎಂದು ಪಟ್ಟು ಹಿಡಿದಾಗ ಈ ದಂಪತಿಯು ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ಹಾಗೂ ಆಂಧ್ರದ ಮಾನವ ಹಕ್ಕು ಆಯೋಗವನ್ನು ಸಂಪರ್ಕಿಸುತ್ತಾರೆ. ಆದರೆ, ಫಲಿತಾಂಶ ಶೂನ್ಯ. ಸಮಯದ ಅಭಾವ ಹಾಗೂ ಮಗಳ ವಿದ್ಯಾಭ್ಯಾಸದ ಕಾರಣದಿಂದ ಧರ್ಮ ನಮೂದಿಸುವ ಜಾಗದಲ್ಲಿ ತಮ್ಮ ಧರ್ಮವನ್ನು ನಮೂದಿಸುತ್ತಾರೆ. ಏಳು ವರ್ಷಗಳ ಬಳಿಕ ಅಂದರೆ ಈ ವರ್ಷ ತಮ್ಮ ಹಿರಿಮಗಳು 10ನೆ ತರಗತಿ ಪರೀಕ್ಷೆಗೆ ಹಾಜರಾಗಲು ಆನ್‌ಲೈನ್ ಅರ್ಜಿ ಸಲ್ಲಿಸುವಾಗಲೂ ವಿವಿಧ ಧರ್ಮಗಳ ಆಯ್ಕೆ ಇತ್ತು. ಜೊತೆಗೆ ಇತರೆ ಆಯ್ಕೆಯೂ ಇತ್ತು. ಆದರೆ, ಯಾವುದೇ ಧರ್ಮವನ್ನು ಪಾಲಿಸದ ನಮಗೆ ಆಯ್ಕೆ ಯಾಕಿಲ್ಲ ಎಂದು ರಾವ್ ಪ್ರಶ್ನಿಸುತ್ತಾರೆ. ಆದರೆ, ಈ ಬಗ್ಗೆ ಸಂಬಂಧಿಸಿದವರನ್ನು ಪ್ರಶ್ನಿಸಿದಾಗ ಯಾವುದೇ ಸೂಕ್ತ ಪರಿಹಾರ ಲಭಿಸಲಿಲ್ಲ.

ಧರ್ಮ/ಜಾತಿ ನಮೂದಿಸಲು ಇಷ್ಟವಿಲ್ಲದವರು ಇರಲಾರರೇ? ಎಂಬ ಬಗ್ಗೆ ಕುತೂಹಲಗೊಂಡ ರಾವ್, ಭಾರತೀಯ ಜನಗಣತಿಯ ಅಂಕಿಅಂಶಗಳಿರುವ ಪ್ರಾಧಿಕಾರದ ಮಹಾನಿರ್ದೇಶಕರಲ್ಲಿ ಮಾಹಿತಿ ಕೇಳಿದರು. 2011ರ ಜನಗಣತಿಯ ಪ್ರಕಾರ 28.7ಲಕ್ಷ ಜನರು ತಮ್ಮ ಧರ್ಮವನ್ನು ನಮೂದಿಸಲು ಇಷ್ಟಪಟ್ಟಿಲ್ಲ ಎಂಬ ಮಾಹಿತಿ ಲಭ್ಯವಾಯಿತು. ಈ ಬಗ್ಗೆ ಮಾತನಾಡುವ ರಾವ್, ಈ 28.7ಲಕ್ಷ ಜನರು ನನ್ನ ಆಯ್ಕೆಯನ್ನೇ ಪುರಸ್ಕರಿಸುತ್ತಾರೆ. ನಾನು ಧಾರ್ಮಿಕ ಮತ್ತು ಜಾತಿ ಆಧಾರಿತ ಮೀಸಲಾತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಆದರೆ, ತಮ್ಮ ಧರ್ಮ/ಜಾತಿಯನ್ನು ಗುರುತಿಸಲು ಇಷ್ಟಪಡದವರಿಗೆ ಆ ಆಯ್ಕೆಯೂ ಇರಲಿ. ಧರ್ಮ/ಜಾತಿ ಆಯ್ಕೆಯಂತೆ ಧರ್ಮವಿಲ್ಲ/ಜಾತಿಯಿಲ್ಲ ಆಯ್ಕೆಯೂ ಬೇಕು ಎಂಬುದು ನನ್ನ ನಿಲುವು.

ನಾನು ಯಾವುದೇ ನಂಬಿಕೆಯನ್ನು ಪಾಲಿಸುತ್ತಿಲ್ಲ. ನನ್ನ ಪತ್ನಿ ಇಂದಿಗೂ ಕ್ರೈಸ್ತ ಧರ್ಮವನ್ನು ಪಾಲಿಸುತ್ತಾಳೆ, ನನ್ನ ಈ ಹೋರಾಟಕ್ಕೆ ಕೈಜೋಡಿಸಿದ್ದಾಳೆ. ನಮ್ಮ ಸಮಾಜ, ಕಾನೂನುಗಳೂ ಇದೇ ರೀತಿ ಅವಕಾಶ ನೀಡಬೇಕಿದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಎಂಬುದು ಧರ್ಮವನ್ನು ಪಾಲಿಸಲು ಹಾಗೂ ಯಾವುದೇ ಧರ್ಮವನ್ನು ಪಾಲಿಸದಿರಲು ಬೇಕಾದ ಹಕ್ಕಾಗಬೇಕಿದೆ ಎನ್ನುತ್ತಾರೆ. ಇದಕ್ಕಾಗಿ ಆನ್‌ಲೈನ್ ಪಿಟಿಶನ್ ಕೂಡಾ ತಯಾರಿಸಿರುವ ರಾವ್, ಅದಕ್ಕೆ ಸಾರ್ವಜನಿಕರ ಬೆಂಬಲವನ್ನೂ ಕೋರಿದ್ದಾರೆ.

ಕೃಪೆ : www.thebetterindia.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X