Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಬಂಡವಾಳಿಗರ ಬಣ್ಣ ಬಯಲುಗೊಳಿಸುವ ಬೀದಿನಾಟಕ...

ಬಂಡವಾಳಿಗರ ಬಣ್ಣ ಬಯಲುಗೊಳಿಸುವ ಬೀದಿನಾಟಕ ‘ಕಾಸ್‌ಲೆಸ್’

ಜಗದೀಶ್ ಕೆಂಗನಾಳ, ಹೊಸಕೋಟೆಜಗದೀಶ್ ಕೆಂಗನಾಳ, ಹೊಸಕೋಟೆ6 April 2017 12:13 AM IST
share
ಬಂಡವಾಳಿಗರ ಬಣ್ಣ ಬಯಲುಗೊಳಿಸುವ ಬೀದಿನಾಟಕ ‘ಕಾಸ್‌ಲೆಸ್’

ನೋಟು ಅಮಾನ್ಯದ ನಂತರ ಈಗ ಕ್ಯಾಶ್‌ಲೆಸ್ ವಹಿವಾಟಿಗಾಗಿ ದೇಶಾದ್ಯಂತ ಒತ್ತಡ ತರಲಾಗುತ್ತಿದೆ. ಡಿಜಿಟಲ್ ವ್ಯವಹಾರ ಮಾಡುವುದರಿಂದ ತೆರಿಗೆಸೋರಿಕೆ ನಿಂತುಹೋಗಿ ದೇಶ ಅಭಿವೃದ್ಧಿ ಹೊಂದುತ್ತದೆಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ.. ಈ ನಗದುರಹಿತ ವಹಿವಾಟಿನಿಂದ ನಿಜಕ್ಕೂ ಯಾರಿಗೆ ಲಾಭವಾಗುತ್ತಿದೆ..? ಈ ಕ್ಯಾಶ್‌ಲೆಸ್ ಹಿಂದಿರುವ ಹುನ್ನಾರಗಳೇನು? ಎನ್ನುವುದನ್ನು ತೋರಿಸುವ ಬೀದಿನಾಟಕ ‘ಕಾಸ್‌ಲೆಸ್’.

ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಪ್ರೆಸ್ ಕ್ಲಬ್ ಬೆಂಗಳೂರು ಹಾಗೂ ಪ್ರಯೋಗರಂಗವು ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ನಾಟಕಗಳ ಸಂಭ್ರಮದಲ್ಲಿ ಮಾರ್ಚ್ 26 ರಂದು ಪ್ರೆಸ್‌ಕ್ಲಬ್ ಆವರಣದಲ್ಲಿ ಶಶಿಕಾಂತ ಯಡಹಳ್ಳಿಯವರು ರಚಿಸಿ ನಿರ್ದೇಶಿಸಿದ ‘ಕಾಸ್‌ಲೆಸ್’ ನಾಟಕವನ್ನು ‘ಸೃಷ್ಟಿ ಜನನಾಟ್ಯ ಕಲಾಕೇಂದ್ರ’ದ ಯುವ ಕಲಾವಿದರು ಪ್ರದರ್ಶಿಸಿದರು.

ಡಿಜಿಟಲ್ ಮಾಧ್ಯಮವನ್ನು ಬಳಸಿಕೊಂಡು ಇಡೀ ದೇಶದ ವ್ಯವ ಹಾರವನ್ನೇ ಕ್ಯಾಶ್‌ಲೆಸ್ ಮಾಡಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಈ ಅವಕಾಶವನ್ನು ತಮ್ಮ ಲಾಭಕ್ಕೋಸ್ಕರ ಬಳಸಿಕೊಂಡು ಜನರ ಹಣವನ್ನು ಲೂಟಿಹೊಡೆಯಲು ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ಅತೀ ಹೆಚ್ಚು ಕ್ರಿಯಾಶೀಲವಾಗಿವೆ. ಜನರ ಹಣ ಮತ್ತು ವಹಿವಾಟುಗಳ ನಡುವೆ ಮಧ್ಯವರ್ತಿಯಾಗಿ ಪೇಟಿಯಂ, ಜಿಯೋ ಮನಿ, ಭೀಮ.. ಮುಂತಾದ ತರಾವರಿ ಆ್ಯಪ್‌ಗಳು ಕ್ಯಾಶ್‌ಲೆಸ್ ವ್ಯವಹಾರಕ್ಕೆ ಬಳಕೆಯಾಗುತ್ತಿವೆ. ಮೊದಮೊದಲು ಜನರನ್ನು ಅಡಿಕ್ಟ್ ಮಾಡಲು ಉಚಿತವಾಗಿ ವಹಿವಾಟನ್ನು ಒದಗಿಸಿದರೂ ತದನಂತರ ಸೇವಾ ತೆರಿಗೆ ರೂಪದಲ್ಲಿ ಹಣವನ್ನು ಪಡೆಯುವ ಈ ಕಂಪೆನಿಗಳು ಲಕ್ಷಾಂತರ ಕೋಟಿ ಹಣವನ್ನು ಗಳಿಸುತ್ತವೆ. ಈ ತಂತ್ರಗಾರಿಕೆಯನ್ನು ಬಯಲು ಮಾಡುವ ಈ ಬೀದಿನಾಟಕವು ಕೆಲವೊಂದು ನಿರ್ದಿಷ್ಟ ಉದಾಹರಣೆಗಳನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಮೂಲಕ ಕ್ಯಾಶ್‌ಲೆಸ್ ವಹಿವಾಟಿನ ಹಿಂದಿರುವ ಮರ್ಮವನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ.

ನಗದು ಹಣ ಚಲಾವಣೆಯನ್ನು ಅದೆಷ್ಟೇ ಜನರು ಅದೆಷ್ಟೇ ಸಲ ಮಾಡಿದರೂ ಹಣದ ಮೌಲ್ಯ ಕಡಿಮೆಯಾಗಲು ಸಾಧ್ಯವಿಲ್ಲ. ಐನೂರು ರೂಪಾಯಿ ಹಣ ದಿನವೊಂದಕ್ಕೆ ಹತ್ತಾರು ಕೈಬದಲಾದರೂ ಅದರ ಬೆಲೆ ಐನೂರು ರೂಪಾಯಿಯಾಗಿಯೇ ಇರುತ್ತದೆ ಹಾಗೂ ಅನೇಕ ವಹಿವಾಟನ್ನು ಮಾಡುತ್ತದೆ. ಆದರೆ.. ಅದೇ ಐನೂರು ರೂಪಾಯಿ ಪ್ರತಿ ಸಲ ಪೇಟಿಯಂ ಮೂಲಕ ವ್ಯವಹಾರ ಮಾಡುವಾಗ ಕನಿಷ್ಠ ಶೇ. 2 ಸೇವಾ ತೆರಿಗೆಯನ್ನು ಆಯಾ ಕಂಪೆನಿಗಳು ಮುರಿದುಕೊಳ್ಳುವುದರಿಂದ ಆ ಐನೂರು ರೂಪಾಯಿಯ ಬೆಲೆ ನಾನೂರಾ ತೊಂಬತ್ತು ರೂಪಾಯಿಗಳಷ್ಟಾಗುತ್ತದೆ. ಹೀಗೆ ಆ ಹಣ ಅದೆಷ್ಟು ಸಲ ಕೈಬದಲಾಗಿ ವಹಿವಾಟು ಮಾಡುತ್ತದೋ ಅಷ್ಟೂ ಸಲ ಸರ್ವಿಸ್ ಟ್ಯಾಕ್ಸ್ ಹೆಸರಲ್ಲಿ ಹಣ ಕಡಿತಗೊಳ್ಳುತ್ತಾ ಸಾಗುತ್ತದೆ. ಹೀಗೆ ಮಾಡುವುದರಿಂದ ಗ್ರಾಹಕರಿಗಾಗಲಿ ಇಲ್ಲವೇ ವ್ಯಾಪಾರಿಗಳಿಗಾಗಲೀ ಯಾವುದೇ ಲಾಭವಿಲ್ಲದೆ ಪೇಟಿಯಂ, ಜಿಯೋನಂತಹ ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಲಾಭವಾಗುತ್ತದೆ. ಸರಕಾರದ ಕ್ಯಾಶ್‌ಲೆಸ್ ವ್ಯವಹಾರದ ಹಿಂದೆ ಬಂಡವಾಳಶಾಹಿ ಕಂಪೆನಿಗಳ ಹಿತರಕ್ಷಣೆ ಇರುವುದನ್ನು ಈ ‘ಕಾಸ್‌ಲೆಸ್’ ಬೀದಿನಾಟಕವು ಬಲು ಮಾರ್ಮಿಕವಾಗಿ ಹೇಳುತ್ತದೆ.

ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮವಾಗಿರುವ ಈ ಕ್ಯಾಶ್‌ಲೆಸ್ ವಹಿವಾಟಿನ ಕುರಿತು ನಾಟಕ ಮಾಡುವುದು ಸವಾಲಿನ ಕೆಲಸ. ಯಾಕೆಂದರೆ ನಿಜಾರ್ಥದಲ್ಲಿ ಕ್ಯಾಶ್‌ಲೆಸ್ ವ್ಯವಹಾರ ದೇಶದ ಆರ್ಥಿಕ ಬೆಳವಣಿಗೆಗೆ ಅಗತ್ಯವಿದೆ. ಆದರೆ ಅದರ ನಿರ್ವಹಣೆಯನ್ನು ಬಂಡವಾಳಶಾಹಿ ಕಂಪೆನಿಗಳಿಗೆ ವಹಿಸಿದ್ದರಿಂದ ಕೇವಲ ಕೆಲವು ಕಂಪೆನಿಗಳಿಗೆ ಮಾತ್ರ ಲಾಭವನ್ನು ತಂದುಕೊಡುತ್ತದೆ. ಇದು ಕೋಟ್ಯಂತರ ಜನರ ಬೆವರಿನ ಶ್ರಮವನ್ನು ಬಂಡವಾಳಿಗರು ಲೂಟಿ ಮಾಡಲು ಅವಕಾಶಮಾಡಿಕೊಟ್ಟಂತಾಗುತ್ತದೆ. ಇಂತಹ ಸಂದಿಗ್ಧ ವಿಷಯವನ್ನು ನವಿರಾದ ಹಾಸ್ಯದ ಮೂಲಕ ಬೀದಿನಾಟಕದಲ್ಲಿ ವಿಡಂಬನಾತ್ಮಕವಾಗಿ ನಿರೂಪಿಸಿ ತೋರಿಸುವಲ್ಲಿ ನಿರ್ದೇಶಕರಾದ ಶಶಿಕಾಂತ ಯಡಹಳ್ಳಿಯವರು ಯಶಸ್ವಿಯಾಗಿದ್ದಾರೆ. ಬೀದಿ ನಾಟಕವನ್ನು ಬೀದಿಯಲ್ಲಿ ಜನರ ನಡುವೆ ಮಾಡಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ಆದರೆ ಪ್ರೆಸ್‌ಕ್ಲಬ್ ವೇದಿಕೆಯ ಮೇಲೆ ಮಾಡಿದ್ದರಿಂದಾಗಿ ಅದು ಬೀದಿ ನಾಟಕದ ಸ್ವರೂಪಕ್ಕೆ ವ್ಯತಿರಿಕ್ತವೆನಿಸುವಂತಿತ್ತು.

ಆದರೂ.. ಬೀದಿನಾಟಕದ ತಂತ್ರಗಾರಿಕೆಯನ್ನು ಅರ್ಧ ಗಂಟೆಗಳ ಕಾಲ ನಾಟಕದಾದ್ಯಂತ ಬಳಸಲಾಗಿದೆ. ಸೆಟ್ ಪ್ರಾಪರ್ಟಿಗಳ ಹಂಗಿಲ್ಲದೇ ಕೇವಲ ಕಲಾವಿದರ ಅಭಿನಯವನ್ನೇ ಬಳಸಿಕೊಂಡು ಬಲು ಸೊಗಸಾಗಿ ನಾಟಕವನ್ನು ಕಟ್ಟಿಕೊಡಲಾಗಿದೆ. ಕೋರಸ್ ಬಳಕೆ ಈ ಬೀದಿನಾಟಕದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕಲಾವಿದರ ಪಾದರಸದಂತಹ ಚಲನೆ, ಬ್ಲಾಕಿಂಗ್ ಹಾಗೂ ಅಭಿನಯ ನೋಡುಗರನ್ನು ಸೆಳೆಯುವಂತಿದೆ ಹಾಗೂ ಪಂಚ್ ಡೈಲಾಗ್‌ಗಳು ಕೇಳುಗರಲ್ಲಿ ಕಚಗುಳಿ ಇಡುವಂತಿವೆ. ಪ್ರತಿಭಟನಾ ಮಾಧ್ಯಮವಾದ ಬೀದಿ ನಾಟಕಗಳು ಈಗ ಪ್ರಚಾರ ಮಾಧ್ಯಮಗಳಾಗುತ್ತಿರುವ ಜಾಗತೀಕರಣದ ಕಾಲಘಟ್ಟದಲ್ಲಿ ಮತ್ತೆ ವ್ಯವಸ್ಥೆಯ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆಯನ್ನು ತೋರುತ್ತಾ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸುತ್ತಿರುವ ಶಶಿಕಾಂತ ಯಡಹಳ್ಳಿ ಹಾಗೂ ಅವರ ಸೃಷ್ಟಿ ಸಂಸ್ಥೆ ಅಭಿನಂದನಾರ್ಹವಾಗಿದೆ.

share
ಜಗದೀಶ್ ಕೆಂಗನಾಳ, ಹೊಸಕೋಟೆ
ಜಗದೀಶ್ ಕೆಂಗನಾಳ, ಹೊಸಕೋಟೆ
Next Story
X