Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಡಾ.ಎಂ.ಎಂ. ಕಲಬುರ್ಗಿ ಎಂಬ ಬಯಲ ಬೆಳಕು

ಡಾ.ಎಂ.ಎಂ. ಕಲಬುರ್ಗಿ ಎಂಬ ಬಯಲ ಬೆಳಕು

ಡಾ. ಮೀನಾಕ್ಷಿ ಬಾಳಿಡಾ. ಮೀನಾಕ್ಷಿ ಬಾಳಿ29 Aug 2017 11:40 PM IST
share
ಡಾ.ಎಂ.ಎಂ. ಕಲಬುರ್ಗಿ ಎಂಬ ಬಯಲ ಬೆಳಕು

‘‘ಬಾಗಿದ ತಲೆ ಮುಗಿದ ಕೈಯಾಗಿರಿಸಯ್ಯ’’ ಎಂಬಂತೆ ಸರಳ ಸಜ್ಜನಿಕೆಯ ಮನುಷ್ಯರಾಗಿದ್ದ ಕಲಬುರ್ಗಿಯವರನ್ನು ಪಿಸ್ತೂಲು ಹಣೆಗೆ ಹಚ್ಚಿ, ಭ್ರೂಮಧ್ಯಕ್ಕೆ ಗುರಿಯಿಟ್ಟು ಹೊಡೆಯುವಷ್ಟು ಕ್ರೌರ್ಯವನ್ನು ಮೆರೆದಿದ್ದಾದರೂ ಏಕೆ? ಕಲಬುರ್ಗಿ ಉಗ್ರವಾದಿ ಹೋರಾಟಗಾರರಾಗಿದ್ದರೇ? ಇಲ್ಲ. ಅಥವಾ ಅಧಿಕಾರಕ್ಕಾಗಿ ಕುತಂತ್ರ ನಡೆಸಿದ ರಾಜಕಾರಣಿಯಾಗಿದ್ದರೇ? ಇಲ್ಲ. ಧನಸಂಪತ್ತು ಇತ್ಯಾದಿ ಭೌತಿಕ ದಾಹಕ್ಕಾಗಿ ಯಾರನ್ನಾದರೂ ಪೀಡಿಸಿದವರಾಗಿದ್ದರೇ? ಇಲ್ಲ. ಶಾಸನಗಳು, ಹಸ್ತಪ್ರತಿಗಳು, ಪುಸ್ತಕ, ಪೆನ್ನು, ವ್ಯಾಸಂಗ ಬಿಟ್ಟು ಒಂದಿಂಚೂ ಆಚೆ ಈಚೆ ಸುಳಿದಾಡಿರದ ಉದ್ದ ಮೂಗಿನ, ಸಪೂರ ದೇಹದ, ಹಿಡಿಯಷ್ಟು ಮಾಂಸಖಂಡ ಹೊಂದಿದ ಈ ಮನುಷ್ಯನನ್ನು ಬೆಳ್ಳಂಬೆಳಗಿನ ಜಾವದಲ್ಲಿ ಹಾಗೇ ಸುಮ್ಮನೆ ಪಿಕ್ನಿಕ್‌ಗೆ ಬಂದಷ್ಟು ಸರಳವಾಗಿ ಬಂದು ಹೊಡೆದು ಹೋದ ರಲ್ಲ! ಅದು ಹೇಗೆ ಸಾಧ್ಯವಾಯಿತು?

ಭಾರತವೆಂಬ ಭವ್ಯ ದೇಶದಲ್ಲಿ ಸತ್ಯ ಪ್ರತಿಪಾದನೆ ಮಾಡಿದ್ದಕ್ಕಾಗಿ ಪ್ರಾಣ ಕಳೆದುಕೊಂಡವರ ಪಟ್ಟಿಯೂ ದೊಡ್ಡದೆ ಇದೆ. ಪ್ರಾಚೀನ ಕಾಲದ ಮಾತಂತಿರಲಿ. ಸಂಪೂರ್ಣ ನಾಗರಿಕರಾಗಿದ್ದೇವೆ ಎಂಬ ಆಧುನಿಕ ಕಾಲಘಟ್ಟದ ಒಂದೇ ಶತಮಾನದ ಅವಧಿಯಲ್ಲಿ ಮೋಹನದಾಸ ಕರಮಚಂದ ಗಾಂಧಿಯಿಂದ ಕಾಮ್ರೇಡ್ ಗೋವಿಂದ ಪನ್ಸಾರೆ, ಡಾ. ನರೇಂದ್ರ ದಾಭೋಲ್ಕರ್, ಡಾ. ಮಲ್ಲಪ್ಪ ಮಡಿವಾಳಪ್ಪ ಕಲಬುರ್ಗಿವರೆಗೆ ನಾಲ್ಕು ಪ್ರಮುಖ ವಿಚಾರವಾದಿಗಳನ್ನು ಬಲಿತೆಗೆದುಕೊಂಡಾಗಿದೆ. ಗಾಂಧಿಯನ್ನು ಕೊಂದ ಮೂಲಭೂತವಾದಿ ಕರ್ಮಠರೇ ಉಳಿದ ಮೂವರನ್ನು ಹುತಾತ್ಮರಾಗಿಸಿದ್ದು ಕಾಕತಾಳೀಯವೇನಲ್ಲ. ಅಂದರೆ ಕ್ರಿ.ಶ. 1947ರಿಂದ 2015ರ ನಡುವಿನ ಕೇವಲ 68 ವರ್ಷಗಳಲ್ಲಿ ನಾಲ್ಕು ಬರ್ಬರಿಕ ಕೊಲೆಗಳು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ನರಭಕ್ಷಕ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾಗಿ ಜೀವತೆತ್ತ ಅಮಾಯಕರಿಗಂತೂ ಲೆಕ್ಕವೇ ಇಲ್ಲ. ಆದರೂ ಈ ದೇಶ ಮಹಾನ್ ಎಂದು ಗುಡುಗಲಾಗುತ್ತಿದೆ. ಈ ದೇಶದಲ್ಲಿ ತಮ್ಮ ವಿಚಾರಗಳನ್ನು ಒಪ್ಪದವರ ಬಲಿ ಪಡೆಯುವುದನ್ನು ದೇಶಭಕ್ತಿ, ಧರ್ಮಭೀರುತ್ವ ಎಂದು ಕರೆಯಲಾಗುತ್ತಿದೆ. ಅಂತೆಯೇ ಕಲಬುರ್ಗಿಯವರನ್ನು ಕೊಲೆ ಮಾಡಿದ ತಕ್ಷಣದಲ್ಲಿಯೇ ಸಿಹಿ ಹಂಚಿ ಸಂಭ್ರಮಿಸುವ ಲಜ್ಜೆಹೀನ ಸಂಸ್ಕೃತಿಯನ್ನು ಮೆರೆಯಲಾಗಿದೆ.

‘‘ಬಾಗಿದ ತಲೆ ಮುಗಿದ ಕೈಯಾಗಿರಿಸಯ್ಯ’’ ಎಂಬಂತೆ ಸರಳ ಸಜ್ಜನಿಕೆಯ ಮನುಷ್ಯರಾಗಿದ್ದ ಕಲಬುರ್ಗಿಯವರನ್ನು ಪಿಸ್ತೂಲು ಹಣೆಗೆ ಹಚ್ಚಿ, ಭ್ರೂಮಧ್ಯಕ್ಕೆ ಗುರಿಯಿಟ್ಟು ಹೊಡೆಯುವಷ್ಟು ಕ್ರೌರ್ಯವನ್ನು ಮೆರೆದಿದ್ದಾದರೂ ಏಕೆ? ಕಲಬುರ್ಗಿ ಉಗ್ರವಾದಿ ಹೋರಾಟಗಾರರಾಗಿದ್ದರೇ? ಇಲ್ಲ ಅಥವಾ ಅಧಿಕಾರಕ್ಕಾಗಿ ಕುತಂತ್ರ ನಡೆಸಿದ ರಾಜಕಾರಣಿಯಾಗಿದ್ದರೇ? ಇಲ್ಲ. ಧನಸಂಪತ್ತು ಇತ್ಯಾದಿ ಭೌತಿಕ ದಾಹಕ್ಕಾಗಿ ಯಾರನ್ನಾದರೂ ಪೀಡಿಸಿದವರಾಗಿದ್ದರೇ? ಇಲ್ಲ. ಶಾಸನಗಳು, ಹಸ್ತಪ್ರತಿಗಳು, ಪುಸ್ತಕ, ಪೆನ್ನು, ವ್ಯಾಸಂಗ ಬಿಟ್ಟು ಒಂದಿಂಚೂ ಆಚೆ ಈಚೆ ಸುಳಿದಾಡಿರದ ಉದ್ದ ಮೂಗಿನ, ಸಪೂರ ದೇಹದ, ಹಿಡಿಯಷ್ಟು ಮಾಂಸಖಂಡ ಹೊಂದಿದ ಈ ಮನುಷ್ಯನನ್ನು ಬೆಳ್ಳಂಬೆಳಗಿನ ಜಾವದಲ್ಲಿ ಹಾಗೇ ಸುಮ್ಮನೆ ಪಿಕ್ನಿಕ್‌ಗೆ ಬಂದಷ್ಟು ಸರಳವಾಗಿ ಬಂದು ಹೊಡೆದು ಹೋದರಲ್ಲ! ಅದು ಹೇಗೆ ಸಾಧ್ಯವಾಯಿತು? ಅಷ್ಟಕ್ಕೂ ಜೀವಮಾನದುದ್ದಕ್ಕೂ ಈ ಮನುಷ್ಯ ಮಾಡಿದ್ದಾದರೂ ಏನು? ಸಕಲ ಜೀವಾತ್ಮರಿಗೆ ಲೇಸು ಬಯಸುವ ಕೂಡಲ ಸಂಗನ ಶರಣರ ಕುಲಜರಾಗಿದ್ದ ಕಲಬುರ್ಗಿಯವರು ಅಖಂಡ ಜೀವಪರ ಚಿಂತಕರಾಗಿದ್ದರು. ಮಾನವ ವಿರೋಧಿ, ಸ್ವಾರ್ಥ, ಕುತಂತ್ರ ಮೆರೆಯುವ ಎಲ್ಲ ಬಗೆಯ ಸಿದ್ಧಾಂತ ಮತ್ತು ನಡೆಗಳನ್ನು ಅವರು ವೈಚಾರಿಕ ಹತ್ಯಾರುಗಳಿಂದಲೇ ಖಂಡಿಸಿದ್ದರು. ಕಲಬುರ್ಗಿಯವರ ಜೀವನ ಸಾಧನೆಯ ಒಂದು ಪಕ್ಷಿನೋಟವನ್ನು ಇಲ್ಲಿ ಕಾಣಬಹುದೇನೊ!

ಮಲ್ಲಪ್ಪ ಕಲಬುರ್ಗಿಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಪುಟ್ಟ ಹಳ್ಳಿ ಯರಗಲ್ ಎಂಬಲ್ಲಿ. ತಂದೆ ಮಡಿವಾಳಪ್ಪ, ತಾಯಿ ಗುರಮ್ಮ. ದಿನಾಂಕ 28-11-1938ರಂದು ತಾಯಿಯ ತವರು ಮನೆಯಾದ ಗುಬ್ಬೇವಾಡದಲ್ಲಿ ಹುಟ್ಟಿದ ಇವರು 1ನೆ ಇಯತ್ತೆಯಿಂದ 4ನೆ ಇಯತ್ತೆವರೆಗೆ ಯರಗಲ್‌ದಲ್ಲಿ ಓದಿದ ಅಪ್ಪಟ ದೇಶೀ ಪ್ರತಿಭೆ. ಪ್ರೌಢ ವಿದ್ಯಾಭ್ಯಾಸವನ್ನು ಸಿಂದಗಿಯಲ್ಲಿ ಮುಗಿಸಿದರೆ ವಿಜಾಪುರದ ವಿಜಯ ಮಹಾವಿದ್ಯಾನಿಲಯದಲ್ಲಿ ಪದವಿ ಪಡೆದುಕೊಂಡರು. ಹೆಚ್ಚಿನ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ತೆರಳಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ 1962ರಲ್ಲಿ ಕನ್ನಡ ಸಾಹಿತ್ಯದಲ್ಲಿ ಜಯಚಾಮರಾಜ ಒಡೆಯರ್ ಸ್ಮಾರಕ ಸುವರ್ಣ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದು ಕೊಂಡರು. ಎಂ.ಎ. ಪದವಿ ಪಡೆದ ದಿನದಿಂದಲೇ ಆಗಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಆರ್.ಸಿ. ಹಿರೇಮಠರ ಗರಡಿಯಲ್ಲಿ ಸೇರಿಕೊಂಡರು. ಕನ್ನಡ ಅಧ್ಯಯನ ಪೀಠದ ಸಮಗ್ರ ವಚನ ವಾಙ್ಮಯ ಸಂಶೋಧನೆ, ಸಂಸ್ಕರಣ ಮತ್ತು ಪ್ರಕಟನೆ ಯೋಜನೆಯಲ್ಲಿ ಸಹಾಯಕ ಸಂಶೋಧಕರಾಗಿ ಅಕ್ಷರದ ನೊಗ ಹೊತ್ತವರು ಕೊನೆ ಉಸಿರಿನವರೆಗೂ ನೊಗ ಬಿಚ್ಚಿರಲೇ ಇಲ್ಲ. 1962ರಿಂದ 1966ರವರೆಗೆ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಮುಂದೆ ಇವರ ಅಧ್ಯಯನ ಮತ್ತು ಅಧ್ಯಾಪನಾ ಆಸಕ್ತಿಯನ್ನು ಮನಗಂಡು 1966ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ, ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕ ರಾಗಿ ನೇಮಿಸಿಕೊಳ್ಳಲಾಯಿತು. 1968ರಲ್ಲಿ ತಮ್ಮ ಮೆಚ್ಚಿನ ಗುರುಗಳಾದ ಆರ್.ಸಿ. ಹಿರೇಮಠರ ಮಾರ್ಗದರ್ಶನದಲ್ಲಿ ‘‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’’ ಎಂಬ ವಿಷಯ ಕುರಿತು ಸಂಶೋಧನೆಗೈಯ್ದು ಮಹಾಪ್ರಬಂಧವನ್ನು ಮಂಡಿಸಿದರು. ಇವತ್ತಿಗೂ ಸಂಶೋಧನಾ ವ್ಯಾಸಂಗದಲ್ಲಿ ಅದೊಂದು ಮೈಲಿಗಲ್ಲಾಗಿದೆ. ಸಂಶೋಧನೆಯ ಶಿಸ್ತು, ವಿಚಕ್ಷಣ ದೃಷ್ಟಿಕೋನ, ವಸ್ತುನಿಷ್ಠತೆ, ನಿಖರತೆ ಮುಂತಾದ ಅಂಶಗಳಿಗೆ ಕಲಬುರ್ಗಿಯವರ ಈ ಕೃತಿಯು ಮಾದರಿಯಾಗಿದ್ದನ್ನು ವಿದ್ವಾಂಸರಾರೂ ಅಲ್ಲಗಳೆಯಲಾರರು.

ನಿರಂತರ ಓದು ಮತ್ತು ಅದಮ್ಯ ಉತ್ಸಾಹ ಇವೆರಡೂ ಇವರ ಚಹರೆಗಳಾಗಿದ್ದವು. ಓದಲು ಮತ್ತು ಬರೆಯಲೆಂದೇ ಹುಟ್ಟಿದ ಮನುಷ್ಯನೇನೊ ಎಂಬಷ್ಟು ಹಟದಲ್ಲಿ ಮುಂದು ವರಿದ ಇವರು ಬರೆದ ಪುಸ್ತಕಗಳ ಸಂಖ್ಯೆ 115. ಸುಮಾರು 700ಕ್ಕೂ ಹೆಚ್ಚು ಬಿಡಿಬರಹಗಳನ್ನು ಪ್ರಕಟಿಸಿದ್ದಾರೆ. ಇನ್ನೂ ಬರೆಯಬಹುದಾಗಿದ್ದ ಅವೆಷ್ಟು ಕೃತಿಗಳು ಅಂತರ್‌ಧ್ಯಾನದಲ್ಲಿ ಲೀನವಾದವೋ? ಗೊತ್ತಿಲ್ಲ. ಇವರ ಪ್ರಮುಖ ಆಸಕ್ತಿ ವಚನ ಸಾಹಿತ್ಯ ಮತ್ತು ಶಾಸನ ಸಾಹಿತ್ಯ. ತುಂಬು ಹರೆಯದಲ್ಲಿಯೆ 1968ರಲ್ಲಿ ‘ಶಾಸನಗಳಲ್ಲಿ ಶಿವಶರಣರು’ ಎಂಬ ಕೃತಿಯನ್ನು ಹೊರತಂದರು. ಇದು ಇವತ್ತಿಗೂ ಶಾಸನಗಳ ಮೂಲಕ ಐತಿಹಾಸಿಕ ತಥ್ಯಗಳನ್ನು ಅನ್ವೇಷಣೆ ಮಾಡುವ ವಿಧಾನಕ್ಕೆ ಮಾದರಿಯಾಗಿದೆ. ಅದೇ ಹೊತ್ತಿಗೆ 12ನೆ ಶತಮಾನದ ಶಿವಶರಣರ ಕುರಿತು ಚಾರಿತ್ರಿಕ ಸಂಗತಿಗಳನ್ನು ಕಂಡುಕೊಳ್ಳುವವರಿಗೆ ಆಕರವಾಗಿದೆ. ಆದ್ದರಿಂದ ಇದು ಶೋಧ ಮಾರ್ಗದ ಆಚಾರ್ಯ ಕೃತಿಯಾಗಿದೆ. 1974ರಲ್ಲಿ ‘‘ಶಾಸನ ವ್ಯಾಸಂಗ’’ ಕೃತಿ ಪ್ರಕಟಿಸಿ ಮುಂದೆ ಶಾಸನಗಳಲ್ಲಿ ಅಧ್ಯಯನ ಮಾಡುವವರಿಗೆ ಒಂದು ರಹದಾರಿಯನ್ನು ತೆರೆದು ತೋರಿಸಿದರು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯೂ ದಕ್ಕಿತು. ಸಂಪಾದನೆ ಇವರ ಇನ್ನೊಂದು ಆಸಕ್ತಿ ಕ್ಷೇತ್ರ. ದಣಿವರಿಯದ ಈ ಸಂಪಾದಕ ಪ್ರಾಚೀನ ಸಾಹಿತ್ಯದ 34 ಕೃತಿಗಳನ್ನು ಸಂಪಾದಿಸಿದರೆ ಆಧುನಿಕ ಸಾಹಿತ್ಯದ 10 ಕೃತಿಗಳನ್ನು ಸಂಪಾದಿಸಿದ್ದಾರೆ. ಕನ್ನಡ ಗ್ರಂಥ ಸಂಪಾದನೆಯನ್ನು ಒಂದು ಅಧ್ಯಯನ ಶಿಸ್ತಾಗಿ ಅಭಿವೃದ್ಧಿಪಡಿಸುವಲ್ಲಿ ಕಲಬುರ್ಗಿ ವಹಿಸಿದ ಶ್ರಮ ಮತ್ತು ಎಚ್ಚರ ಇವೆರಡೂ ಚರಿತ್ರಾರ್ಹ. 1972ರಲ್ಲಿ ಬರೆದ ‘ಕನ್ನಡ ಗ್ರಂಥ ಸಂಪಾದನ ಶಾಸ್ತ್ರ’ ಕೃತಿಯು ಸಂಪಾದನಾಕಾರರ ಕೈಪಿಡಿಯೇ ಆಗಿದೆ. ನಾಮವಿಜ್ಞಾನ ಕುರಿತು ಅವರಷ್ಟು ಸ್ವಾರಸ್ಯಪೂರ್ಣವಾಗಿ ಅಧ್ಯಯನ ಮಾಡಿದವರಿಲ್ಲ. ಅದರಲ್ಲೂ ಉತ್ತರ ಕರ್ನಾಟಕದ ಮನೆಯ ಹೆಸರುಗಳ (ಅಡ್ಡಹೆಸರು) ಬಗೆಗೆ ಪ್ರಥಮ ಬಾರಿಗೆ ತುಂಬಾ ಕುತೂಹಲವಾದ ಅಂಶಗಳನ್ನು ನಮೂದಿಸಿದ್ದಾರೆ. ಇದರ ಪ್ರತಿಫಲವೆಂಬಂತೆ ಅವರು ತಮಿಳುನಾಡಿನ ತಂಜಾವೂರಿನಲ್ಲಿ ನಡೆದ ಅಖಿಲ ಭಾರತ ನಾಮವಿಜ್ಞಾನ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು. ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲ ಜ್ಞಾನಶಾಖೆಗಳನ್ನು ಇವರು ಮುಟ್ಟಿ ವೌಲಿಕ ಕೊಡುಗೆ ಇತ್ತಿದ್ದಾರೆ. ವ್ಯಾಕರಣ, ಛಂದಸ್ಸು, ಭಾಷಾಶಾಸ್ತ್ರ, ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ರ, ಅಲಂಕಾರ ಶಾಸ್ತ್ರ, ಮೀಮಾಂಸೆ, ವಿಮರ್ಶೆ ಮುಂತಾದ ಹಲವು ಕ್ಷೇತ್ರಗಳ ಹರಹಿನಲ್ಲಿ ಈಜಾಡಿ ಜಯಿಸಬಲ್ಲವರಾಗಿದ್ದರು.

ಸಾಹಿತ್ಯ ಮತ್ತು ಇತಿಹಾಸದ ಅಂತರ್‌ಸಂಬಂಧವನ್ನು ಮೂರ್ತರೂಪದಲ್ಲಿ ಸಾಕಾರಗೊಳಿಸಿದ ಇವರು ಸಾಂಸ್ಕೃತಿಕ ಶೋಧವು ಜನಾಂಗ ಬದುಕಿನ ಭಾವಕೋಶದ ಶೋಧವೇ ಆಗಿರುತ್ತವೆ ಎಂಬುದನ್ನು ಎತ್ತಿ ತೋರಿಸಿದರು. ಕಲಬುರ್ಗಿ ಅವರ ಶೋಧಗಳು ಕನ್ನಡ ಸಾಹಿತ್ಯಕಷ್ಟೇ ಅಲ್ಲ, ಕನ್ನಡ ನಾಡು ನುಡಿಯ ಸಂಸ್ಕೃತಿಯ ಶೋಧಗಳಿಗೂ ಮಾದರಿಯಾಗಿವೆ. ಹೀಗೆಮದೆ 1991ರಲ್ಲಿ ಬಳ್ಳಾರಿಯ ಸೊಂಡೂರಿನಲ್ಲಿ ನಡೆದ ಇತಿಹಾಸ ಸಮ್ಮೇಳನದ ಅಧ್ಯಕ್ಷತೆಗೂ ಭಾಜನರಾಗಿದ್ದರು.

ಇವರು ಶಾಸನ ಕುರಿತು 10 ಕೃತಿಗಳು, ಸಂಶೋಧನೆಗೆ ಸಂಬಂಧಪಟ್ಟಂತೆ 17 ಕೃತಿಗಳು, ಶಾಸ್ತ್ರ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ 6 ಕೃತಿಗಳು ಮತ್ತು 50 ಸಂಪಾದಿತ ಕೃತಿಗಳು, 4 ಅಭಿನಂದನಾ ಗ್ರಂಥಗಳ ಸಂಪಾದನೆ, 14 ವಿವಿಧ ಸ್ಮರಣಿಕೆ, ಪತ್ರಿಕೆ ವಾಚಿಕೆ ವಿಚಾರ ಸಂಕಿರಣಗಳ ಸಂಪಾದಿತ ಕೃತಿಗಳನ್ನು ಹೊರ ತಂದಿದ್ದಾರೆ. 2 ಜಾನಪದ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಪಾರ ವಿದ್ವತ್ತು ಮತ್ತು ದನಿವರಿಯದ ಶ್ರಮವನ್ನು ಬಯಸುವ ಸಂಶೋಧನೆ, ಸಂಪಾದನೆ ಮುಂತಾದ ಶಾಸ್ತ್ರ ಶೋಧದಲ್ಲಿ ಇವರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡದ್ದರಿಂದ ಸೃಜನ ಸಾಹಿತ್ಯದತ್ತ ಹೊರಳಲು ಅವಕಾಶವೇ ಸಿಗಲಿಲ್ಲವೇನೋ? ಆದರೆ ಸಂಶೋಧನೆಯು ಸೃಜನದ ಅತ್ಯಂತಿಕ ಸ್ಥಿತಿಯೆಂಬುದನ್ನು ಕಲಬುರ್ಗಿ ಮಾಸ್ತರ್ ವಿದ್ವತ್ ಲೋಕಕ್ಕೆ ತೆರೆದು ತೋರಿಸಿದರು. ಅದಾಗ್ಯೂ ಕಲಬುರ್ಗಿಯೊಳಗಿನ ಕವಿ ಮನ ‘ಕೆಟ್ಟಿತ್ತು ಕಲ್ಯಾಣ’ ‘ಖರೇ ಖರೇ ಸಂಗ್ಯಾಬಾಳ್ಯ’ ಎಂಬ ಎರಡು ನಾಟಕಗಳನ್ನು ‘ನೀರು ನೀರಡಿಸಿತ್ತು’ ಎಂಬ ಕವನ ಸಂಕಲನವನ್ನು ಕನ್ನಡ ಸಾರಸತ್ವ ಲೋಕಕ್ಕೆ ನೀಡಿತು. ಈ ಮೂಲಕ ಕಲಬುರ್ಗಿ ತಾವೊಬ್ಬ ಸವ್ಯಸಾಚಿ ಎಂಬುದನ್ನು ಸಾಬೀತು ಪಡಿಸಿದರು. ಪ್ರಾಯಶಃ ವ್ಯಕ್ತಿಯೊಬ್ಬರ ಬದುಕಿನಲ್ಲಿ ಗರಿಷ್ಟ ಪ್ರಮಾಣದಲ್ಲಿ ಬರೆಯಬಹುದಾದದ್ದನ್ನು ಕಲಬುರ್ಗಿ ಬರೆದರು. ಆದರೆ ಅವರ ಕೃತಿಗಳು ಸಂಖ್ಯಾತ್ಮಕವಾಗಿ ಗಮನ ಸೆಳೆಯದೆ ಅವುಗಳ ಒಳಗಿನ ತಿರುಳು ಮತ್ತು ಸಾಹಿತ್ಯಕ ವೌಲ್ಯದಿಂದಾಗಿ ಗಮನ ಸೆಳೆಯುತ್ತವೆ. ಹಲವು ಕೃತಿಗಳನ್ನು ಬರೆದ ತೂಕದ ಸಾಹಿತಿಗಳು ಹಲವರಿರಬಹುದು. ಆದರೆ ಗಂಭೀರ ಶಾಸ್ತ್ರೀಯ ಅಧ್ಯಯನ ಕೈಕೊಂಡು ಕರಾರುವಕ್ಕಾದ ಫಲಿತಗಳನ್ನು ಕೊಡುವುದಿದೆಯಲ್ಲ ಅದಕ್ಕೆ ಕನ್ನಡದ ಮಹಾಕವಿ ‘ರನ್ನ’ ಹೇಳುವಂತೆ ಎಂಟೆರ್ದೆಯೆ ಬೇಕು. ಈ ಎದೆಗಾರಿಕೆಯಿಂದಾಗಿಯೇ ಕಲಬುರ್ಗಿಯವರು ಧರ್ಮಾಂಧರ ಮತ್ತು ಶಾಸ್ತ್ರಜಡರ ವಿರೋಧವನ್ನು, ಮಾರಣಾಂತಿಕ ಹಲ್ಲೆಗಳನ್ನು ಎದುರಿಸಬೇಕಾಯಿತು. ಎಂತಲೇ ಅವರು ತಮ್ಮ ಕೃತಿಯೊಂದರ ಪ್ರಸ್ತಾವನೆಯಲ್ಲಿ ‘‘ಭಾರತದಂಥ ಭಾವನಿಷ್ಠ ರಾಷ್ಟ್ರದಲ್ಲಿ ಸಂಶೋಧನೆ ಸರಳ ಹಾದಿಯಲ್ಲ. ಈ ರಾಷ್ಟ್ರದಲ್ಲಿ ಸಂಶೋಧಕ ಆಗಾಗ ಸಣ್ಣ ಸಣ್ಣ ಶಿಲುಬೆಗಳನ್ನು ಏರಬೇಕಾಗುತ್ತದೆ. ಭಾರತೀಯ ಸಂಶೋಧಕ ಅನೇಕ ಅಗ್ನಿ ಕುಂಡಗಳನ್ನು ದಾಟಬೇಕಾಗುತ್ತದೆ’’ ಎಂದು ಬರೆದರು. ಕಾರಣ ಕಲಬುರ್ಗಿಯವರು ವಚನಕಾರರಾದ ‘ನೀಲಾಂಬಿಕೆ’, ‘ಚೆನ್ನಬಸವಣ್ಣ’, ಬಸವಾದಿಗಳ ಕುರಿತು ಅನ್ವೇಷಿಸಿ ಬರೆದ ಕೆಲವು ಲೇಖನಗಳಿಂದಾಗಿ ವಿವಾದಕ್ಕೆ ಸಿಲುಕಿದ್ದರು. ಕರ್ಮಠ ಮಠೀಯವಾದಿಗಳಿಂದ ಕ್ರೂರ ದಬ್ಬಾಳಿಕೆ, ಪ್ರತಿರೋಧಕ್ಕೂ ಒಳಗಾಗಿದ್ದರು. ಆ ಸಂದರ್ಭದಲ್ಲಿ ಅವರು ಅನುಭವಿಸಿದ ನೋವು, ಆಘಾತಗಳು ಅಸದಳವಾಗಿದ್ದವು.

ಕಲಬುರ್ಗಿ ಅಧ್ಯಯನಶೀಲರಷ್ಟೇ ಅಲ್ಲ ಅವರೊಬ್ಬ ಸಮರ್ಥ ಸಂಘಟಕರೂ ಆಗಿದ್ದರೆಂಬುದಕ್ಕೆ ಅವರು ಕಟ್ಟಿ ಬೆಳೆಸಿದ ಸಾಹಿತ್ಯಕ, ಸಾಂಸ್ಕೃತಿಕ ಸಂಘಟನೆಗಳೇ ಸಾಕ್ಷಿಯಾಗಿವೆ. 1975ರಲ್ಲಿ ಗದಗ ತೋಂಟದಾರ್ಯ ಮಠದಲ್ಲಿ ‘ವೀರಶೈವ ಅಧ್ಯಯನ ಸಂಸ್ಥೆ’, 1991ರಲ್ಲಿ ನಾಗನೂರು ಮಠದಿಂದ ‘ವೀರಶೈವ ಅಧ್ಯಯನ ಅಕಾಡಮಿ’, ಅದೇ ವರ್ಷ ಶಿವಮೊಗ್ಗದ ಆನಂದ ಮಠದಿಂದ ‘ಮಲೆನಾಡ ವೀರಶೈವ ಅಧ್ಯಯನ ಸಂಸ್ಥೆ’, 1993ರಲ್ಲಿ ನಿಡಸೋಸಿ ಶಿವಲಿಂಗೇಶ್ವರ ಮಠದಿಂದ ‘ಶರಣ ಸಂಸ್ಕೃತಿ ಅಕಾಡಮಿ’, 1994ರಲ್ಲಿ ಸಿಂಧಗಿ ಸಾರಂಗ ಮಠದಿಂದ ‘ಪೂಜ್ಯ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ’, 1996ರಲ್ಲಿ ಕೊಡೆಕಲ್ ಮಠದಿಂದ ‘ಬಸವೇಶ್ವರ ಅಧ್ಯಯನ ಸಂಸ್ಥೆ’ - ಹೀಗೆ ಪುಂಖಾನುಪುಂಖವಾಗಿ ಸಂಸ್ಥೆಗಳನ್ನು ಸ್ಥಾಪಿಸಿ ಮಠಗಳಿಗೆ ಸಾಹಿತ್ಯಕ ವೌಲ್ಯವನ್ನು ತಂದುಕೊಟ್ಟರು. ಯಾವ್ಯಾವುದೋ ಅರ್ಥಹೀನ ಧಾರ್ಮಿಕ ಸಂಪ್ರದಾಯಗಳಲ್ಲಿ ಕಳೆದು ಹೋಗುತ್ತಿದ್ದ ಮಠ ಮತ್ತು ಮಠಾಧೀಶರನ್ನು ಪ್ರಗತಿಪರ ಧಾರೆಯತ್ತ ಹಿಡಿದು ತರುವ ಕೆಲಸವನ್ನು ಕಲಬುರ್ಗಿಯವರಷ್ಟು ಶ್ರದ್ಧೆಯಿಂದ ಮಾಡಿದ ಇನ್ನೊಬ್ಬ ಚಿಂತಕ ಇರಲಾರ. ಬಸವ ಪರಂಪರೆಯನ್ನು ಕರ್ಮಠರಿಂದ ಬಿಡಿಸಿ ಸೋಪಜ್ಞ ನೆಲೆಯಲ್ಲಿ ಅನುಗೊಳಿಸಿದ ಕಲಬುರ್ಗಿಯವರು ಕಾಲ ಕಳೆದಂತೆ ಪ್ರಖರ ವಿಚಾರವಾದಿಯಾಗಿ ಮಾಗತೊಡಗಿದ್ದರು. ಈ ಎಲ್ಲ ಸಂಸ್ಥೆಗಳಿಂದ ಪ್ರಕಟಿಸಿದ ಪುಸ್ತಕಗಳಿಗೆ ಲೆಕ್ಕವೇ ಇಲ್ಲ. ಅಪ್ರಕಟಿತ ಪ್ರಾಚೀನ ಸಾಹಿತ್ಯ ಮಾಲೆ, ಅಪ್ರಕಟಿತ ಪ್ರಾಚೀನ ದಾಖಲು ಸಾಹಿತ್ಯ ಮಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಾಗಿ ಸಿದ್ಧಪಡಿಸಿಕೊಟ್ಟ ಸಮಗ್ರ ವಚನ ಸಂಪುಟಗಳು, ಹಳಕಟ್ಟಿ ಪ್ರತಿಷ್ಠಾನದ ವತಿಯಿಂದ ಸಿದ್ಧಪಡಿಸಲಾದ ಹಳಕಟ್ಟಿ ಸಮಗ್ರ ಸಂಪುಟಗಳು, ಬಸವರಾಜ ಕಟ್ಟಿಮನಿ ಸಮಗ್ರ ಸಾಹಿತ್ಯ ಮಾಲೆ, ಆದಿಲ್‌ಶಾಹಿ ಅನುವಾದ ಸಂಪುಟಗಳು, ವಚನಗಳ ಅನುವಾದ ಯೋಜನೆ ಹೀಗೆ ಕೊನೆ ಇಲ್ಲದಷ್ಟು ಕೃತಿಗಳನ್ನು ಪ್ರಕಟಿಸಿದರು ಅಕ್ಷರದ ಬೇಸಾಯಗಾರರಾದ ಕಲಬುರ್ಗಿಯವರಿಗೆ ದಣಿವೆಂಬುದೇ ಇರಲಿಲ್ಲವೇನೋ

ಕಲಬುರ್ಗಿ ತಾವಷ್ಟೇ ಸಂಶೋಧಕರಾಗಿ ಬೆಳೆದವರಲ್ಲ. ತಮ್ಮ ಗರಡಿಯಲ್ಲಿ ಹತ್ತಾರು ಉತ್ತಮ ಸಂಶೋಧಕರನ್ನು ರೂಪಿಸಿದರು. ವಿದ್ಯಾರ್ಥಿಗಳ ಸಾಮರ್ಥ್ಯ ಗುರುತಿಸುವಲ್ಲಿ ಇವರನ್ನು ಮೀರಿಸಿದವರಿಲ್ಲ. ವಿದ್ಯಾರ್ಥಿಗಳು ಎಂ.ಎ. ಅಧ್ಯಯನ ಮಾಡುತ್ತಿರುವಾಗಲೇ ಯಾರ್ಯಾರಿಗೆ ಎಂಥ ವಿಷಯಗಳನ್ನು ಕೊಡಬೇಕೆಂಬುದನ್ನು ಅಂದಾಜು ಮಾಡಿಡುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ಬಂದ ಪ್ರಬಂಧಗಳ ಒಂದು ನೋಟವೇ ಸಾಕು ಅವರೆಂಥ ಗುಣಗ್ರಾಹಿಯಾಗಿದ್ದರು ಎಂಬುದರ ಮನವರಿಕೆ ಆಗದೇ ಇರದು. ‘ಶಾಸನಗಳಲ್ಲಿ ಕರ್ನಾಟಕದ ವರ್ತಕರು’, ‘ಶಾಸನಗಳಲ್ಲಿ ಸ್ತ್ರೀ ಸಮಾಜ’, ‘ಕೊಡೆಕಲ್ ಬಸವಣ್ಣ ಒಂದು ಅಧ್ಯಯನ’, ‘ಆರನೆ ವಿಕ್ರಮಾದಿತ್ಯನ ಕಾಲದ ಶಾಸನಗಳು’, ‘ತರ್ದವಾಡಿ ನಾಡು ಒಂದು ಅಧ್ಯಯನ’- ಇವೇ ಮುಂತಾದ ಪ್ರಬಂಧಗಳು ಅವರ ಮಾರ್ಗದರ್ಶನದಲ್ಲಿ ಹೊರಬಂದಿದ್ದು ಇವತ್ತಿಗೂ ವೌಲಿಕ ಕೃತಿಗಳಾಗಿ ನಿಂತಿವೆ. ಮಾರ್ಗದರ್ಶಕ ಪದವಿಗೆ ಮಾದರಿಯಾಗಿದ್ದವರು ಅವರು. ಅಂತೆಯೇ ಅವರ ವಿದ್ಯಾರ್ಥಿ ಬಳಗ ತುಂಬಾ ದೊಡ್ಡದು.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಅವರು ಮಾಡಿದ ಪುಸ್ತಕ ವ್ಯವಸಾಯವಂತೂ ಚರಿತ್ರಾರ್ಹವೆ ಹೌದು. ಮತಂಗನ ಬೃಹದ್ದೇಶಿಯಂಥ ಬೃಹತ್ ಕಾವ್ಯಗಳಿಂದ ಹಿಡಿದು ಎಲ್ಲ ಹಳಗನ್ನಡ ಪಠ್ಯಗಳನ್ನು ಸಂಪಾದಿಸಲು ಹಚ್ಚಿ ಪ್ರಕಟಿಸಿದ್ದು ಕನ್ನಡ ಸಾಹಿತ್ಯ ಲೋಕಕ್ಕೆ ಬಹು ದೊಡ್ಡ ಉಪಲಬ್ದಿಯೇ ಆಗಿದೆ. ‘‘ದೇಸಿಯೊಳ್ ಪುಗುವುದು ಪೊಕ್ಕು ಮಾರ್ಗದೋಳ್ ತಳ್ವುದು’’ ಎಂಬ ಪಂಪನ ಸಾಲೊಂದನ್ನು ಭರತ ವಾಕ್ಯವಾಗಿಸಿ ಅದಕ್ಕೊಂದು ಸಿದ್ಧಾಂತದ ಮೆರುಗನ್ನೇ ಕೊಟ್ಟರು. ಕಾಲಗರ್ಭದಲ್ಲಿ ಹೂತು ಹೋಗಬಹುದಾಗಿದ್ದ ಹಲವು ಅಮೂಲ್ಯ ಕೃತಿಗಳನ್ನು ಹುಡುಕಿಸಿ ಪ್ರಕಟಿಸಿ ಕನ್ನಡ ವಿಶ್ವವಿದ್ಯಾನಿಲಯವೊಂದು ಮಾಡಬೇಕಾದ ಕೆಲಸಗಳಿಗೆ ದಿಕ್ಸೂಚಿ ಒದಗಿಸಿದರು. ದೇಶೀ ಸಮ್ಮೇಳಗಳನ್ನು ನಡೆಸಿ ಜಾನಪದಕ್ಕೆ ವಿಶಾಲ ನೆಲೆ ಒದಗಿಸಿದರು. ಅವರ ಸಾಹಿತ್ಯ ಕೈಂಕರ್ಯಗಳನ್ನು ಆಲಕ್ಷಿಸುವುದು ಸಾಧ್ಯವೇ ಇರಲಿಲ್ಲ. ಹೀಗಾಗಿಯೇ ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳಿಗೂ ಲೆಕ್ಕವಿಲ್ಲ. ಕರ್ನಾಟಕ ಸಾಹಿತ್ಯ ಅಕಾಡಮಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಪಂಪ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ನಾಡೋಜ ಪ್ರಶಸ್ತಿ, ರಾಷ್ಟ್ರೀಯ ಬಸವ ಪುರಸ್ಕಾರ ಹೀಗೆ ಅವುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಕಲಬುರ್ಗಿಯವರು ಮಾತ್ರ ಈ ಎಲ್ಲ ಪುರಸ್ಕಾರ ಪ್ರಶಸ್ತಿಗಳನ್ನು ಮೀರಿ ಶುದ್ಧ ಅಧ್ಯಯನ ದಾಹಿಯಾಗಿಯೇ ಮುಂದುವರಿದಿದ್ದರು. ಶರಣರ ಕಾಯಕ ಪ್ರಜ್ಞೆಯೇ ಅವರಲ್ಲಿ ಘನೀಕೃತವಾಗಿತ್ತು.

ಶರಣರು ಮಾನವರಲ್ಲಿರುವ ಜಾತಿ ಭೆೇದಗಳನ್ನು ನಿರಾಕರಿಸಿ ಕ್ರಿಯಾಶಿಲತೆಗಳಲ್ಲಿ ಭಕ್ತ ಮತ್ತು ಭವಿಗಳೆಂಬ ಎರಡು ತಾತ್ವಿಕ ಕುಲಗಳನ್ನು (ಕೆಟಗೆರಿ) ಹೇಳುತ್ತಾರೆ.

ಇದೇ ಪರೀಕ್ಷೆಯಲ್ಲಿ ಕಲಬುರ್ಗಿಯವರು ಎರಡು ವರ್ಗಗಳನ್ನು ಗುರುತಿಸುತ್ತಾರೆ. ಒಂದು ಕೆಲಸ ಮಾಡುವವರ ಜಾತಿ. ಇನ್ನೊಂದು ಕೆಲಸ ಮಾಡದೇ ಇರುವವರ ಜಾತಿ. ‘‘ನಾನು ಕೆಲಸ ಮಾಡುವವರ ಪಕ್ಷಪಾತಿ’’ ಎಂದು ಪದೇಪದೇ ಹೇಳುತ್ತಿದ್ದರು. ಸಮಕಾಲೀನ ಕನ್ನಡದ ಸಂದರ್ಭದಲ್ಲಿ ಅವರಷ್ಟು ಜ್ಞಾನದಾಹಿಗಳಾಗಿದ್ದವರನ್ನು ಕಾಣಲಾರೆವು. ಕನ್ನಡ ಭಾಷೆ. ಸಂಸ್ಕೃತಿ ಮತ್ತು ಕನ್ನಡಿಗರ ಕುರಿತು ಅವರು ಹೇಳಿದ ಕೆಲವು ಸತ್ಯಗಳನ್ನು ಸಂಪ್ರದಾಯವಾದಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿರಲೇ ಇಲ್ಲ. ಕರ್ಮಠ ವೀರಶೈವ ಪಂಚಾಚಾರ್ಯರನ್ನು ಕುರಿತು ಹೇಳಿದ ಮಾತುಗಳು, ವಿಜಯನಗರದ ಅರಸರು ಕನ್ನಡ ಪರವಾಗಿರಲಿಲ್ಲ ಎಂಬ ಅಭಿಪ್ರಾಯಗಳು ಅಥವಾ ಮಧ್ವಾಚಾರ್ಯಾದಿ ಮುಂತಾದ ವೈದಿಕ ಆಚಾರ್ಯರನ್ನು ಕುರಿತು ಹೇಳಿದ ನಿಗಿನಿಗಿ ಸತ್ಯಗಳನ್ನು ರೂಢಿಗತ ಸಮಾಜ ಪರಾಂಬರಿಸಲು ಸಾಧ್ಯವೇ ಇರಲಿಲ್ಲ. ವೈದಿಕ ಸಾಹಿತ್ಯ ಮತ್ತು ತತ್ವಸಿದ್ಧಾಂತಗಳ ಮನುಷ್ಯ ವಿರೋಧಿ ನಿಲುವು ನೆಲೆಗಳನ್ನು ಅವರು ಯಾವ ಎಗ್ಗಿಲ್ಲದೆ ಬಟಾಬಯಲು ಗೊಳಿಸಿದರು. ಇದು ವರ್ತಮಾನದ ಸಾಂಸ್ಕೃತಿಕ ರಾಜಕಾರಣಕ್ಕೆ ಅಗರದ ತುತ್ತಾಗಿತ್ತು. ಮತೀಯವಾದಿಗಳು ಯಾವತ್ತೂ ವಿಚಾರಗಳಿಗೆ ಮಾತ್ರ ಹೆದರುತ್ತಾರೆ. ಹೌದು, ಕಲಬುರ್ಗಿಯವರ ಸತ್ಯದ ನಿಲುವುಗಳಿಂದ ವಿಚಲಿತರಾದ ಹೆಂಬೇಡಿಗಳು ವಿದ್ಯಾರ್ಥಿಗಳ ವೇಷದಲ್ಲಿ ಬಂದು ಗುಂಡಿಟ್ಟು ಕೊಂದರು. ಅವರು ವಿಚಾರ ಮಾಡುವ ಮೆದುಳಿಗೆ ಹೆದರಿಯೇ ಸರಿಯಾಗಿ ಹಣೆಗೆ ಹೊಡೆದರು. ಬಸವ ನಾಡಿನ ಕಪ್ಪು ಮಸಾರಿ ಮಣ್ಣಿನ ಬೆಳಕನ್ನು ಕೆಂಪು ಮಣ್ಣಿನ ಹೂ ಬನದಲ್ಲಿ ನಂದಿಸಲಾಯಿತು. ಧಾರವಾಡದ ಕೆಂಪು ಮಣ್ಣು ಎಂ.ಎಂ ಕಲಬುರ್ಗಿಯವರ ರುಧಿರ ಧಾರೆಯಿಂದ ಇನ್ನಷ್ಟು ಕೆಂಪಾಗಿದೆಯೇ? ಕೆಂಪು ಜೀವಪರ ಹೋರಾಟದ ಸಂಕೇತವಲ್ಲವೇ?.

ಆದರೆ ಹಂತಕರು ಕಲಬುರ್ಗಿಯವರ ಧ್ವನಿಯನ್ನು ಅಡಗಿಸಲಾಗದೆ ಹತಾಶರಾದಂತೆ ತೋರುತ್ತದೆ. ಎಂತಲೇ ಅವರು ತಮ್ಮ�

share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X