Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಅಂಗವೈಕಲ್ಯ ನನಗೆ ಅಡ್ಡಿಯಾಗಲಿಲ್ಲ: ಹಸನ್...

ಅಂಗವೈಕಲ್ಯ ನನಗೆ ಅಡ್ಡಿಯಾಗಲಿಲ್ಲ: ಹಸನ್ ಕುಂಞಿ

ಹಜ್ಯಾತ್ರೆ ಅನುಭವ

ವಾರ್ತಾಭಾರತಿವಾರ್ತಾಭಾರತಿ1 Sept 2017 12:14 AM IST
share
ಅಂಗವೈಕಲ್ಯ ನನಗೆ ಅಡ್ಡಿಯಾಗಲಿಲ್ಲ: ಹಸನ್ ಕುಂಞಿ

ನನ್ನದು ಕೃಷಿ ಕುಟುಂಬ. ಸಣ್ಣ ಪ್ರಾಯದಲ್ಲೇ ಕೃಷಿಯ ಜೊತೆ ನಂಟು ಬೆಳೆಸಿಕೊಂಡಿದ್ದೆ. ನನಗಾಗ 28 ವರ್ಷ ವಯಸ್ಸು. ತೆಂಗಿನಕಾಯಿ ಕೀಳಲೆಂದು ಮರ ಹತ್ತಿದ್ದೆ. ಆಕಸ್ಮಿಕವಾಗಿ ಮರದಿಂದ ಬಿದ್ದು ಒಂದು ಕಾಲಿನ ಬಲ ಕಳೆದುಕೊಂಡೆ. ನನ್ನ ಬದುಕು ಇಲ್ಲಿಗೆ ಮುಗಿಯಿತು ಅಂತ ಭಾವಿಸಿದ್ದೆ. ಆದರೆ, ಅಲ್ಲಾಹನ ಅನುಗ್ರಹದಿಂದ 2 ಬಾರಿ ಊರುಗೋಲಿನ ಸಹಾಯದಿಂದ ಹಜ್ ನಿರ್ವಹಿಸಿದ್ದು ಗೊತ್ತೇ ಆಗಲಿಲ್ಲ. ಇದು ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ನಡುಪದವು ಸಮೀಪದ ಮುಳ್ಳುಗುಡ್ಡೆಯ ಹಸನ್ ಕುಂಞಿ ಹಾಜಿಯ ಮಾತು.

62ರ ಹರೆಯದ ಹಸನ್ ಕುಂಞಿ ಹಾಜಿ 2009 ಮತ್ತು 2011ರಲ್ಲಿ ಹಜ್ ಯಾತ್ರೆ ಪೂರೈಸಿದ್ದಾರೆ. ಅದೂ ಊರುಗೋಲು ಬಳಸಿ. 2009ರಲ್ಲಿ ಹಸನ್ ಕುಂಞಿಯೊಂದಿಗೆ ಅವರ ಅಕ್ಕ ಮತ್ತು 2011ರಲ್ಲಿ ಅವರ ಪತ್ನಿ ಸಾಥ್ ನೀಡಿದ್ದರು. ತನ್ನ 28ರ ಹರೆಯದಲ್ಲಿ ಮರದಿಂದ ಬಿದ್ದು ಕಾಲಿನಲ್ಲಿ ಬಲ ಕಳೆದುಕೊಂಡ ಹಸನ್ ಕುಂಞಿ ಮದುವೆಯ ಸಂದರ್ಭವೂ ಊರುಗೋಲು ಬಳಸಿದ್ದರು. 6 ಮಕ್ಕಳ ತಂದೆಯಾಗಿರುವ ಹಸನ್ ಕುಂಞಿ ಹಾಜಿಗೆ ಈಗಲೂ ಊರುಗೋಲು ಆಸರೆಯಾಗಿದೆ. ಊರುಗೋಲು ಇಲ್ಲದೆ ಒಂದು ಕ್ಷಣವೂ ಅವರು ಅತ್ತಿಂದಿತ್ತ ನಡೆಯಲಾರರು. ಹೀಗಿರುವಾಗ 2009ರಲ್ಲಿ ಹಜ್ ಯಾತ್ರೆ ಮಾಡಲು ಸಂಕಲ್ಪಿಸಿದರು. ಆದರೆ ಹೆದರಿಕೆ ಆವರಿಸಿತ್ತು. ಕಾಲಲ್ಲಿ ಬಲವಿಲ್ಲದ ತಾನು ಹಜ್ ಯಾತ್ರೆ ಪೂರೈಸಬಲ್ಲನೇ ಎಂಬ ಆತಂಕ ಇತ್ತು. ಅಂತೂ ತನ್ನ ಕಾಲಲ್ಲಿ ಬಲ ಇಲ್ಲ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಹಜ್ ಕಮಿಟಿಯ ಮೂಲಕ ಯಾತ್ರೆ ಹೊರಟರು. 40 ದಿನಗಳ ಕಾಲವೂ ಅವರಿಗೆ ಅಲ್ಲಿ ಊರುಗೋಲು ಆಸರೆಯಾಗಿತ್ತು. ಬಳಿಕ 2011ರಲ್ಲೂ ಹಜ್ ಯಾತ್ರೆ ಪೂರೈಸಿದ್ದರು.

‘ನಾನು ಎರಡು ಬಾರಿ ಹಜ್ ಯಾತ್ರೆ ಹೇಗೆ ಪೂರೈಸಿದ್ದೇನೆ ಎಂದು ಈಗ ಯೋಚಿಸುವಾಗ ಆಶ್ಚರ್ಯವಾಗುತ್ತದೆ. ಯಾಕೆಂದರೆ ನನ್ನ ಕಾಲಿನ ಶಕ್ತಿ ಕುಂದಿತ್ತು. ಒಂದು ಹೆಜ್ಜೆ ಮುಂದಿಡಲೂ ಅಸಾಧ್ಯವಾಗಿತ್ತು. ಆದರೆ, ದೃಢ ಸಂಕಲ್ಪದಿಂದ ಯಾತ್ರೆ ಹೊರಟೆ. ಎಲ್ಲರ ದುಆ-ಆಶೀರ್ವಾದ, ಅಲ್ಲಾಹನ ಅನುಗ್ರಹದಿಂದ ಹಜ್ ಕರ್ಮ ಪೂರೈಸಿದ ತೃಪ್ತಿ ನನಗಿದೆ. ಆರ್ಥಿಕವಾಗಿ ವೃದ್ಧಿಗೊಂಡರೆ ಇದೇ ಊರುಗೋಲು ಬಳಸಿ ಇನ್ನ್ತೊಮ್ಮೆ ಹಜ್ ಯಾತ್ರೆ ಮಾಡುವ ಇಚ್ಛೆ ಇದೆ’ ಎಂದು ಹಸನ್‌ಕುಂಞಿ ಹಾಜಿ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X