Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ತಾಯಿಯನ್ನು ಹೆಗಲಲ್ಲಿ ಹೊತ್ತು ಹಜ್...

ತಾಯಿಯನ್ನು ಹೆಗಲಲ್ಲಿ ಹೊತ್ತು ಹಜ್ ನಿರ್ವಹಿಸಿದೆ: ಬಶೀರ್ ಬೆಂಗ್ರೆ

ಹಜ್ಯಾತ್ರೆ ಅನುಭವ

ವಾರ್ತಾಭಾರತಿವಾರ್ತಾಭಾರತಿ1 Sept 2017 12:28 AM IST
share
ತಾಯಿಯನ್ನು ಹೆಗಲಲ್ಲಿ ಹೊತ್ತು ಹಜ್ ನಿರ್ವಹಿಸಿದೆ: ಬಶೀರ್ ಬೆಂಗ್ರೆ

ಸುಮಾರು 21 ವರ್ಷದ ಹಿಂದೆ. ಅಂದರೆ ನನಗಾಗ 41 ವರ್ಷ ವಯಸ್ಸು. ಉಮ್ಮನಿಗೆ 64 ವರ್ಷ ವಯಸ್ಸು. ಎಳೆಯ ಪ್ರಾಯದಲ್ಲಿ ದುಡಿದ ಕಾರಣವೋ, ವಯೋಸಹಜವೋ ಅವರ ಕಾಲು ಶಕ್ತಿ ಕಳಕೊಂಡಿತ್ತು. ಅತ್ತಿಂದಿತ್ತ ನಡೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅದೊಂದು ದಿನ ನನ್ನ ಉಮ್ಮ ‘ಮೋನೇ... ಹಜ್‌ಗೆ ಹೋಗೋಣವೇ?’ ಎಂದು ಕೇಳಿದರು.

ಉಮ್ಮನ ಬಾಯಿಯಿಂದ ನಾನು ಈ ಮಾತನ್ನು ನಿರೀಕ್ಷಿಸಿರಲಿಲ್ಲ. ಯಾಕೆಂದರೆ ಅವರು ಅತ್ತಿಂದಿತ್ತ ಒಂದು ಹೆಜ್ಜೆ ಇಡುತ್ತಿರಲಿಲ್ಲ. ಹೀಗಿರುವಾಗ ಉಮ್ಮನ ಈ ಮಾತು ನನ್ನನ್ನು ಆಶ್ಚರ್ಯಚಕಿತಗೊಳಿಸಿತ್ತು. ಹಜ್ ಪೂರೈಸಿದ ಬಳಿಕವಾದರೂ ಆರೋಗ್ಯ ಸುಧಾರಿಸೀತು ಎಂಬ ಆಶಾಭಾವನೆಯಿಂದ ಕೇಳುತ್ತಾರೋ ಏನೋ ಎಂದು ಭಾವಿಸಿ ‘ಉಮ್ಮ... ನೀವು ಮಾನಸಿಕವಾಗಿ ಸಿದ್ಧರಾಗುವುದಾದರೆ ನಾನು ನಿಮ್ಮಾಡನೆ ಬರುವೆ. ನಿಮ್ಮ ಆಸೆ ನೆರವೇರಿಸಲು ನಾನು ಪ್ರಯತ್ನಿಸುವೆ’ ಎಂದೆ. ಅಷ್ಟೇ ಅಲ್ಲ. 1996ರಲ್ಲಿ ಖಾಸಗಿ ಹಜ್ ಟೂರ್ ಸಂಸ್ಥೆಯ ಮೂಲಕ ಉಮ್ಮನನ್ನು ಹೆಗಲ ಮೇಲೆ ಹೊತ್ತುಕೊಂಡೇ ಹಜ್ ಕರ್ಮ ಪೂರೈಸಿದೆ. ಆ ತೃಪ್ತಿ ನನಗೆ ಈಗಲೂ ಇದೆ.

ಇದು ಕಸಬಾ ಬೆಂಗರೆಯ ಹಾಜಿ ಮುಹಮ್ಮದ್ ಬಶೀರ್ ಅವರ ಮಾತು. ಬಶೀರ್‌ಗೆ ಈಗ 62ರ ಹರೆಯ. ಅವರ ಉಮ್ಮ ನಫೀಸಾರಿಗೆ 85 ವರ್ಷ ದಾಟಿದೆ. ವಯೋ ಸಹಜದಿಂದ ನಫೀಸಮ್ಮ ಈಗ ಹಾಸಿಗೆ ಹಿಡಿದಿದ್ದಾರೆ. ಬಶೀರ್ ಎಂದಿನಂತೆ ಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗರೆಯಿಂದ ಕಾರಿನಲ್ಲಿ ಬಜ್ಪೆಗೆ ಪ್ರಯಾಣ ಬೆಳೆಸಿ ಅಲ್ಲಿಂದ ವಿಮಾನದ ಮೂಲಕ ಮುಂಬೈಗೆ ಮತ್ತೆ ಅಲ್ಲಿಂದ ನೇರ ಮದೀನಾಕ್ಕೆ ತೆರಳಿದೆ. ಹೀಗೆ ಸುಮಾರು 35 ದಿನ ಉಮ್ಮನನ್ನು ಅಲ್ಲಿ ಹೆಗಲ ಮೇಲೆ ಹೊತ್ತುಕೊಂಡೇ ಹಜ್ ಕರ್ಮ ಪೂರೈಸಿದೆ. ತವಾಫ್ ಮಾಡುವಾಗಲೂ ನಾನು ಉಮ್ಮನನ್ನು ಹೆಗಲ ಮೇಲೆ ಹೊತ್ತುಕೊಂಡೆ. ಅಪರೂಪಕ್ಕೊಮ್ಮೆ ಗಾಲಿಚಕ್ರ ಬಳಸಿದ್ದು ಬಿಟ್ಟರೆ ಉಳಿದಂತೆ ನಾನು ಉಮ್ಮನಿಗೆ ಆಸರೆಯಾಗಿ ನಿಂತೆ. ಈ ಸಂದರ್ಭ ಅಲ್ಲಿದ್ದ ಊರಿನ ಗೆಳೆಯರ ಸಹಕಾರ ಮರೆಯಲು ಸಾಧ್ಯವಿಲ್ಲ.

ಉಮ್ಮನ ಹಿರಿಯ ಮಗನಾಗಿ ನಾನು ನನ್ನ ಕರ್ತವ್ಯ ಪೂರೈಸುವುದು ಅನಿವಾರ್ಯವಾಗಿತ್ತು. ಅಂದರೆ, ಆವರೆಗೂ ನಾನು ನನ್ನ ಬಟ್ಟೆಬರೆಯನ್ನು ಒಗೆದವನಲ್ಲ. ಆದರೆ, ಹಜ್ ಯಾತ್ರೆಯ ಸಂದರ್ಭ ನಾನು ಉಮ್ಮನ ಬಟ್ಟೆಬರೆಯನ್ನೂ ಒಗೆದೆ. ಅವರ ಎಲ್ಲಾ ಕಷ್ಟಗಳಿಗೆ ಸ್ಪಂದಿಸಿದೆ, ಸೇವಾ ಮನೋಭಾವದಿಂದ ಉಪಚರಿಸಿದೆ. ಮರಳಿ ಮನೆಗೆ ಬರುವಾಗಲೂ ಅಷ್ಟೆ, ಉಮ್ಮನನ್ನು ಹೆಗಲಿಗೇರಿಸಿಕೊಂಡೆ.

ಪವಿತ್ರ ಹಜ್ ಯಾತ್ರೆ ಪೂರೈಸಬೇಕು ಎಂಬ ಆಸೆ ನನಗೆ ಹಿಂದಿನಿಂದಲೂ ಇತ್ತು. ಆದರೆ, ಅದರೊಂದಿಗೆ ಆ ಪವಿತ್ರ ಭೂಮಿಯಲ್ಲಿ ಉಮ್ಮನ ಸೇವೆ ಮಾಡುವ ಸೌಭಾಗ್ಯ ಸಿಗಬಹುದು ಎಂದು ನಿರೀಕ್ಷಿಸಿರಲಿಲ್ಲ. ಆದರೆ ಅಲ್ಲಾಹು ಅವೆಲ್ಲವನ್ನೂ ನನಗೆ ಕರುಣಿಸಿದ. ಅದಕ್ಕಾಗಿ ನಾನು ಅಲ್ಲಾಹನಿಗೆ ಎಷ್ಟು ಕೃತಜ್ಞನಾದರೂ ಸಾಲದು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X